SDRF ಅನುದಾನದಲ್ಲಿ ದಾವಣಗೆರೆಗೆ ಪ್ರತ್ಯೇಕ ಲ್ಯಾಬ್

ದಾವಣಗೆರೆ,

ಮೇ
05:
ಕೊರೊನಾ
ವೈರಸ್
ರೋಗ
ನಿಯಂತ್ರಣದಲ್ಲಿ
ದಾವಣಗೆರೆ
ಗ್ರೀನ್
ಝೋನ್‍ನಲ್ಲಿದೆ
ಎಂದು
ಘೋಷಣೆಯಾಗುವ
ಬೆನ್ನಲ್ಲೇ
ಕೊರೊನಾ
ಪಾಸಿಟಿವ್
ಪ್ರಕರಣಗಳು
ದಾಖಲಾಗಿ
ಇದೀಗ
ರೆಡ್
ಝೋನ್
ನತ್ತ
ಜಿಲ್ಲೆ
ಸಾಗುತ್ತಿರುವುದು
ಆಘಾತಕಾರಿ
ಸಂಗತಿಯಾಗಿದೆ.
ಜಿಲ್ಲಾಡಳಿತ,
ಪೊಲೀಸ್
ಇಲಾಖೆ,
ಆರೋಗ್ಯ
ಇಲಾಖೆಗಳು
ಕೊರೊನಾ
ನಿಯಂತ್ರಣ
ಮತ್ತು
ಲಾಕ್
ಡೌನ್
ಕಟ್ಟುನಿಟ್ಟಿನ
ಜಾರಿಗೆ
ಶ್ರಮ
ವಹಿಸುತ್ತಿದ್ದು
ಜಿಲ್ಲೆಯ
ಎಲ್ಲ
ಜನತೆ
ಸಹಕರಿಸಬೇಕೆಂದು
ಜಿಲ್ಲಾ
ಉಸ್ತುವಾರಿ
ಸಚಿವರಾದ
ಭೈರತಿ
ಬಸವರಾಜ
ಮನವಿ
ಮಾಡಿದರು.

Recommended Video

      ಡಿ ಸಿ‌ ಎಂ ಅಶ್ವತ್ಥ್ ನಾರಾಯಣ ಅವರ ಜೊತೆ ಒನ್ ಇಂಡಿಯಾ ಸಂದರ್ಶನ | C.N Ashwath Narayan | Karnataka
      id="toptextpromo">
      id='are-slot-1'
      class='oiad
      oi-axt
      oiadv'>

      ಇಂದು

      ಜಿಲ್ಲಾಡಳಿತ
      ಭವನದ
      ತುಂಗಭದ್ರ
      ಸಭಾಂಗಣದಲ್ಲಿ
      ಏರ್ಪಡಿಸಲಾಗಿದ್ದ
      ಪತ್ರಿಕಾಗೋಷ್ಠಿಯನ್ನು
      ಉದ್ದೇಶಿಸಿ
      ಮಾತನಾಡಿದ
      ಅವರು,
      ಜಿಲ್ಲೆಯಲ್ಲಿ
      32
      ಕೊರೊನಾ
      ಪಾಸಿಟಿವ್
      ಪ್ರಕರಣ
      ದಾಖಲಾಗಿದ್ದು,
      2
      ಪ್ರಕರಣ
      ಗುಣಮುಖರಾಗಿ
      ಆಸ್ಪತ್ರೆಯಿಂದ
      ಬಿಡುಗಡೆ
      ಹೊಂದಿದ್ದರೆ,
      2
      ಸಾವು
      ಸಂಭವಿಸಿದೆ.
      ಇನ್ನು
      28
      ಸಕ್ರಿಯ
      ಪ್ರಕರಣಗಳು
      ಜಿಲ್ಲಾ
      ಆಸ್ಪತ್ರೆಯಲ್ಲಿ
      ಚಿಕಿತ್ಸೆ
      ಪಡೆದುಕೊಳ್ಳುತ್ತಿದ್ದಾರೆ
      ಎಂದರು.

      id='are-slot-2'
      class='oiad
      oi-axt
      oiadv'>

      ಸಾರ್ವಜನಿಕರು ನಿಯಮಗಳನ್ನು ಪಾಲಿಸಬೇಕು

      ಸಾರ್ವಜನಿಕರು ನಿಯಮಗಳನ್ನು ಪಾಲಿಸಬೇಕು

      ""ದಾವಣಗೆರೆ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಾನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಗರದಲ್ಲಿ ಅಗತ್ಯ ವಸ್ತು ಮತ್ತು ಸೇವೆ ಹೊರತುಪಡಿಸಿ ಎಲ್ಲ ರೀತಿಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ಕಟ್ಟುನಿಟ್ಟಾಗಿ ಆದೇಶಿಸಿದ್ದೇನೆ ಎಂದು ತಿಳಿಸಿದರು.

      ಕೊರೊನಾ ಪಾಸಿಟಿವ್ ಇರುವ ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗುವುದು. ಇದಕ್ಕೆ ಜನರು ಸಹ ಸಹಕರಿಸಬೇಕು. ರಾಜ್ಯ ಸರ್ಕಾರ ಕೂಡಾ ಹಲವಾರು ಸೂಚನೆಗಳನ್ನು ನೀಡಿದ್ದು, ಜೊತೆಗೆ ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಸಾರ್ವಜನಿಕರು ಪಾಲಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು. ಅನಾವಶ್ಯಕವಾಗಿ ಓಡಾಡಬಾರದು'' ಎಂದು ವಿನಂತಿಸಿದರು.

      ಲ್ಯಾಬ್ ಅನುಮೋದನೆಗಾಗಿ ಆಯುಕ್ತರಿಗೆ ಕಡತ

      ಲ್ಯಾಬ್ ಅನುಮೋದನೆಗಾಗಿ ಆಯುಕ್ತರಿಗೆ ಕಡತ

      ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವೈರಸ್ ಪರೀಕ್ಷಾ ಲ್ಯಾಬ್ ಸ್ವಲ್ಪ ತಡವಾಗುತ್ತಿದೆ. ಕಾರಣ, ಕೇಂದ್ರ ಸರ್ಕಾರ ದಾವಣಗೆರೆ, ಹಾವೇರಿ, ಬಳ್ಳಾರಿ ಹೀಗೆ ಎರಡು ಮೂರು ಜಿಲ್ಲೆ ಸೇರಿಸಿ ಒಂದು ಲ್ಯಾಬ್ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಎಸ್‍ಡಿಆರ್ಎಫ್ ಅನುದಾನದಲ್ಲೇ ಜಿಲ್ಲೆಗೆ ಪ್ರತ್ಯೇಕವಾಗಿ ಒಂದು ಲ್ಯಾಬ್ ನ್ನು ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗುವುದು ಎಂದು ಕೇಂದ್ರಕ್ಕೆ ಮನವರಿಕೆ ಮಾಡಿ, ಲ್ಯಾಬ್ ನ ಕೆಲಸ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

      74 ಲಕ್ಷ ರುಪಾಯಿಯಲ್ಲಿ ಲ್ಯಾಬ್ ಯೋಜನೆ ತಯಾರಿಸಿದ್ದು, ಅನುಮೋದನೆಗಾಗಿ ಆಯುಕ್ತರಿಗೆ ಕಡತವನ್ನು ಕಳುಹಿಸಿಕೊಡಲಾಗಿದೆ. ಶೀಘ್ರದಲ್ಲಿ ಲ್ಯಾಬ್ ಕಾರ್ಯ ಆರಂಭಿಸಿ ಜಿಲ್ಲೆಗೆ ಒಂದು ಶಾಶ್ವತ ಲ್ಯಾಬ್ ಸಿದ್ದಪಡಿಸಲಾಗುವುದು ಎಂದರು.

      63 ಸಾವಿರ ಜನರನ್ನು ಕೊರೊನಾ ಹಿನ್ನೆಲೆ ಸಮೀಕ್ಷೆ

      63 ಸಾವಿರ ಜನರನ್ನು ಕೊರೊನಾ ಹಿನ್ನೆಲೆ ಸಮೀಕ್ಷೆ

      ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ನಗರದಿಂದ ಯಾರೂ ಹೊರ ಹೋಗಬಾರದು ಹಾಗೂ ನಗರದ ಒಳಕ್ಕೆ ಯಾರೂ ಹೊರಗಿನಿಂದ ಬರದಂತೆ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.

      ಪ್ರಸ್ತುತ ನಗರದಲ್ಲಿ 63 ಸಾವಿರ ಜನರನ್ನು ಕೊರೊನಾ ಹಿನ್ನೆಲೆ ಸಮೀಕ್ಷೆ ನಡೆಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸ್ತುತ 110 ಬೆಡ್ ಗಳು ಕೋವಿಡ್ ಚಿಕಿತ್ಸೆ ನೀಡಲು ಸಿದ್ದವಿದ್ದು, ಹೆಚ್ಚಿನ ಪ್ರಕರಣಗಳು ಕಂಡುಬಂದಲ್ಲಿ ಬಾಪೂಜಿ ಮತ್ತು ಹೈಟೆಕ್ ಆಸ್ಪತ್ರೆಗಳಲ್ಲಿ ಸಹ ಬೆಡ್ ಗಳನ್ನು ಕಾಯ್ದಿರಿಸಲಾಗಿದೆ ಎಂದರು.

      ಸಭೆಯಲ್ಲಿ ಜಿಲ್ಲಾಧಿಕಾರಿ ಭಾಗಿ

      ಸಭೆಯಲ್ಲಿ ಜಿಲ್ಲಾಧಿಕಾರಿ ಭಾಗಿ

      ಪ್ರಸ್ತುತ 800 ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು ಶೀಘ್ರದಲ್ಲೇ ಸೋಂಕಿನ ಮೂಲ ಪತ್ತೆ ಹಚ್ಚಲಾಗುವುದು ಎಂದು ಸಚಿವ ಭೈರತಿ ಬಸವರಾಜ ಹೇಳಿದರು.

      ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಜಿ.ಎಂ ಸಿದ್ದೇಶ್ವರ, ಶಾಸಕರಾದ ಎಸ್.ಎ ರವೀಂದ್ರನಾಥ, ಪ್ರೊ.ಲಿಂಗಣ್ಣ, ಜಿ.ಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಮೇಯರ್ ಬಿ.ಜಿ ಅಜಯಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಇತರೆ ಅಧಿಕಾರಿಗಳು ಇದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+