ಮುರುಘಾ ಶ್ರೀಗಳ ಬಂಧನ ಖಂಡಿಸಿ ಶಿಷ್ಯ ತಿಪ್ಪೇರುದ್ರಸ್ವಾಮಿ ಆತ್ಮಹತ್ಯೆಗೆ ಯತ್ನ
ಚಿತ್ರದುರ್ಗ, ಸೆಪ್ಟೆಂಬರ್, 02: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮಲೆ ಮುರುಘಾ ಶರಣರನ್ನು ಬಂಧನವಾಗಿದೆ. ಶ್ರೀಗಳ ಬಂಧನದಿಂದ ಬೇಸತ್ತ ಶ್ರೀಗಳ ಶಿಷ್ಯ ಸ್ವಾಮೀಜಿಯೊಬ್ಬರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶ್ರೀಗಳ ಶಿಷ್ಯ ಹಾಗೂ ನಾಯಕನಹಟ್ಟಿ ಮಠದ ತಿಪ್ಪೇರುದ್ರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ಸ್ವಾಮೀಜಿ ಎಂದು ತಿಳಿದು ಬಂದಿದೆ. ಇನ್ನು ಸ್ಥಳದಲ್ಲೇ ಇದ್ದ ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ ತಿಪ್ಪೇರುದ್ರಸ್ವಾಮಿ ಅವರನ್ನು ರಕ್ಷಿಸಿದ್ದಾರೆ. ಈ ಹಿಂದೆ ಯೋಗವನ ಬೆಟ್ಟ ಮಠ ಪೀಠಾಧ್ಯಕ್ಷ ಸ್ಥಾನ ಕೈತಪ್ಪಿದೆ ಎನ್ನುವ ಕಾರಣಕ್ಕಾಗಿ ಸಾರಿಗೆ ಸಚಿವ ಶ್ರೀರಾಮುಲು ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿ ಹೈಡ್ರಾಮಾವನ್ನೇ ನಡೆಸಿದ್ದರು.
Breaking:ಮುರುಘಾ ಶರಣರನ್ನು 4 ದಿನ ಪೊಲೀಸ್ ಕಸ್ಟಡಿಗೆ ವಹಿಸಿದ ಕೋರ್ಟ್
ವಾರ್ಡನ್
ರಶ್ಮಿಗೆ
14
ದಿನಗಳ
ಕಾಲ
ನ್ಯಾಯಾಂಗ
ಬಂಧನ
ಇನ್ನು
ಮುರುಘಾ
ಮಠದ
ಶ್ರೀಗಳ
ಲೈಂಗಿಕ
ದೌರ್ಜನ್ಯ
ಪ್ರಕರಣದ
ಎರಡನೇ
ಆರೋಪಿ
ಆಗಿರುವ
ವಾರ್ಡನ್
ರಶ್ಮಿಗೆ
ಅವರಿಗೆ
14
ದಿನಗಳ
ನ್ಯಾಯಾಂಗ
ಬಂಧನ
ವಿಧಿಸಿ
ಕೋರ್ಟ್
ಆದೇಶ
ನೀಡಿದೆ.
ನಿರೀಕ್ಷಣಾ
ಜಾಮೀನು
ಅರ್ಜಿ
ವಿಚಾರಣೆ
ಕೈಗೆತ್ತಿಕೊಂಡ
ನ್ಯಾಯಾಲಯ
ವಿಚಾರಣೆ
ನಡೆಸಿದ
ಬಳಿಕ
ಚಿತ್ರದುರ್ಗ
ಎರಡನೇ
ಜಿಲ್ಲಾ
ಮತ್ತು
ಸತ್ರ
ನ್ಯಾಯಾಲಯದ
ನ್ಯಾಯಾಧೀಶೆ
ಕೋಮಲಾ
ಅವರು
ಈ
ಆದೇಶ
ಹೊರಡಿಸಿದ್ದಾರೆ.
ಚಿತ್ರದುರ್ಗ
ನಗರದಲ್ಲಿ
ಮಹಿಳಾ
ಕಾರಾಗೃಹ
ಇಲ್ಲದ
ಕಾರಣ
ಅವರನ್ನು
ಶಿವಮೊಗ್ಗ
ಜಿಲ್ಲೆಗೆ
ವರ್ಗಾವಣೆ
ಮಾಡಲಾಗುತ್ತಿದೆ.
ಕಣ್ಣೀರಿಟ್ಟ
ಮುರುಘಾ
ಶ್ರೀಗಳು
ಮುರುಘಾ
ಮಠದ
ಅಪ್ರಾಪ್ತ
ಬಾಲಕಿಯರಿಗೆ
ಮೇಲಿನ
ಲೈಂಗಿಕ
ದೌರ್ಜನ್ಯ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಶಿವಮೂರ್ತಿ
ಮುರುಘಾ
ಶರಣರನ್ನು
ಮ್ಯಾಜಿಸ್ಟ್ರೇಟ್
ಕೋರ್ಟ್
4
ದಿನಗಳ
ಕಾಲ
ಪೊಲೀಸ್
ಕಸ್ಟಡಿಗೆ
ನೀಡಿ
ಆದೇಶ
ಹೊರಡಿಸಿದೆ.
ಗುರುವಾರ
ರಾತ್ರಿ
ಮುರುಘಾ
ಶರಣರನ್ನು
ಬಂಧಿಸಿದ್ದ
ಪೊಲೀಸರು
ನ್ಯಾಯಾದೀಶರ
ಮುಂದೆ
ಹಾಜರುಪಡಿಸಿತ್ತು.
ನ್ಯಾಯಾದೀಶರು
14
ದಿನಗಳ
ಕಾಲ
ನ್ಯಾಯಾಂಗ
ಬಂಧನಕ್ಕೆ
ಒಪ್ಪಿಸಿತ್ತು.
ಇದೇ
ಸಂದರ್ಭದಲ್ಲಿ
ಚಿತ್ರದುರ್ಗ
ಪೊಲೀಸರು
ಹೆಚ್ಚಿನ
ವಿಚಾರಣೆಗಾಗಿ
ತಮ್ಮ
ಕಸ್ಟಡಿಗೆ
ನೀಡುವಂತೆ
ಕೇಳಿಕೊಂಡಿದ್ದರು.
ಆದರೆ ಶುಕ್ರವಾರ ಬೆಳಗ್ಗೆಯೇ ಶಿವಮೂರ್ತಿ ಮುರುಘಾ ಶರಣರೂ ಎದೆ ನೋವು ಎಂದು ಹೇಳಿದ ನಂತರ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಕೋರ್ಟ್ಗೆ ಸ್ವಾಮೀಜಿಯನ್ನು ಹಾಜರು ಪಡಿಸಲು ಕೋರ್ಟ್ ಸೂಚನೆ ನೀಡಿತ್ತು. ಆರೋಪಿ ಸ್ವಾಮೀಜಿ ಪರ ವಕೀಲರು ಆನಾರೋಗ್ಯದ ವಿಚಾರ ತಿಳಿಸಿದ್ದಾರೆ. ಆದರೆ ಕೋರ್ಟ್ಗೆ ಸೂಕ್ತ ವೈದ್ಯಕೀಯ ವರದಿ ಸಲ್ಲಿಕೆ ಮಾಡದ ಹಿನ್ನಲೆ ಕೋರ್ಟ್ ಪೊಲೀಸ್ ಮತ್ತು ಆರೋಪಿ ಪರ ವಕೀಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸ್ವಾಮೀಜಿಯನ್ನು ಕೋರ್ಟ್ಗೆ ಹಾಜರು ಪಡಿಸಲು ಆದೇಶಿಸಿತ್ತು. ನ್ಯಾಯಾದೀಶರ ಆದೇಶದ ನಂತರ ಶ್ರೀಗಳನ್ನು ನೇರವಾಗಿ ಐಸಿಯುನಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಬಿಗಿ ಭದ್ರತೆಯಲ್ಲಿ ಹಾಜರು ಪಡಿಸಿಲಾಗಿತ್ತು. ವಿಚಾರಣೆ ವೇಳೆ ಸ್ವಾಮೀಜಿ ಆರೋಗ್ಯದ ಬಗ್ಗೆ ಸೂಕ್ತ ವೈದ್ಯಕೀಯ ವರದಿಗಳನ್ನು ಕೋರ್ಟ್ಗೆ ವಕೀಲರು ನೀಡದ ಹಿನ್ನೆಲೆಯಲ್ಲಿ ನ್ಯಾಯಾದೀಶರು ಆರೋಪಿ ಸ್ವಾಮೀಜಿ ಅವರನ್ನು 4 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಸೂಚನೆ ನೀಡಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777