ಅಕ್ರಮ ಅದಿರು ಸಾಗಾಟಕ್ಕೆ ಲಂಚ ಪಡೆದ ಚಿತ್ರದುರ್ಗ ಪೊಲೀಸ್ ಅಧಿಕಾರಿಗಳ ಅಮಾನತು
ಚಿತ್ರದುರ್ಗ, ಮೇ 02: ಕೋಟೆನಾಡು ಚಿತ್ರದುರ್ಗದಲ್ಲಿ ಅಕ್ರಮ ಅದಿರು ಸಾಗಾಟಕ್ಕೆ ಸಾಥ್ ನೀಡಿ ಲಂಚ ಪಡೆದು ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಗಳನ್ನು ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ.
Recommended Video
By-Election : BJP candidate MTB Nagaraj bribing money for vote | Oneindia Kannada
ಜಿಲ್ಲೆಯ ತುರುವನೂರು ಪೊಲೀಸ್ ಠಾಣೆ ಪಿಎಸ್ಐ ಯಶೋಧಮ್ಮ, ಎಎಸ್ಐ ಸುದರ್ಶನ್ ರೆಡ್ಡಿ, ಪೇದೆ ನಾಗರಾಜ್ ಹಾಗೂ ಮತ್ತೋರ್ವ ಪೇದೆ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ. ಅಕ್ರಮ ಅದಿರು ಸಾಗಾಟದ ಪ್ರಕರಣದಲ್ಲಿ ಲಂಚ ಪಡೆದ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಈ ಮೂಲಕ ಕಡಿವಾಣ ಬಿದ್ದಂತಾಗಿದ್ದು, ಇತರೆ ಅಧಿಕಾರಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಲಾಕ್ ಡೌನ್ ಜಾರಿ ಮುಂದುವರಿದ್ದು, ಇಂತಹ ಒತ್ತಡದಲ್ಲೂ ಜಿಲ್ಲಾ ವರಿಷ್ಠಾಧಿಕಾರಿ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications