ಹುಬ್ಬಳ್ಳಿಯಲ್ಲಿ ಯುವಕನಿಗೆ ಚಾಕು ಇರಿತ, ತಿಂಗಳಾಂತ್ಯಕ್ಕೆ 5ನೇ ಕೊಲೆ

ಹುಬ್ಬಳ್ಳಿ,ಮಾರ್ಚ್,31: ಯುವಕರ ನಡುವೆ ನಡೆದ ಸಣ್ಣ ವಾಗ್ವಾದ ದ್ವೇಷವಾಯ್ತು, ದ್ವೇಷವೂ ಕೊಲೆಯಲ್ಲಿ ಕೊನೆಯಾಗಿದೆ. ಈ ಘಟನೆಯು ನಗರದ ನಗರದ ಹೊಸೂರು ವೃತ್ತದ ಬಳಿ ನಡೆದಿದೆ. ಇದು ಒಂದೇ ತಿಂಗಳಲ್ಲಿ ನಡೆದ ಐದನೇ ಕೊಲೆಯಾಗಿದೆ.

ನಗರದ ಉಣಕಲ್ ಬಳಿಯ ಸಂತೆಬೈಲ್ ನಿವಾಸಿಯಾದ ಸಂತೋಷ ನರೋಟಿ (30) ಎಂಬಾತನೇ ಕೊಲೆಯಾದ ಯುವಕ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದ್ದು ಆರೋಪಿ ನವೀನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.[ಡ್ರೈವಿಂಗ್ ಕಲಿಸಿದ ಯುವಕನೇ ಸುಂದರಿಯ ಹಂತಕ]

ಘಟನೆಯ ವಿವರ:

ನಗರದ ಉಣಕಲ್ ಬಳಿಯ ಸಂತೆಬೈಲ್ ನಿವಾಸಿಯಾದ ಸಂತೋಷ ಮತ್ತು ಹೊಸೂರು ಪ್ರದೇಶದ ಗೋಪಿ ಪರಶುರಾಮ ವಡ್ಡರ ಎಂಬಾತನ ಗುಂಪಿನವರೊಂದಿಗೆ ಕಳೆದ ನಾಲ್ಕು ತಿಂಗಳ ಹಿಂದೆ ವಾಗ್ವಾದ ನಡೆದಿತ್ತು.

ಈ ಸಮಯದಲ್ಲಿ ಗೋಪಿ ಗುಂಪಿನಲ್ಲಿದ್ದ ನವೀನ ಎಂಬಾತನ ಸಹೋದರನಿಗೆ ಹೊಡೆತ ಬಿದ್ದಿತ್ತು. ಇದರಿಂದ ರೊಚ್ಚಿಗೆದ್ದಿದ್ದ ನವೀನ ಕೊಲೆಗೀಡಾದ ಸಂತೋಷನನ್ನು ಕಂಡಾಗಲೆಲ್ಲ ನಿನ್ನನ್ನು ಸಾಯಿಸುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದನು. [ಗಂಡನ ವಿಕೃತ ಕಾಮಕ್ಕೆ ಬೇಸತ್ತು ಮಕ್ಕಳನ್ನೇ ಕೊಂದ ತಾಯಿ!]

ಬುಧವಾರ ಸಂತೋಷ ಎಂದಿನಂತೆ ತನ್ನ ಆಟೋ ಚಲಾಯಿಸುತ್ತ ಹೊಸೂರು ಪ್ರದೇಶಕ್ಕೆ ಬರುತ್ತಿದ್ದಂತೆ ಸಾರ್ವಜನಿಕರ ಎದುರೇ ನವೀನ ಸಂತೋಷನಿಗೆ ಚಾಕುವಿನಿಂದ ಹೊಟ್ಟೆ, ಕುತ್ತಿಗೆಗೆ ಬಲವಾಗಿ ಇರಿದಿದ್ದಾನೆ. ಗಾಯಗೊಂಡ ಸಂತೋಷನನ್ನು ಕಿಮ್ಸ್ ಆಸ್ಪತ್ರೆಗೆ
ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.[ಮದುವೆಗೆ ಒಪ್ಪದ ತಂದೆ-ತಾಯಿಯನ್ನು ಕೊಲ್ಲಿಸಿದ ಮಗ]

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಕೊಲೆಯೊಂದಿಗೆ ಛೋಟಾ ಬಾಂಬೆ ಎಂದೇ ಖ್ಯಾತಿ ಹೊಂದಿದ ಹುಬ್ಬಳ್ಳಿಯಲ್ಲಿ ಐದನೇ ಕೊಲೆಯಾಗಿದೆ. ಈ ತಿಂಗಳಿನಲ್ಲಿ ಈ ಮೊದಲು ಹಾಡುಹಗಲೇ ನಾಲ್ಕು ಕೊಲೆಯಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+