ಉತ್ಥಾನ ಪತ್ರಿಕೆ: ಅಂಬೇಡ್ಕರ್ 125’ ವಿಶೇಷ ಸಂಚಿಕೆ ಕೊಳ್ಳಿರಿ

ಚಿತ್ರದುರ್ಗ, ಏಪ್ರಿಲ್ 13: ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಇತ್ತೀಚೆಗೆ
ಉತ್ಥಾನ ಮಾಸಪತ್ರಿಕೆ ಹೊರತಂದಿರುವ 'ಡಾ|| ಬಾಬಾಸಾಹೇಬ ಅಂಬೇಡ್ಕರ್ 125' ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.

ಮಾದಾರ ಚನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿಯವರು ಹಾಗೂ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಉತ್ಥಾನ ಮಾಸಪತ್ರಿಕೆ ಹೊರತಂದಿರುವ 'ಡಾ|| ಬಾಬಾಸಾಹೇಬ ಅಂಬೇಡ್ಕರ್ 125' ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

Utthaana Magazine’s special issue on Dr BR Ambedkar released

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಮರಸ್ಯ ವೇದಿಕೆಯ ರಾಜ್ಯ ಸಂಚಾಲಕ ವಾದಿರಾಜ್ ಹಾಗೂ ಉತ್ಥಾನ ಮಾಸಪತ್ರಿಕೆಯ ವ್ಯವಸ್ಥಾಪಕ-ಸಂಪಾದಕ ನಾ. ದಿನೇಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.

ಡಾ|| ಅಂಬೇಡ್ಕರ್ ಅವರ ಬದುಕು-ಬರಹ-ಚಿಂತನೆ ಹಾಗೂ ಅವರ ಪ್ರೇರಣೆಯಿಂದ ನಡೆದ ವಿವಿಧ ಮುಖಗಳ ಚಟುವಟಿಕೆಗಳು, ವಿವಿಧ 'ವಾದ'ಗಳೊಂದಿಗೆ ಅಂಬೇಡ್ಕರ್ ಚಿಂತನೆಯ ಮುಖಾಮುಖಿ, ದಲಿತ ಸಮಾಜದ ನೋವು-ವಾಸ್ತವ ಹಾಗೂ ಮೀಸಲಾತಿಯ ಕುರಿತು ಉತ್ಥಾನ ಮಾಸಪತ್ರಿಕೆ ನಡೆಸಿರುವ ಸಮೀಕ್ಷೆ ಸೇರಿದಂತೆ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತ ಜೀವನದೃಷ್ಟಿಯ ವಿವಿಧ ಮುಖಗಳನ್ನು ಪರಿಚಯಿಸುವ ಸಮಗ್ರ ಬರಹಗಳನ್ನು ಈ ವಿಶೇಷ ಸಂಚಿಕೆಯಲ್ಲಿದೆ.

ವಿಶೇಷ ಸಂಚಿಕೆಯ ಬೆಲೆ: ರೂ. 50.00

ಪ್ರತಿಗಳಿಗಾಗಿ ಸಂಪರ್ಕಿಸಿ:

'ಉತ್ಥಾನ' ಮಾಸಪತ್ರಿಕೆ, ಕೆಂಪೇಗೌಡ ನಗರ, ಬೆಂಗಳೂರು - 560 019,
ದೂರವಾಣಿ: 98865 15648.

ಈ ಬಾರಿ ಏಪ್ರಿಲ್ 14ರಂದು ವಿಶ್ವದೆಲ್ಲೆಡೆ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. (ಮಾಹಿತಿ ಕೃಪೆ: ಸಂವಾದ.ಆರ್ಗ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+