ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ಥಾನ ಪತ್ರಿಕೆ: ಅಂಬೇಡ್ಕರ್ 125’ ವಿಶೇಷ ಸಂಚಿಕೆ ಕೊಳ್ಳಿರಿ

By Mahesh
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 13: ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಇತ್ತೀಚೆಗೆ
ಉತ್ಥಾನ ಮಾಸಪತ್ರಿಕೆ ಹೊರತಂದಿರುವ 'ಡಾ|| ಬಾಬಾಸಾಹೇಬ ಅಂಬೇಡ್ಕರ್ 125' ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.

ಮಾದಾರ ಚನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿಯವರು ಹಾಗೂ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಉತ್ಥಾನ ಮಾಸಪತ್ರಿಕೆ ಹೊರತಂದಿರುವ 'ಡಾ|| ಬಾಬಾಸಾಹೇಬ ಅಂಬೇಡ್ಕರ್ 125' ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

Utthaana Magazine’s special issue on Dr BR Ambedkar released

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಮರಸ್ಯ ವೇದಿಕೆಯ ರಾಜ್ಯ ಸಂಚಾಲಕ ವಾದಿರಾಜ್ ಹಾಗೂ ಉತ್ಥಾನ ಮಾಸಪತ್ರಿಕೆಯ ವ್ಯವಸ್ಥಾಪಕ-ಸಂಪಾದಕ ನಾ. ದಿನೇಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.

ಡಾ|| ಅಂಬೇಡ್ಕರ್ ಅವರ ಬದುಕು-ಬರಹ-ಚಿಂತನೆ ಹಾಗೂ ಅವರ ಪ್ರೇರಣೆಯಿಂದ ನಡೆದ ವಿವಿಧ ಮುಖಗಳ ಚಟುವಟಿಕೆಗಳು, ವಿವಿಧ 'ವಾದ'ಗಳೊಂದಿಗೆ ಅಂಬೇಡ್ಕರ್ ಚಿಂತನೆಯ ಮುಖಾಮುಖಿ, ದಲಿತ ಸಮಾಜದ ನೋವು-ವಾಸ್ತವ ಹಾಗೂ ಮೀಸಲಾತಿಯ ಕುರಿತು ಉತ್ಥಾನ ಮಾಸಪತ್ರಿಕೆ ನಡೆಸಿರುವ ಸಮೀಕ್ಷೆ ಸೇರಿದಂತೆ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತ ಜೀವನದೃಷ್ಟಿಯ ವಿವಿಧ ಮುಖಗಳನ್ನು ಪರಿಚಯಿಸುವ ಸಮಗ್ರ ಬರಹಗಳನ್ನು ಈ ವಿಶೇಷ ಸಂಚಿಕೆಯಲ್ಲಿದೆ.

ವಿಶೇಷ ಸಂಚಿಕೆಯ ಬೆಲೆ: ರೂ. 50.00

ಪ್ರತಿಗಳಿಗಾಗಿ ಸಂಪರ್ಕಿಸಿ:

'ಉತ್ಥಾನ' ಮಾಸಪತ್ರಿಕೆ, ಕೆಂಪೇಗೌಡ ನಗರ, ಬೆಂಗಳೂರು - 560 019,
ದೂರವಾಣಿ: 98865 15648.

ಈ ಬಾರಿ ಏಪ್ರಿಲ್ 14ರಂದು ವಿಶ್ವದೆಲ್ಲೆಡೆ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. (ಮಾಹಿತಿ ಕೃಪೆ: ಸಂವಾದ.ಆರ್ಗ್)

English summary
RSS inspired Kannada Monthly UTTHAANA’s special issue on Dr BR Ambedkar was released by Madara Chennayya Swamiji at Chitradurga, Karnataka. RSS Prant Prachar Pramukh Vadiraj, Rashtrotthana Parishat’s General Secretary Dinesh Hegde, others were present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X