Murugha Shree Bail : ಮುರುಘಾ ಶ್ರೀಗಳ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಜಾ
ಚಿತ್ರದುರ್ಗ, ಡಿಸೆಂಬರ್, 01: ಮುರುಘಾ ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುರುಘಾ ಶರಣರ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಜಾಗೊಂಡಿದೆ. ಇನ್ನು ಪ್ರಕರಣದ ಜಾಮೀನು ಅರ್ಜಿಯನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ವಜಾ ಮಾಡಿದ್ದಾರೆ. ಇದರಿಂದ ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಬಂಧನವಾಗಿರುವ ಶ್ರೀಗಳಿಗೆ ಎರಡನೇ ಪೋಕ್ಸೋದಲ್ಲಿಯೂ ಕೂಡ ಜೈಲುವಾಸ ಮುಂದುವರೆದಿದೆ.
ಎರಡನೇ ಪ್ರಕರಣದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿರುವ ಬಾಲಕಿಯರ ತಾಯಿ ಒಡನಾಡಿ ಸಂಸ್ಥೆ ಮೊರೆ ಹೋಗಿದ್ದರು. ಈ ದೂರಿನ ಅನ್ವಯ ಮುರುಘಾಶ್ರೀಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು. ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆಯೂ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿದ್ದು, ನವೆಂಬರ್ 14 ರಂದು ಮೈಸೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ನ್ಯಾಯಾಂಗ ಬಂಧನದಲ್ಲಿರುವ ಬಸವರಾಜನ್ ಹೆಸರಿನಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಕೆ
ಎಸ್.ಕೆ.
ಬಸವರಾಜನ್
ಹೆಸರಿನಲ್ಲಿ
ಅರ್ಜಿ
ಸಲ್ಲಿಕೆ
ಮುಂಬರುವ
2023ರ
ವಿಧಾನಸಭೆ
ಚುನಾವಣೆಯಲ್ಲಿ
ಅಭ್ಯರ್ಥಿಯಾಗಲು
ಕಾಂಗ್ರೆಸ್ನಲ್ಲಿ
ಅರ್ಜಿ
ಸಲ್ಲಿಕೆಗೂ
ಪೈಪೋಟಿ
ನಡೆದಿದ್ದು,
ನವೆಂಬರ್
15ರಂದು
ಅನೇಕರು
ಟಿಕೆಟ್ಗಾಗಿ
ಅರ್ಜಿ
ಸಲ್ಲಿಸಿದ್ದರು.
ಪ್ರತಿಯೊಂದು
ವಿಧಾನಸಭಾ
ಕ್ಷೇತ್ರದಲ್ಲೂ
ಟಿಕೆಟ್ಗಾಗಿ
ಅಭ್ಯರ್ಥಿಗಳ
ಪಟ್ಟಿ
ಹೆಚ್ಚುತ್ತಿದೆ.
ವಿಶೇಷ
ಎಂಬಂತೆ
ಮುರುಘಾ
ಮಠದ
47
ಫೋಟೋ
ಕಳ್ಳತನ
ಪ್ರಕರಣಕ್ಕೆ
ಸಂಬಂಧಿಸಿದಂತೆ
ನ್ಯಾಯಾಂಗ
ಬಂಧನದಲ್ಲಿರುವ
ಮಠದ
ಮಾಜಿ
ಆಡಳಿತಾಧಿಕಾರಿ
ಚಿತ್ರದುರ್ಗ
ವಿಧಾನಸಭಾ
ಕ್ಷೇತ್ರದಿಂದ
ಮಾಜಿ
ಶಾಸಕ
ಎಸ್.ಕೆ.
ಬಸವರಾಜನ್
ಅವರ
ಹೆಸರಿನಲ್ಲಿ
ಅರ್ಜಿ
ಸಲ್ಲಿಸಲಾಗಿತ್ತು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಎಂಎಲ್ಸಿ ರಘು ಆಚಾರ್, ಹನುಮನುಲಿ ಷಣ್ಮುಗಪ್ಪ, ಜಿ.ಜಯರಾಮಯ್ಯ, ಉದ್ಯಮಿ ಕೆಸಿ. ವೀರೇಂದ್ರ ಪಪ್ಪಿ, ಮಾಜಿ ಶಾಸಕ ಎವಿ. ಉಮಾಪತಿ, ಕಾಂಗ್ರೆಸ್ ವಕ್ತಾರ ಬಾಲಕೃಷ್ಣ ಸೇರಿದಂತೆ ಐದಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇವರೊಂದಿಗೆ ಎಸ್.ಕೆ. ಬಸವರಾಜನ್ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಮುರುಘಾ ಮಠದಲ್ಲಿ 47 ಫೋಟೋ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಫೋಟೋ ಕಳ್ಳತನಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ಸಂಬಂಧ ತನಿಖೆ ಮುಂದುವರಿದಿದ್ದು, ಎಸ್.ಕೆ.ಬಸವರಾಜನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ನವೆಂಬರ್
7
ರಂದು
ಪ್ರಕರಣದ
ಪ್ರಮುಖ
ಆರೋಪಿಯನ್ನು
ಪೊಲೀಸರು
ಬಂಧಿಸಿದ್ದರು.
ಜೊತೆಗೆ
ಹೊಸಹಳ್ಳಿ
ಗ್ರಾಮ
ಪಂಚಾಯಿತಿ
ಸದಸ್ಯ
ಮೋಹನ
ಮೂರ್ತಿ
ಅಲಿಯಾಸ್
ಸ್ವಾಮಿ
ಹಾಗೂ
ಎಸ್.ಜೆ.ಎಂ.
ಕಾಲೇಜು
ಉಪನ್ಯಾಸಕ
ಶಿವಾನಂದ
ಸ್ವಾಮಿ
ಅವರನ್ನು
ಬಂಧಿಸಲಾಗಿತ್ತು.
ಆರೋಪಿಗಳು
ನೀಡಿದ
ಮಾಹಿತಿ
ಮೇರೆಗೆ
ಬಸವರಾಜನ್
ಅವರನ್ನು
ಪೊಲೀಸರು
ವಶಕ್ಕೆ
ಪಡೆದು
ಅಜ್ಞಾತ
ಸ್ಥಳದಲ್ಲಿ
ವಿಚಾರಣೆ
ನಡೆಸಲಾಗಿತ್ತು.
ನ್ಯಾಯಾಂಗ
ಬಂಧನದಲ್ಲಿರುವ
ಬಸವರಾಜನ್
ಹೆಸರಿನಲ್ಲಿ
ಕಾಂಗ್ರೆಸ್
ಟಿಕೆಟ್ಗಾಗಿ
ಅರ್ಜಿ
ಸಲ್ಲಿಕೆ.