ಜುಲೈ 15 ರಿಂದ ವಿವಿ ಸಾಗರಕ್ಕೆ ಭದ್ರಾ ಜಲಾಶಯದಿಂದ ನೀರು, ರೈತರಲ್ಲಿ ಸಂತಸ
ಚಿತ್ರದುರ್ಗ, ಜುಲೈ 9 : ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಸಾಗರ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ಇದೆ ತಿಂಗಳ ಜುಲೈ 15 ರಿಂದ ಅಕ್ಟೋಬರ್ 15 ರವರೆಗೆ ನೀರು ಹರಿಸಲು ಸರಕಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ರೈತರಲ್ಲಿ ಹರ್ಷ ತಂದಿದೆ.
ಭದ್ರಾದಿಂದ ವಾಣಿವಿಲಾಸ ಜಲಾಶಯಕ್ಕೆ 2019-20 ನೇ ಸಾಲಿನಿಂದ ಪ್ರತಿ ವರ್ಷ ಮುಂಗಾರು ಹಂಗಾಮಿಗೆ ನೀರನ್ನು ಹರಿಸಲಾಗುತ್ತಿದ್ದು, ಈ ವರ್ಷವೂ ಸಹಾ ಮುಂಗಾರು ಹಂಗಾಮಿಗೆ 2022ರ ಜುಲೈ 15ರಿಂದ ಅಕ್ಟೋಬರ್ ರವರೆಗೆ ನೀರು ಹರಿಸಲು ಮತಿ ನೀಡುವಂತೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಜಲ ಸಂಪನ್ಮೂಲ ಸಚಿವರಿಗೆ ಪತ್ರ ಬರೆದಿದ್ದರು.
ರಾಯಚೂರು: 'ಮಹಾ'ಮಳೆ, ನಾರಾಯಣಪುರ ಜಲಾಶಯ ಭಾಗದ ನಿವಾಸಿಗಳಿಗೆ ಪ್ರವಾಹ ಭೀತಿ
ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಲ ಸಂಪನ್ಮೂಲ ಸಚಿವರು ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆ ಹಾಗೂ ಹೆಬ್ಬೂರು ಹಳ್ಳದಿಂದ ವೇದಾವತಿ ನದಿ ಮೂಲಕ ಹಿರಿಯೂರು ವಾಣಿ ವಿಲಾಸ ಸಾಗರಕ್ಕೆ ಇದೇ ತಿಂಗಳ ಜುಲೈ 15 ರಿಂದ ಅಕ್ಟೋಬರ್ 15 ರವರೆಗೆ ನೀರು ಹರಿಸಲು ಅನುಮೋದನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರು ವಿಶ್ವೇಶ್ವರಯ್ಯ ಜಲ ನಿಗಮದ ನಿರ್ದೇಶಕರಿಗೆ ಆದೇಶಿಸಿದ್ದಾರೆ.
ವೇದಾವತಿ
ನದಿಗೆ
ಅಡ್ಡವಾಗಿ
ಡ್ಯಾಂ
:
ಈ
ಜಲಾಶಯವು
ಮೈಸೂರು
ಅರಸರ
ಕಾಲದಲ್ಲಿ
ಹಿರಿಯೂರು
ತಾಲೂಕಿನ
ವಾಣಿ
ವಿಲಾಸಪುರ
ಹತ್ತಿರ
ಮಾರಿಕಣಿವೆ
ಎಂಬ
ಪ್ರದೇಶದಲ್ಲಿ
ವೇದಾವತಿ
ನದಿಗೆ
ಅಡ್ಡಲಾಗಿ
ಅರಸರ
ತಾಯಿ
ಕೆಂಪನಂಜಮ್ಮಣ್ಣಿ
ನೆನಪಿಗಾಗಿ
ನಿರ್ಮಿಸಿದ್ದಾರೆ.
1897ರಲ್ಲಿ
ಪ್ರಾರಂಭವಾದ
ಕಾಮಗಾರಿಯನ್ನು
10
ವರ್ಷದಲ್ಲಿ
ಸುಮಾರು
45
ಲಕ್ಷ
ವೆಚ್ಚದಲ್ಲಿ
ಮುಗಿಸಿ
ಜಲಾಶಯವನ್ನು
ನಿರ್ಮಿಸಲಾಯಿತು.
ಜಲಾಶಯದ
ಒಟ್ಟು
ಎತ್ತರ
43.28
ಮೀಟರ್
(142
ಅಡಿ),
ಉದ್ದ
405.50.
ಮೀಟರ್
ಇದೆ.
ಜಲಾಶಯ
850.30
(30
ಟಿಎಂಸಿ)
ನೀರಿನ
ಸಾಮರ್ಥ್ಯ
ಹೊಂದಿದೆ.
ಒಟ್ಟಾರೆಯಾಗಿ ಮಳೆ ಇಲ್ಲದೆ ಬಳಲಿ ಬೆಂಡಾಗಿದ್ದ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರದಲ್ಲಿ ಪ್ರಸ್ತುತ ನೀರಿನ ಮಟ್ಟ 120 ಅಡಿಗೆ ಹೆಚ್ಚಳ ಇರುವುದರಿಂದ ಜಿಲ್ಲೆಯ ರೈತ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದೆ.