ದಾವಣಗೆರೆ: ಪೊಲೀಸ್ ಠಾಣೆಯಲ್ಲಿ ಕಷಾಯ ಸಿದ್ದಪಡಿಸುವ ಮಹಿಳಾ ಪಿಎಸ್ಐ
ದಾವಣಗೆರೆ, ಜುಲೈ 20: ಕೋವಿಡ್ ವಾರಿಯರ್ಸ್ ಗಳಾದ ಪೊಲೀಸರು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿನ ಆಜಾದ್ ನಗರ ಪೊಲೀಸ್ ಠಾಣೆ ಮಹಿಳಾ ಪಿಎಸ್ಐ ಶೈಲಜಾ ಸ್ವತಃ ದಿನಕ್ಕೆ ಎರಡು ಬಾರಿ ಶುಂಠಿ ಕಷಾಯ ತಯಾರಿಸಿ, ಸಿಬ್ಬಂದಿಗೆ ವಿತರಿಸುತ್ತಾರೆ.
Recommended Video
ದಾವಣಗೆರೆ ಜಿಲ್ಲೆಯಲ್ಲಿ ಪ್ರಥಮವಾಗಿ ಕೋವಿಡ್ ಪ್ರಕರಣ ಪತ್ತೆಯಾಗಿದ್ದು ಸಹ ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ನಂತರದ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕೆಲವು ಕಡೆ ಕಂಟೈನ್ಮೆಂಟ್ ಝೋನ್ ಸಹ ಇದ್ದವು.
ವಿವಾದಕ್ಕೂ ಮುನ್ನ ದಾವಣಗೆರೆ ನಗರದಲ್ಲಿ ವಾಸ್ತವ್ಯ ಹೂಡಿದ್ದ 'ಡ್ರೋನ್ ಪ್ರತಾಪ್'
ಕಂಟೈನ್ಮೆಂಟ್ ಝೋನ್, ಲಾಕ್ ಡೌನ್ ಕೆಲಸದ ಜೊತೆಗೆ ಪೊಲೀಸರು ಇತರೆ ಕೆಲಸ ನಿರ್ವಹಣೆ ಮಾಡಬೇಕಾಗುತ್ತಿದೆ. ಈ ಕಾರಣದಿಂದ ಪೊಲೀಸರಿಗೂ ಸಹ ಸೋಂಕು ದೃಢವಾಗಿತ್ತು.
ಸಮರ್ಥವಾಗಿ ಕರ್ತವ್ಯ ನಿರ್ವಹಣೆಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಅನುಕೂಲ ಆಗುವಂತೆ ಠಾಣೆಯಲ್ಲಿ ಕಷಾಯ ಸೇವನೆ ಪ್ರಾರಂಭಿಸಲಾಗಿದೆ. ಠಾಣೆಯಲ್ಲೇ ದಿನಕ್ಕೆ ಎರಡು ಬಾರಿ ಕಷಾಯ ಸಿದ್ದಪಡಿಸಿ, ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.