ಲವ್ ಜಿಹಾದ್ ತಡೆಗೆ ವಿಶೇಷ ಕಾನೂನು ಕ್ರಮ ಅಗತ್ಯವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಚಿತ್ರದುರ್ಗ, ಡಿಸೆಂಬರ್, 14: ಲವ್ ಜಿಹಾದ್ ತಡೆಗೆ ಪೊಲೀಸರ ವಿಶೇಷ ಕಾರ್ಯಪಡೆಯ ಅಗತ್ಯವಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಚಿತ್ರದುರ್ಗದಲ್ಲಿ ಹೇಳಿದರು.
ಜಿಲ್ಲಾಧಿಕಾರಿಗಳಿಗೆ
ಮಾಹಿತಿ
ನೀಡಬೇಕು
ಚಿತ್ರದುರ್ಗದಲ್ಲಿ
ಸುದ್ದಿಗಾರರೊಂದಿಗೆ
ಮಾತನಾಡಿದ
ಅವರು,
ಲವ್
ಜಿಹಾದ್
ತಡೆಗೆ
ಪೊಲೀಸರ
ವಿಶೇಷ
ಕಾರ್ಯಪಡೆ
ರಚಿಸಿ
ಎಂದು
ಹಿಂದೂ
ಸಂಘಟನೆ
ಮುಖಂಡರು
ಮನವಿ
ಮಾಡಿದ್ದಾರೆ.
ಲವ್
ಜಿಹಾದ್
ಮತಾಂತರ
ನಿಷೇಧ
ಕಾಯ್ದೆಯಡಿಯಲ್ಲೇ
ಬಂದಿದೆ
ಅಂತಾ
ಅವರಿಗೆ
ಹೇಳಿದ್ದೇನೆ.
ಈ
ಕುರಿತು
ನಮ್ಮ
ಪೊಲೀಸರು
ಪ್ರಕರಣಗಳನ್ನು
ದಾಖಲಿಸಬೇಕು.
ಬೆಂಗಳೂರಿನ
ಒಂದು
ಠಾಣೆಯಲ್ಲಿ
ಪ್ರಕರಣ
ದಾಖಲಿಸಿದ್ದಾರೆ.
ಒಂದು
ಧರ್ಮದಿಂದ
ಇನ್ನೊಂದು
ಧರ್ಮಕ್ಕೆ
ಹೋಗಲು
ಸಂವಿಧಾನದಲ್ಲಿ
ಅವಕಾಶ
ಇದೆ.
ಆದರೆ
ಮತಾಂತರ
ಮಾಡುವ
ಮೊದಲು
ಜಿಲ್ಲಾಧಿಕಾರಿ
ಅವರಿಗೆ
ಒಂದು
ತಿಂಗಳ
ಮುಂಚೆಯೇ
ತಿಳಿಸಬೇಕು.
ಮತಾಂತರ
ಮಾಡುವವರು,
ಮತಾಂತರ
ಆಗುವವರು
ಇಂತಹ
ಧರ್ಮಕ್ಕೆ
ಹೋಗುತ್ತೇವೆ
ಎಂದು
ತಿಳಿಸಬೇಕು.
ಜಿಲ್ಲಧಿಕಾರಿಗಳು
ಪರಿಶೀಲನೆ
ಮಾಡಿದ
ಬಳಿಕ
ಅನುಮತಿ
ನೀಡುತ್ತಾರೆ.
ಈ
ಕುರಿತು
ಮತಾಂತರ
ಕಾಯ್ದೆಯಲ್ಲಿ
ಎಲ್ಲವೂ
ಇದೆ
ಎಂದು
ತಿಳಿಸಿದರು.
ರಾಜ್ಯದಲ್ಲಿ
ಹೊಸ
ಕಾಯ್ದೆಯ
ಅಗತ್ಯವಿಲ್ಲ
ಸದ್ಯಕ್ಕೆ
ನಮ್ಮ
ರಾಜ್ಯದಲ್ಲಿ
ಹೊಸ
ಕಾಯ್ದೆಯ
ಅಗತ್ಯವಿಲ್ಲ.
ಮತಾಂತರ
ನಿಷೇಧ
ಮಾಡಿದ್ದೇ
ಈ
ಉದ್ದೇಶದಿಂದ.
ಚಿತ್ರದುರ್ಗ
ಜಿಲ್ಲೆಯಲ್ಲಿ
ಹೆಚ್ಚಿನ
ಪ್ರಮಾಣದಲ್ಲಿ
ಮತಾಂತರ
ಆಗುತ್ತಿದ್ದಾರೆ.
ಅನೇಕ
ಸ್ವಾಮೀಜಿಗಳು
ಕೂಡ
ಈ
ಕುರಿತು
ಚರ್ಚೆ
ಮಾಡಿದ್ದರು.
ಯಾರೇ
ಮತಾಂತರ
ಮಾಡುವುದು
ಕಂಡು
ಬಂದರೆ
ದೂರು
ನೀಡಬೇಕು.
ಸ್ಪೆಷಲ್
ಟಾಸ್ಕ್
ಫೋರ್ಸ್
ಅಗತ್ಯ
ಇಲ್ಲ.
ಏನಾದರೂ
ಪರಿಸ್ಥಿತಿ
ಮಿತಿಮೀರಿದರೆ
ಆ
ಸಂದರ್ಭದಲ್ಲಿ
ನೋಡೋಣ
ಎಂದು
ಸಚಿವರು
ಉತ್ತರಿಸಿದರು.
ಇಂದು
ದೆಹಲಿಗೆ
ತೆರಳುತ್ತಿದ್ದೇನೆ
ಕರ್ನಾಟಕ
ಹಾಗೂ
ಮಹಾರಾಷ್ಟ್ರ
ಗಡಿ
ವಿಚಾರವಾಗಿ
ಮಾತನಾಡಿದ
ಅವರು,
ಈ
ಬಗ್ಗೆ
ಚರ್ಚಿಸಲು
ಬುಧವಾರ
ದೆಹಲಿಗೆ
ತೆರಳುತ್ತಿದ್ದೇನೆ.
'ಗಡಿ
ಹಾಗೂ
ಗೃಹ
ಇಲಾಖೆಗೆ
ಸಂಬಂಧಿಸಿದ
ಕೆಲ
ವಿಚಾರಗಳನ್ನು
ಚರ್ಚೆ
ಮಾಡಲು
ಆಹ್ವಾನ
ಬಂದಿದೆ.
ದೆಹಲಿ
ಭೇಟಿಗೆ
ಬೇರೆ
ಅರ್ಥ
ಕಲ್ಪಿಸುವ
ಅಗತ್ಯ
ಇಲ್ಲ.
ರಾಜಕೀಯ
ವಿಚಾರದ
ಬಗ್ಗೆ
ಯಾವುದೇ
ಚರ್ಚೆ
ನಡೆಯುವುದಿಲ್ಲ
ಎಂದು
ಪ್ರಶ್ನೆಯೊಂದಕ್ಕೆ
ಪ್ರತಿಕ್ರಿಯೆ
ನೀಡಿದರು.