ಹಿಂದಿನ ಸರ್ಕಾರ ಹಣ ಇಲ್ಲದಿದ್ದರೂ ಬಹಳ ಟೆಂಡರ್ ಕರೆದಿತ್ತು: ಸಚಿವ ಸಂತೋಷ್‌ ಲಾಡ್‌ ಹೀಗೆ ಹೇಳಿದ್ದೇಕೆ?

ಧಾರವಾಡ, ಅಕ್ಟೋಬರ್‌, 17: ಹಿಂದಿನ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿ ಇದ್ದಾಗ ಬಹಳಷ್ಟು ಯೋಜನೆಗಳಿಗೆ ಟೆಂಡರ್ ಕರೆದು ಅನುದಾನ ಕೊಡಲಿಲ್ಲ. ಆದ್ದರಿಂದ ಕಾಮಗಾರಿಗಳಿಗೆ ಈಗ ಹಣ ಕೊಡಲು ಆಗುತ್ತಿಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಹೇಳಿದರು‌.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಹಿಂದೆ ಇದ್ದ ಸರ್ಕಾರ ಯೋಜನೆಗಳಿಗೆ ಅನುದಾನ ನೀಡಲಿಲ್ಲ. ಹಿಂದಿನ ಸರ್ಕಾರದಲ್ಲಿ ಬಹಳಷ್ಟು ಟೆಂಡರ್ ಕರೆದು ಬಿಟ್ಟಿದ್ದರು. ಹಣ ಇಲ್ಲದೇ ಬಹಳ ಟೆಂಡರ್ ಕರೆದಿದ್ದರು. ಹೀಗಾಗಿ ತೊಂದರೆಯಾಗಿದೆ.

bjp-government-has-not-given-any-grant

ಈಗ ಮಹತ್ವದ ಕೆಲಸ ಯಾವುದಿದೆ ನೋಡಿ ಮಂಜೂರಿ ಮಾಡುತ್ತೇವೆ. ಹಿಂದಿನ ಸರ್ಕಾರದ ಯಡವಟ್ಟಿನಿಂದ ಅಭಿವೃದ್ಧಿ ಕೆಲಸಗಳ ಮಂಜೂರಿಗೆ ತೊಂದರೆಯಾಗಿದೆ ಆದ್ದರಿಂದ ಹಂತ ಹಂತವಾಗಿ ಮಂಜೂರಿ ಮಾಡುತ್ತಿದ್ದೇವೆ ಎಂದರು.

ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಹತ್ತು ವರ್ಷದಿಂದ ಕೇಂದ್ರದಲ್ಲಿ ಅವರೇ ಅಧಿಕಾರದಲ್ಲಿದ್ದಾರೆ. ಅವರು ಹೇಳುವ ಪ್ರಕಾರ ಕೇಂದ್ರ ಸರ್ಕಾರವೂ ಪೇಟಿಎಂ ಸರ್ಕಾರ ಅಲ್ವಾ? ಚುನಾವಣೆ ಬಂದಾಗ ರಾಜಕೀಯ ಆರೋಪ‌ ಮಾಡಿಯೇ ಮಾಡುತ್ತಾರೆ. ನೀರಾವರಿಗೆ ನಮ್ಮ ಸರ್ಕಾರ ಇದ್ದಾಗ 50 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಈ ಸಲ 60ರಿಂದ 70 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ ಎಂದರು.

ಇನ್ನೂ ಇದೇ ಸಮಯದಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಶಾಸಕರೊಂದಿಗೆ ಟ್ರಿಪ್ ಹೊರಟಿದ್ದ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರು ಪಕ್ಷದ ಸಂಘಟನೆಗಾಗಿ ಹೋಗಿರಬಹುದು. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಹೋಗಿರಬಹುದು ಎಂದು ಸಮಾಜಾಹಿಸಿದರು.

ಇನ್ನು ಭಾರತೀಯ ಜನತಾ ಪಕ್ಷದಿಂದ ಕತ್ತಲೆ ಭಾಗ್ಯ ಆರೋಪ‌ ವಿಚಾರ ಕುರಿತು ಮಾತನಾಡಿ, ಇಡೀ ಕರ್ನಾಟಕದಾದ್ಯಂತ ವಿದ್ಯುತ್ ಕೊರತೆ ವಾತಾವರಣ ಬದಲಾವಣೆಯಿಂದ ಆಗಿದೆ. ಸರ್ಕಾರ ಕಷ್ಟಬಿದ್ದು ಕರೆಂಟ್ ಕೊಡುತ್ತಿದೆ. ಮುಂದೆ ವಿದ್ಯುತ್‌ಚ್ಛಕ್ತಿ ಹೆಚ್ಚಾದಾಗ ಸರಿದೂಗಿಸುತ್ತೇವೆ ಎಂದು ಭರವಸೆ ನೀಡಿದರು. ‌

ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಬಂದ್ರೆ ಸ್ವಾಗತಿಸುವೆ

ಮತ್ತೊಂದೆಡೆ ಜೆಡಿಎಸ್ ರಾಜ್ಯಾಧ್ಯಕ್ಷ ಆಗಿರುವ ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುವೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಚಿತ್ರದುರ್ಗದಲ್ಲಿ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಬೆಂಬಲದ ವಿಚಾರದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಅದು ಅವರ ಪಕ್ಷದ ವಿಚಾರ. ಜೆಡಿಎಸ್ ಬಗ್ಗೆ ಕೇಳಿದರೆ ಹೇಗೆ ಹೇಳೋದು. ಆದರೆ ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಮಾಡುತ್ತೇನೆ, NDAಗೆ ಬೆಂಬಲ ಅಂತಾ ಹೇಳಿದ್ದಾರೆ ಅದನ್ನು ಸ್ವಾಗತ ಮಾಡುವೆ ಎಂದರು.

ಐಟಿ ದಾಳಿ ವೇಳೆ ಸಿಕ್ಕಿರುವ ಕೋಟಿ ಕೋಟಿ ಹಣ ವಿಚಾರದಲ್ಲಿ ಟೀಕಿಸುವ ಬಿಜೆಪಿಯವರಿಗೆ ಹೇಳೋಕೆ ಬೇರೆ ಏನಿದೆ. ಅವರ ಅವಧಿಯಲ್ಲಿ ಕಲೆಕ್ಷನ್ ಮಾಡೋದು ಅಭ್ಯಾಸ ಆಗಿದೆ. ಆರೋಪವನ್ನು ಸಾಬೀತು ಮಾಡ್ಬೇಕಲ್ವ, ಅದನ್ನು ಸಾಬೀತು ಮಾಡದೆ ಹಿಂಗೆ ಮಾತಾಡ್ತಾರೆ ಎಂದು ಬಿಜೆಪಿ ಆರೋಪಕ್ಕೆ ಟಾಂಗ್ ಕೊಟ್ಟರು.

ಇನ್ನು ಗ್ಯಾರಂಟಿ ನೋಡಿ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಯವರು ಹೇಳೋದು ಅಲ್ಲ, ಅದನ್ನು ಸಾಬೀತು ಮಾಡಬೇಕು ಎಂದು ಹೇಳಿದರು.

ಸಿಎಂ ಕಲೆಕ್ಷನ್ ಮಾಸ್ಟರ್ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಬಿಜೆಪಿಯವರಿಗೆ ಹೇಳೋಕೆ ಇನ್ನೇನಿದೆ? ಎಂದು ಪ್ರಶ್ನೆ ಹಾಕಿದರು. ಅವರ ಆಡಳಿತಾವಧಿಯಲ್ಲಿ ಕಲೆಕ್ಷನ್ ಮಾಡಿ ಅವರಿಗೆ ರೂಢಿ ಆಗಿದೆ. ಎಲ್ಲರೂ ಕೂಡ ಅವರಂತೆ ಅಂತಾ ತಿಳಿದಿದ್ದಾರೆ. ನಮ್ಮ ಉತ್ತಮ ಕೆಲಸ ನೋಡಿ ಬಿಜೆಪಿಯವರಿಗೆ ಸಹಿಸಕ್ಕೆ ಆಗುತ್ತಿಲ್ಲ ಎಂದು ಕಿಡಿಕಾರಿದರು.

ಪೊಲೀಸ್ ಕ್ಚಾಟ್ರಸ್ ವಾಸಮಾಡಲು ಯೋಗ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, 2015-2023ರವರೆಗೆ ಮನೆಗಳು ಘೋಷಣೆ ಆಗಿದ್ದವು. 2ಲಕ್ಷ 38 ಸಾವಿರ ಮನೆ ಘೋಷಣೆ ಮಾಡಲಾಗಿತ್ತು. ಸ್ಲಂ ಬೋರ್ಡಲ್ಲಿ 1ಲಕ್ಷ 80ಸಾವಿರದ 200‌ಮನೆ ಘೋಷಣೆ ಆಗಿದ್ದವು. ರಾಜೀವಗಾಂಧಿ ಯೋಜನೆಯಡಿ 50 ಸಾವಿರ ಮನೆ ಮಂಜೂರು ಮಾಡಲಾಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ 4 ವರ್ಷದಲ್ಲಿ ಒಂದು ಮನೆನೂ ಕೊಡುವುದಕ್ಕೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಎಎಚ್‌ಪಿ ಸ್ಕೀಂನಲ್ಲಿ ಒಂದು ಮನೆ ಕಟ್ಟುವುದಕ್ಕೆ 7 ಲಕ್ಷ ಖರ್ಚು ಆಗುತ್ತದೆ. ಕೇಂದ್ರ ಒಂದೂವರೆ ಲಕ್ಷ ರೂಪಾಯಿ ಕೊಡಬೇಕು. ರಾಜ್ಯ ಸರ್ಕಾರ ಜಿಎಂಗೆ 1ಲಕ್ಷ 20 ಸಾವಿರ, ಎಸ್‌ಸಿಗಳಿಗೆ 2 ಲಕ್ಷ ರೂಪಾಯಿ ಕೊಡುತ್ತಾರೆ ಎಂದರು. ಕೇಂದ್ರ ಜಿಎಸ್‌ಟಿ ಮೂಲಕ 1 ಲಕ್ಷ 30 ಸಾವಿರ ವಾಪಸ್ ಪಡೆಯುತ್ತಾರೆ. ಮುಂದೆ ಕೊಟ್ಟು ಹಿಂದಿಂದ ಕಿತ್ತುಕೊಳ್ಳುತ್ತಾರೆ. ಈಗಾಗಲೇ ಈ ವಿಚಾರವನ್ನು ನಮ್ಮ ಇಲಾಖೆ ಅಧಿಕಾರಿಗಳು ಸಿಎಂ ಹತ್ರ ಮಾತಾಡಿದ್ದಾರೆ ಎಂದರು.

ಇನ್ನು ಮುಂದೆ ಈ ಹಣ ಫಲಾನುಭವಿಗಳು ಕಟ್ಟಂಗಿಲ್ಲ. ಸರ್ಕಾರದಿಂದ ಇದನ್ನು ಕಟ್ಟುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಿಎಂ ಈ ಕುರಿತು ಒಂದು ವಾರ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+