ಹರಿಹರ: ಉಕ್ಕಡಗಾತ್ರಿ ಅಜ್ಜಯ್ಯನ ಜಾತ್ರೆಗೆ ಬನ್ನಿ
ದಾವಣಗೆರೆ, ಫೆಬ್ರವರಿ 14: ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದ ಉಕ್ಕಡಗಾತ್ರಿಯ ಪವಾಡ ಪುರುಷ ಅಜ್ಜಯನ ಮಹಾಶಿವರಾತ್ರಿ ಮಹೋತ್ಸವ ನಾಳೆ(ಫೆಬ್ರವರಿ 15) ಆರಂಭವಾಗಲಿದೆ. ಒಂದು ವಾರ ಕಾಲಗಳ ವಿಜೃಂಭಣೆಯಿಂದ ಜರುಗಲಿದೆ.
ಕರಿಬಸವೇಶ್ವರ ಗದ್ದುಗೆಯ ಜಾತ್ರಾ ಮಹೋತ್ಸವ ಸಮಸ್ತ ಭಕ್ತಾದಿಗಳಿಗೆ ಭಕ್ತಿ ಪೂರ್ವಕ ಸುಸ್ವಾಗತವನ್ನು ಕೋರಲಾಗಿದೆ. ಉಕ್ಕಡಗಾತ್ರಿಯ ಶ್ರೀ ಕರಿಬಸವೇಶ್ವರ ಗದ್ದುಗೆಯ ಮಹಾ ಶಿವರಾತ್ರಿಯ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಶಾಲಿವಾಹನ ಶಕೆ 1938 ನೇ
"ಹೇವಿಳಂಬಿ ಸಂವತ್ಸರ" ಉತ್ತರಾಯಣ ಶಿಶಿರ ಋತು ಮಾಘ ಮಾಸ ಬಹುಳ ಶಿವರಾತ್ರಿ ಅಮಾವಾಸ್ಯೆಯಿಂದ ಫಾಲ್ಗುಣ ಶುದ್ಧ ಅಷ್ಟಮಿಯವರೆಗೆ ಜರುಗಲಿದೆ.
ಗದ್ದುಗೆಯ ಪೂಜೆ, ಜಾಗರಣೆ ಆಯೋಜಿಸಲಾಗಿದ್ದು, ಸಕಲ ಭಕ್ತಾದಿಗಳು ಉಕ್ಕಡಗಾತ್ರಿಯ ಅಜ್ಜಯ್ಯನ ಗದ್ದಿಗೆಯ ಮಹಾಶಿವರಾತ್ರಿಯ ರಥೋತ್ಸವಕ್ಕೆ ಆಗಮಿಸಿ ಚೈತನ್ಯ ಸ್ವರೂಪರು, ಸರ್ವ ಸಂಕಷ್ಟಗಳ ನಿವಾರಕರಾದ ಶ್ರೀ ಗುರು ಕರಿಬಸವೇಶ್ವರ ಗದ್ದುಗೆಯ ಕೃಪಾಶೀರ್ವಾದ ಪಡೆದು ಪುನೀತರಾಗಬೇಕಾಗಿ ಕೋರಿಕೆ.
ಕಾರ್ಯಕ್ರಮಗಳು
:
*
ದಿನಾಂಕ
:
15.02.2018ನೇ
ಗುರುವಾರ
:
ಬೆಳಿಗ್ಗೆ
8
ಗಂಟೆಗೆ
ಶ್ರೀ
ಕರಿಬಸವೇಶ್ವರ
ಗದ್ದುಗೆಯ
ಪೂಜೆ,
ಮತ್ತು
ನಂದಿ
ಧ್ವಜಾರೋಹಣ,
ಅಂದೇ
ರಾತ್ರಿ
ಜಾಗರಣೆ
ಮತ್ತು
ಭಜನೆ
ಹಾಗೂ
ಕೀರ್ತನೆ.
*
ದಿನಾಂಕ
:
16.02.2018ನೇ
ಶುಕ್ರವಾರ
:
ಬೆಳಿಗ್ಗೆ
8.00
ಗಂಟೆಗೆ
ಶ್ರೀ
ವೃಷಭಪುರಿ
ಸಂಸ್ಥಾನ
1108
ಜಗದ್ಗುರು
ಶ್ರೀ
ಶ್ರೀ
ಸಿದ್ಧರಾಮೇಶ್ವರ
ದೇಶೀಕೇಂದ್ರ
ಮಹಾಸ್ವಾಮಿಗಳು,
ನಂದಿಗುಡಿ,
ಇವರ
ಅಮೃತ
ಹಸ್ತದಿಂದ
ರಥೋತ್ಸವದ
ಮಹಾಪೂಜೆ
ನಂತರ
ಸಕಲ
ವೈಭವಗಳೊಂದಿಗೆ
ರಥೋತ್ಸವ
ಪ್ರಾರಂಭ.
*
ದಿನಾಂಕ
:
17.02.2018ನೇ
ಶನಿವಾರ
:
ಜವಳ,
ಹರಕೆ
ಮತ್ತು
ತುಲಾಭಾರ.
*
ದಿನಾಂಕ
:
18.02.2018ನೇ
ಭಾನುವಾರ
:
ಕಾಣಿಕೆ,
ಜವಳ,
ತುಲಾಭಾರ,
ಕುಸ್ತಿಗಳು.
*
ದಿನಾಂಕ
:
19.02.2018ನೇ
ಸೋಮವಾರ
:
ಕಾಣಿಕೆ
ಒಪ್ಪಿಸುವುದು
ಮತ್ತು
ಕುಸ್ತಿಗಳು.
*
ದಿನಾಂಕ
:
20.02.2018ನೇ
ಮಂಗಳವಾರ
:
ಪೂಜೆಯ
ನಂತರ
ಫಳಾರ
ಹಾಕಿಸುವುದು
*
ದಿನಾಂಕ
:21.02.2018ನೇ
ಬುಧವಾರ
:
ಬೆ.
10ಕ್ಕೆ
ಶ್ರೀ
ಸ್ವಾಮಿಯ
ಬೆಳ್ಳಿ
ರಥೋತ್ಸವ
ರಾತ್ರಿ
8ಕ್ಕೆ
ಅಜ್ಜಯ್ಯನ
ಪಾಲಿಕೋತ್ಸವ
*
ದಿನಾಂಕ
:
22.02.2018ನೇ
ಗುರುವಾರ
:
ಅಜ್ಜಯ್ಯನ
ಫಳಾರ
ಹಂಚುವುದು
ಎಂದು ಶ್ರೀಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಮಿಟಿ, ಊರ ಪ್ರಮುಖರು ಹಾಗೂ ಊರ ನಾಗರಿಕರು ಕೋರಿದ್ದಾರೆ.