ತೀವ್ರ ಎದೆನೋವಿನಿಂದ ಕುಸಿದು ಬಿದ್ದ ಸಚಿವ ಆಂಜನೇಯ
ಚಿತ್ರದುರ್ಗ, ಮೇ 05: ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಕಾಂಗ್ರೆಸ್ ಪರವಾಗಿ ಸಚಿವ ಎಚ್.ಆಂಜನೇಯ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡ ಪರಿಣಾಮ ಕುಸಿದು ಬಿದ್ದಿದ್ದಾರೆ.
ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತೀವ್ರ ಎದೆ ನೋವಿನಿಂದ ಬಳಲುತ್ತಿರುವ ಅವರನ್ನು ದಾವಣಗೆರೆ ನಗರದ ಎಸ್.ಎಸ್. ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಲಾಗಿದೆ.
ಬಿಸಿಲಿನ ಧಗೆ ಹಾಗೂ ನಿರಂತರ ಪ್ರವಾಸದಿಂದ ಸಚಿವರು ಅನಾರೋಗ್ಯಕ್ಕೀಡಾಗಿದ್ದಾರೆ. ತಪಾಸಣೆ ಬಳಿಕ ಒಂದು ದಿನ ಅಡ್ಮಿಟ್ ಆಗುವಂತೆ ವೈದ್ಯರು ಸಲಹೆ ನೀಡಿದ್ದು, 24 ಗಂಟೆ ವೈದ್ಯರ ತೀವ್ರ ನಿಗಾದಲ್ಲಿ ಸಚಿವರು ಉಳಿಯಲಿದ್ದಾರೆ. ಕಾರ್ಯಕರ್ತರು ಹಾಗೂ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
karnataka assembly elections 2018 campaign h anjaneya hospital health treatment ಆಸ್ಪತ್ರೆ ಕರ್ನಾಟಕ ವಿಧಾನಸಭೆ ಚುನಾವಣೆ 2018 ಆರೋಗ್ಯ ಚಿಕಿತ್ಸೆ ಪ್ರಚಾರ
English summary
Minister H. Anjaneya was fell down after chest pain and tiredness at Chitradurga during campaign on Saturday. Later he was admitted to S.S. Hospital at Davangere for the treatment.
Story first published: Saturday, May 5, 2018, 18:54 [IST]