Get Updates
Get notified of breaking news, exclusive insights, and must-see stories!

ಪಿಓಪಿ ಗಣಪತಿ ಮೂರ್ತಿ ತಯಾರಕರಿಗೆ ಶಾಕ್ ಕೊಟ್ಟ ಧಾರವಾಡ ಜಿಲ್ಲಾಡಳಿತ

ಹುಬ್ಬಳ್ಳಿ, ಆಗಸ್ಟ್‌, 26: ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಜಿಲ್ಲೆಯಲ್ಲಿ ನಿಷೇಧಿತ ಪಿಓಪಿ ಗಣಪತಿ ವಿಗ್ರಹಗಳ ದಾಸ್ತಾನು ಇರುವ ಕುರಿತು ಜಿಲ್ಲಾಡಳಿತಕ್ಕೆ ಸಾರ್ವಜನಿಕರಿಂದ ಮಾಹಿತಿ ಲಭಿಸಿದ್ದರಿಂದ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಅಶೋಕ ತೆಲಿ ನೇತೃತ್ವದ ಅಧಿಕಾರಿಗಳ ತಂಡವು ನಗರದ ವಿವಿಧ ವಿಗ್ರಹ ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್‌ ದಾಳಿ ಮಾಡಿ, ಪಿಓಪಿ ವಿಗ್ರಹ ಕುರಿತು ಪರಿಶೀಲಿಸಿತು.

ಧಾರವಾಡ ಸಿ.ಬಿ.ನಗರದ ಲಿಂಗಾಯತ ಭವನ ಪಕ್ಕದ ನಿರ್ಮಾಣ ಕಟ್ಟಡದಲ್ಲಿ ಮಂಜುನಾಥ ಬೆಳಗಾಂವಕರ ಅವರು ಮಾರಾಟಕ್ಕಾಗಿ ಸಂಗ್ರಹಿಸಿದ್ದ ಗಣಪತಿ ವಿಗ್ರಹಗಳ ದಾಸ್ತಾನು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಈ ವೇಳೆ ಬಹುತೇಕ ವಿಗ್ರಹಗಳು ಪಿಓಪಿ, ಮಣ್ಣು ಮಿಶ್ರಿತ ಪಿಓಪಿ, ಕೃತಕ ಬಣ್ಣ ಲೇಪಿತ, ಉಸುಕು ಮಿಶ್ರಿತ ಪಿಓಪಿ ಗಣಪತಿ ವಿಗ್ರಹಗಳು ಕಂಡುಬಂದವು. ಆದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ವಿಗ್ರಹಗಳ ಮಾದರಿ ವಸ್ತುಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಸಂಗ್ರಹಿಸಿದರು.

Ganesh Chaturthi 2023: Ganesh idols Made from POP are seiz in Many places of Dharwad

ನಂತರ ಪರಿಸರ ಭವನದ ಮುಂಭಾಗದ ಕಟ್ಟಡದ ನೆಲ ಮಹಡಿಯಲ್ಲಿ ಸಂಗ್ರಹಿಸಿದ್ದ ಪಿಓಪಿ ಗಣಪತಿ ವಿಗ್ರಹಗಳ ಕೇಂದ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳ ತಂಡ ಪರಿಶೀಲಿಸಿತು. ಇಲ್ಲಿದ್ದ ಶೇಕಡಾ 90ರಷ್ಟು ವಿಗ್ರಹಗಳು ಪಿಓಪಿ ವಿಗ್ರಹಗಳಾಗಿದ್ದರಿಂದ ತಕ್ಷಣ ಎಲ್ಲ ವಿಗ್ರಹಗಳನ್ನು ಜಪ್ತಿ ಮಾಡಲಾಯಿತು. ನಂತರ ಅವುಗಳನ್ನು ಸಾಮಾನ್ಯ ಕೇಂದ್ರಕ್ಕೆ ಸಾಗಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಎಸಿ ಅಶೋಕ್‌ ತೆಲಿ ಅವರು ಸೂಚಿಸಿದರು. ಮತ್ತು ಮಾರಾಟಗಾರನ ಮೇಲೆ ಕಾನೂನು ಕ್ರಮ ಜರುಗಿಸಲು ತನಿಖೆ ಕೈಗೊಂಡು ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಹೀಗೆ ನಗರ ವಿವಿಧ ಕಡೆಗಳಲ್ಲಿನ ಮಳಿಗೆಗಳಿಗೆ ಭೇಟಿ ನೀಡಿ ಪಿಓಪಿ ಗಣಪತಿ ವಿಗ್ರಹಗಳನ್ನು ಅಧಿಕಾರಿಗಳು ಸೀಜ್ ಮಾಡಿದರು. ನಂತರ ಉಪ ವಿಭಾಗಾಧಿಕಾರಿ ಅಶೋಕ್‌ ತೆಲಿ ಮಾತನಾಡಿ, 2016ರ ಕಾಯಿದೆ ಪ್ರಕಾರ ಪಿಒಪಿ ಗಣಪತಿ ಬ್ಯಾನ್ ಆಗಿದೆ. ಆದರೂ ಕೆಲವಡೆ ಪಿಒಪಿ ಬಂದಿವೆ ಅಂತಾ ಮಾಹಿತಿ ಇದೆ. ಈಗಾಗಲೇ ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ ಎಂದರು.

ಕೆಲವೆಡೆ ಪಿಒಪಿಯಿಂದ ತಯಾರಾದ ವಿಗ್ರಹಗಳು ಇರುವ ಮಾಹಿತಿಗಳು ಬರುತ್ತಿವೆ. ಅಧಿಕಾರಿಗಳ ತಂಡ ಖುದ್ದು ಪರಿಶೀಲನೆ ಮಾಡುತ್ತಿದೆ. ಪೊಲೀಸ್, ಪಾಲಿಕೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸಹಯೋಗದಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಜನರು ಸಹ ಜಾಗೃತರಾಗಿ ಪಿಒಪಿ ಗಣಪತಿ ವಿಗ್ರಹ ತೆಗೆದುಕೊಳ್ಳಬಾರದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಜಗದೀಶ ಐ.ಎಚ್. ಅವರು ಮಾತನಾಡಿ, ಮಣ್ಣಿನ ವಿಗ್ರಹ ಭಾರ ಇರುತ್ತವೆ. ಪಿಒಪಿ ಗಣಪತಿ ಭಾರ ಇರುವುದಿಲ್ಲ. ತೂಕದ ವ್ಯತ್ಯಾಸದಲ್ಲಿ ಗೊತ್ತಾಗುತ್ತದೆ. ಪಿಒಪಿ ಅಥವಾ ಮಣ್ಣಿನ ವಿಗ್ರಹ ಕುರಿತು ಸಂಶಯ ಬಂದಲ್ಲಿ ವಿಗ್ರಹವನ್ನು ಪರೀಕ್ಷೆ ಮಾಡಲು ಮಾಹಿತಿ ಪಡೆಯುತ್ತೇವೆ. ನಂತರ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿ ಸಂತೋಷ್‌ ಮಾತನಾಡಿ, ಪಿಒಪಿ ವಿಗ್ರಹಗಳ ಮಾರಾಟ, ಸಾಗಾಣಿಕೆ ಆಗದಂತೆ ಪಾಲಿಕೆಯ ಆಯುಕ್ತರ ನಿರ್ದೇಶನದಂತೆ ಅಧಿಕಾರಿ ಮತ್ತು ಸಿಬ್ಬಂದಿಯ ತಂಡಗಳನ್ನು ರಚಿಸಲಾಗಿದೆ. ಪಿಓಪಿ ವಿಗ್ರಹಗಳನ್ನು ಜಪ್ತಿ ಮಾಡಿ, ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ದಾಳಿ ವೇಳೆ ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಇದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+