ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತೂ-ಇಂತೂ ಉಣಕಲ್ ಕೆರೆ ಸ್ವಚ್ಛತೆ ಆರಂಭ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜೂನ್, 11- ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿರುವ ಉಣಕಲ್ ಕೆರೆಯ ಸ್ವಚ್ಛತಾ ಕಾಮಗಾರಿ ಶನಿವಾರದಿಂದ ಆರಂಭವಾಗಿದೆ. ಕಳೆಗಳಿಂದ ತುಂಬಿಕೊಂಡಿದ್ದ ಉಣಕಲ್ ಕೆರೆಯು ಹುಲ್ಲುಗಾವಲಿನ ತರಹ ಕಾಣುತ್ತಿತ್ತು. ಇತ್ತೀಚೆಗಷ್ಟೇ ಈ ಕೆರೆಗೆ ಭೇಟಿ ನೀಡಿದ್ದ ಸಚಿವ ವಿನಯ ಕುಲಕರ್ಣಿ ಶೀಘ್ರ ಕೆರೆಯ ಸ್ವಚ್ಛತಾ ಕಾರ್ಯ ಆರಂಭಿಸುವುದಾಗಿ ಹೇಳಿದ್ದರು.

ಬೆಂಗಳೂರಿನ ಕ್ಲೀನ್ ಟೆಂಕ್ ಕಂಪನಿಗೆ ಕೆರೆ ಸ್ವಚ್ಛತಾ ಕಾಮಗಾರಿಯ ಟೆಂಡರ್ ನೀಡಲಾಗಿದೆ. ಸಂಪೂರ್ಣ ಕೆರೆಯಲ್ಲಿನ ಅಂತರಗಂಗೆಯನ್ನು ತೆಗೆದುಹಾಕಲು ಕನಿಷ್ಠ ಒಂದೂವರೆ ತಿಂಗಳು ಬೇಕಿದೆ.[ಮೂರೇ ಮೂರು ದಿನದಲ್ಲಿ ಹುಬ್ಬಳ್ಳಿ ಉಣಕಲ್ ಕೆರೆ ಸ್ವಚ್ಛ]

hubballi

ಭೂ ಸೇನಾ ನಿಗಮವು ಈ ಕೆರೆ ಸ್ವಚ್ಛತಾ ಕಾಮಗಾರಿಗೆ 15 ಲಕ್ಷ ರೂ. ಅನುದಾನ ನೀಡಿದೆ. ಟೆಂಡರ್ ನಮಗೆ ನೀಡಿದ್ದು ಆದಷ್ಟು ಬೇಗನೇ ಕೆರೆಯನ್ನು ಅಂತರಗಂಗೆ ಮುಕ್ತವಾಗಿಸಲಾಗುವುದು ಎಂದು ಕ್ಲೀನ್ ಟೆಕ್ ಕಂಪನಿಯ ಮಾರಾಟ ವ್ಯವಸ್ಥಾಪಕ ಉದಯ ಕುಲಕರ್ಣಿ ಹೇಳಿದ್ದಾರೆ.[ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ತಜ್ಞರ ಸಮಿತಿ]

ಕೆರೆಯನ್ನು ಎನ್ಜಿಓ ಗಳಿಗೆ ನಿರ್ವಹಣೆಗಾಗಿ ನೀಡಲು ಯೋಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ. ಪಾಲಿಕೆ ಆಯುಕ್ತ ನೂರಮನ್ಸೂರ, ಜಿಲ್ಲಾಧಿಕಾರಿ ರಾಜೇಂದ್ರ ಚೋಳಿನ್ ಮತ್ತಿತರರು ಕೆರೆ ಸ್ವಚ್ಛತಾ ಕಾಮಗಾರಿಯನ್ನು ಪರಿಶೀಲಿಸಿದರು.

English summary
Hubballi-Dharwad: After the visit of district in-charge minister Vinay Kulkarni Unkal Lake Cleaning work started on Saturday June 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X