'ದ್ರೌಪದಿಯನ್ನ 5 ಮಂದಿ 20 ಪೈಸೆಗೆ ಹಂಚಿಕೊಂಡಂತೆ ಹಂಚಿಕೊಳ್ಳುತ್ತಿದ್ದಾರೆ'
ಧಾರವಾಡ, ಜನವರಿ 02: ವಾಸ್ತವದಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ ನಿರಂತರ ಶೋಷಣೆ ಬಗ್ಗೆ ಗದಗ ತೋಂಟದಾರ್ಯ ಮಠದ ಡಾ ಸಿದ್ದಲಿಂಗ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡದ ಡಾ ಸಿದ್ದಲಿಂಗ ಸ್ವಾಮೀಜಿ, "ಹೆಣ್ಣುನ್ನ ಪೂಜಿಸುತ್ತೇವೆ, ಗೌರವಿಸುತ್ತೆವೆ. ಆದರೆ ವಾಸ್ತವದಲ್ಲಿ ಹೆಣ್ಣಿನ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾಭಾರತದಲ್ಲಿ ದ್ರೌಪದಿಯನ್ನ 5 ಮಂದಿ 20 ಪೈಸೆಗೆ ಹಂಚಿಕೊಂಡಂತೆ ಹಂಚಿಕೊಂಡಿದ್ದಾರೆ. ರಾಮಾಯಣದಲ್ಲೂ ಸೀತೆ ನೋವನ್ನು ಅನುಭವಿಸಿದ್ದಾಳೆ.
ಮಹಾಭಾರತ ರಾಮಾಯಣ ಕಾಲಕ್ಕಿಂತ ಹೆಚ್ಚು ನರಕವನ್ನ ಪೆಶ್ವೆಗಳ ಕಾಲದಲ್ಲಿ ಮಹಿಳೆಯರು ಅನುಭವಿಸಿದ್ದಾರೆ. ಆ ಕಾಲದಲ್ಲಿ ಮಹಿಳೆಯರನ್ನು ಜೀವಂತವಾಗಿ ಸುಡಲಾಗುತ್ತಿತ್ತು ಎಂದು ಹೇಳಿದರು.












Click it and Unblock the Notifications