3 ದಿನದ ಸಾಹಿತ್ಯ ಸಂಭ್ರಮಕ್ಕೆ ಧಾರವಾಡ ಸಜ್ಜು
ಧಾರವಾಡ, ಜ. 15 : ಕರ್ನಾಟಕ ವಿ.ವಿ ಆವರಣದ ಸುವರ್ಣ ಮಹೋತ್ಸವ ಭವನದಲ್ಲಿ ಜ.16 ರಿಂದ ಈ ಬಾರಿಯ ಧಾರವಾಡ ಸಾಹಿತ್ಯ ಸಂಭ್ರಮ ಆರಂಭವಾಗಲಿದೆ. ಜನವರಿ 16, 17 ಮತ್ತು 18 ರಂದು ನಗರದಲ್ಲಿ ಸಾಹಿತ್ಯದ ಕಂಪು ಪಸರಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ವಿಮರ್ಶಕ ಹಾಗೂ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ, ಸಾಹಿತ್ಯ ಸಂಭ್ರಮದ ಎರಡು ಆವೃತ್ತಿಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ 3ನೇ ಆವೃತ್ತಿಯನ್ನು ಅರ್ಥಪೂರ್ಣವಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಓದು, ಸಂವಾದ, ಚರ್ಚೆ, ಮಾತುಕತೆ, ಪ್ರಶ್ನೋತ್ತರಗಳು ಇರಲಿವೆ ಎಂದು ತಿಳಿಸಿದರು.[ಜನವರಿ 16ರಿಂದ ಧಾರವಾಡ ಸಾಹಿತ್ಯ ಸಂಭ್ರಮ]
83 ಗಣ್ಯರು, 200 ಸಾಹಿತಿಗಳು ಹಾಗೂ 370 ಪ್ರತಿನಿಧಿಗಳು ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಹಿತ್ಯ ಚರ್ಚೆಯಲ್ಲಿ ಜನಪದ ಗಾಯನ, ನಾಟಕ ಹಾಗೂ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿ.ಜಿ. ನರೇಂದ್ರ ಅವರ ವ್ಯಂಗ್ಯಚಿತ್ರ ಪ್ರದರ್ಶನ, ಕಂಸಾಳೆ, ಮಲೆ ಮಹದೇಶ್ವರ, ಮಂಟೆಸ್ವಾಮಿ ಹಾಗೂ ಬಿಳಿಗಿರಿರಂಗ ಕಾವ್ಯ ಗಾಯನ, ಪಂಡಿತ್ ಎಂ. ವೆಂಕಟೇಶಕುಮಾರ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಾ. ಚೆನ್ನವೀರ ಕಣವಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಎಂ.ಎಂ. ಕಲಬುರ್ಗಿ, ಹಾ.ವೆಂ. ಕಾಖಂಡಕಿ, ಡಾ. ಲೋಹಿತ ನಾಯ್ಕರ್, ಡಾ. ರಮಾಕಾಂತ ಜೋಶಿ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.[2014ರ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಘೋಷಣೆ]
ಒಗ್ಗರಣೆ
ಚಿತ್ರ
ಪ್ರದರ್ಶನ
ಸದಭಿರುಚಿಯ
ಸಿನಿಮಾ
'ಒಗ್ಗರಣೆ'
ಚಿತ್ರ
ಪ್ರದರ್ಶನ
ಸಹ
ಹಮ್ಮಿಕೊಳ್ಳಲಾಗಿದೆ.
ನಟ,
ನಿರ್ದೇಶಕ
ಪ್ರಕಾಶ್
ರೈ
ಮತ್ತು
ಗಿರೀಶ
ಕಾರ್ನಾಡ್
ಅವರ
ನಡುವೆ
'ಭಾಷೆ
ಮತ್ತು
ಅಭಿನಯ'
ಕುರಿತ
ಚರ್ಚೆ
ನಡೆಯಲಿದೆ
ಎಂದು
ತಿಳಿಸಿದರು.