ಎಂಎಂ ಕಲಬುರ್ಗಿ ಹತ್ಯೆಗೆ 1 ವರ್ಷ, ಆರೋಪಿ ಎಲ್ಲಿ?
ಧಾರವಾಡ, ಆಗಸ್ಟ್ 30 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಸರ್ಕಾರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಆದರೆ, ಇದುವರೆಗೂ ಆರೋಪಿಗಳ ಬಂಧನವಾಗಿಲ್ಲ.
2015ರ
ಆಗಸ್ಟ್
30ರಂದು
ಧಾರವಾಡದ
ಕಲ್ಯಾಣ
ನಗರದ
ನಿವಾಸದಲ್ಲಿ
ಎಂ.ಎಂ.ಕಲಬುರ್ಗಿ
ಅವರ
ಹತ್ಯೆ
ನಡೆದಿತ್ತು.
ಬೆಳಗ್ಗೆ
8.40ರ
ಸುಮಾರಿಗೆ
ಮನೆಗೆ
ಆಗಮಿಸಿದ್ದ
ಅಪರಿಚಿತರು
ಗುಂಡಿನ
ದಾಳಿ
ನಡೆಸಿ
ಕಲಬುರ್ಗಿ
ಅವರನ್ನು
ಹತ್ಯೆ
ಮಾಡಿದ್ದರು.[ಕಲಬುರ್ಗಿ
ಹತ್ಯೆ,
ಶೀಘ್ರದಲ್ಲೇ
ಆರೋಪಿಗಳ
ಬಂಧನ
:
ಸಿಎಂ]
ಮೊದಲು ಸ್ಥಳೀಯ ಪೊಲೀಸರು ಹತ್ಯೆಯ ತನಿಖೆ ಆರಂಭಿಸಿದರು. ನಂತರ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಮಂಗಳವಾರಕ್ಕೆ ಹತ್ಯೆ ನಡೆದು ಒಂದು ವರ್ಷ ಕಳೆದಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಸರ್ಕಾರ ಹೇಳಿಕೆ ನೀಡುತ್ತಿದೆ. ಆದರೆ, ಯಾವುದೇ ಆರೋಪಿಗಳ ಬಂಧನವಾಗಿಲ್ಲ.[ಎಂಎಂ ಕಲಬುರಗಿ ಬೆಂಬಲಿಸಿ ಟ್ವಿಟ್ಟರ್ ಅಭಿಯಾನ]
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆಯಾಗಿ ನಾಳೆಗೆ (ಆ.30)ಕ್ಕೆ ಒಂದು ವರ್ಷ. ಇನ್ನೂ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ, ಸಿಐಡಿ ಹಾಗೂ ಸಿಬಿಐ ಅಧಿಕಾರಗಳು ತನಿಖೆ ನಡೆಸುತ್ತಿದ್ದಾರೆ' ಎಂದು ಹೇಳಿದ್ದಾರೆ. [ಕಲ್ಲುಬಂಡೆಯಂತೆ ಕುಳಿತಿರುವ ಎಂಎಂ ಕಲಬುರ್ಗಿ ಹತ್ಯೆ ತನಿಖೆ]
ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯ ತನಿಖೆ ನಡೆಸುತ್ತಿರುವ ಸಿಬಿಐ ಡಾ.ವಿರೇಂದ್ರ ತಾವಡೆ ಎಂಬುವವರನ್ನು ಬಂಧಿಸಿದೆ. ಕಲಬುರ್ಗಿ, ದಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರನ್ನು ಒಂದೇ ಸಂಘಟನೆಯವರು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.