ದಾವಣಗೆರೆ ಫಲಿತಾಂಶ: ಮತ್ತೆ ಅರಳಿದ ಕಮಲ, ಎರಡು ಅಚ್ಚರಿ ಸೋಲು
ಬೆಂಗಳೂರು, ಮೇ 17: ರಾಜ್ಯದ ಹೃದಯ ಭಾಗವಾಗಿರುವ ದಾವಣಗೆರೆ-ಕಾಟನ್ ಸಿಟಿ, ವಿದ್ಯಾನಗರಿ, ಮ್ಯಾಂಚೆಸ್ಟರ್ ಆಫ್ ಸೌಥ್ ಎಂದೆಲ್ಲ ಕರೆಸಿಕೊಳ್ಳುವ ಜಿಲ್ಲೆ.
ದಾವಣಗೆರೆ ಕರ್ನಾಟಕದ ರಾಜಧಾನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದರೂ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇನ್ನೂ ಕೇವಲ ಜಿಲ್ಲೆಯಾಗಿ ಉಳಿದಿದೆ.
ಲಿಂಗಾಯತ, ಬ್ರಾಹ್ಮಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕುರುಬರು, ಲಂಬಾಣಿಗಳು ಇಲ್ಲಿ ನಿರ್ಣಾಯಕವಾಗಿವೆ. ದಾವಣಗೆರೆಯು ಒಟ್ಟು ಏಳು ತಾಲೂಕುಗಳು ಮತ್ತು ಒಂದು ಮೀಸಲು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದೆ.2008ರ ಚುನಾವಣೆವರೆಗೂ ಹೆಚ್ಚು ಕೈ' ಹಿಡಿತದಲ್ಲಿದ್ದ ಜಿಲ್ಲೆಯಲ್ಲಿ ಸದ್ಯ ಕಮಲದ್ದೇ ಅಧಿಪತ್ಯ ನಡೆದಿತ್ತು.
2013ರ ಫಲಿತಾಂಶದಂತೆ ದಾವಣಗೆರೆ ಜಿಲ್ಲೆಯ 8 ಕ್ಷೇತ್ರಗಳ ಕಾಂಗ್ರೆಸ್ 7 ಹಾಗೂ ಜೆಡಿಎಸ್ 1 ರಲ್ಲಿ ಗಳಿಸಿತ್ತು. 2018ರಲ್ಲಿ ದಾವಣೆಗೆರೆಯಲ್ಲಿ ಬಿಜೆಪಿ ಭರ್ಜರಿ ಬೆಳೆ ತೆಗೆದಿದ್ದು, 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
ದಾವಣಗೆರೆ ಉತ್ತರದಲ್ಲಿ ಕಾಂಗ್ರೆಸ್ಸಿನ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ಬಿಜೆಪಿಯ ಎಸ್ ಎ ರವೀಂದ್ರನಾಥ್ ಅವರು ಸೋಲಿಸಿದರೆ, ಜೆ ಕರುಣಾಕರ ರೆಡ್ಡಿ ಹಾಗೂ ಎಂಪಿ ರೇಣುಕಾಚಾರ್ಯ ಕೂಡಾ ಗೆಲುವಿನ ನಗೆ ಬೀರಿದ್ದಾರೆ. ಆದರೆ, ಹರಿಹರದಲ್ಲಿ ಬಿಜೆಪಿಯ ಹರೀಶ್ ಸೋಲು ಕಂಡಿದ್ದಾರೆ.
ದಾವಣಗೆರೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:
ಕ್ಷೇತ್ರ | ಗೆದ್ದವರು | ಪಕ್ಷ | ಪಡೆದ ಮತಗಳು | ಸೋತವರು | ಪಕ್ಷ | ಪಡೆದ ಮತಗಳು |
ದಾವಣಗೆರೆ (ದಕ್ಷಿಣ) |
ಶಾಮನೂರು
ಶಿವಶಂಕರಪ್ಪ |
ಕಾಂಗ್ರೆಸ್ | 71369 |
ಯಶವಂತರಾವ್
ಜಾಧವ್ |
ಬಿಜೆಪಿ | 55485 |
ದಾವಣಗೆರೆ
(ಉತ್ತರ) |
ಎಸ್.ವಿ.ರವೀಂದ್ರನಾಥ್ | ಬಿಜೆಪಿ | 76540 |
ಎಸ್
ಎಸ್
ಮಲ್ಲಿಕಾರ್ಜುನ |
ಕಾಂಗ್ರೆಸ್ | 72469 |
ಜಗಳೂರು
(ಎಸ್
ಟಿ) |
ಎಸ್.ವಿ.ರಾಮಚಂದ್ರ |
ಬಿಜೆಪಿ | 78498 |
ಎಚ್.ಪಿ.ರಾಜೇಶ್ |
ಕಾಂಗ್ರೆಸ್ | 49727 |
ಹರಿಹರ |
ಎಸ್.ರಾಮಪ್ಪ |
ಕಾಂಗ್ರೆಸ್ | 64801 |
ಬಿಪಿ
ಹರೀಶ್ |
ಬಿಜೆಪಿ | 57541 |
ಮಾಯಕೊಂಡ
(ಮೀಸಲು) |
ಎನ್
ಲಿಂಗಣ್ಣ |
ಬಿಜೆಪಿ | 50556 |
ಕೆಎನ್
ಬಸವರಾಜ | ಕಾಂಗ್ರೆಸ್ | 44098 |
ಚನ್ನಗಿರಿ |
ಮಾಡಾಳು
ವಿರೂಪಾಕ್ಷಪ್ಪ | ಬಿಜೆಪಿ | 73794 |
ವಡ್ನಾಳ್
ರಾಜಣ್ಣ | ಕಾಂಗ್ರೆಸ್ | 48014 |
ಹೊನ್ನಾಳಿ |
ಎಂ.ಪಿ.ರೇಣುಕಾಚಾರ್ಯ | ಬಿಜೆಪಿ | 80624 |
ಡಿ.ಜಿ.ಶಾಂತನಗೌಡ | ಕಾಂಗ್ರೆಸ್ | 76391 |
ಹರಪನಹಳ್ಳಿ |
ಕರುಣಾಕರ
ರೆಡ್ಡಿ | ಬಿಜೆಪಿ |
67603 |
ಎಂ.ಪಿ.ರವೀಂದ್ರ | ಬಿಜೆಪಿ | 57956 |