ಪ್ರಧಾನಿಯೂ ಸೇರಿದ ಹಾಗೆ ಬಿಜೆಪಿ ಮುಖಂಡರದು ಬಣ್ಣದ ಮಾತು: ಖರ್ಗೆ
ಹಿರಿಯೂರು, ಮೇ 22: ಪ್ರಧಾನಮಂತ್ರಿ ನರೇಂದ್ರ ಮೋದಿಯೂ ಸೇರಿದ ಹಾಗೆಬಿಜೆಪಿ ನಾಯಕರಿಗೆ ಬಣ್ಣದ ಮಾತುಗಳನ್ನಾಡಿ ಜನರನ್ನು ಮರುಳು ಮಾಡುವುದು ಗೊತ್ತೇ ಹೊರತು ದೇಶವನ್ನು ಅಭಿವೃದ್ಧಿಯತ್ತ ನಡೆಸುವುದು ಹೇಗೆ ಅನ್ನೋದು ತಿಳಿದಿಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಹಿರಿಯೂರು ತಾಲೂಕಿನ ತವಂದಿ ಗ್ರಾಮದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಲೋಕಸಭೆ ಚುನಾವಣೆ ವೇಳೆಯಲ್ಲಿ ನರೇಂದ್ರ ಮೋದಿಯವರು ದೇಶದ ಜನತೆಗೆ ಅಂಗೈಯಲ್ಲೇ ಅರಮನೆ ತೋರಿಸಿದರು. ಈಗ ಜನರ ಕೈಗೆ ಚಿಪ್ಪನ್ನು ಕೊಟ್ಟಿದ್ದಾರೆ ಎಂದು ಕೇಂದ್ರ ಸರಕಾರದ ನೇತೃತ್ವ ವಹಿಸಿರುವ ಮೋದಿ ಅವರನ್ನು ಛೇಡಿಸಿದರು.[ತಿವಾರಿ ಸಾವನ್ನು ರಾಜಕೀಯಕ್ಕಾಗಿ ಬಿಜೆಪಿ ಬಳಸುವುದು ಹೇಯ : ಖರ್ಗೆ]
ನೂರು ದಿನದೊಳಗೆ ಕಪ್ಪುಹಣವನ್ನು ತರುತ್ತೇವೆ. ಜನರ ಖಾತೆಗಳಿಗೆ ಹಣ ಜಮೆ ಮಾಡುತ್ತೇವೆ ಎಂದುಉ ಭರವಸೆ ಕೊಟ್ಟಿದ್ದರಲ್ಲ, ಅದೇನಾಯಿತು? ಯಾವ ಹಣವೂ ಖಾತೆಗೆ ಜಮೆಯಾಗಲಿಲ್ಲ. ಉದ್ಯೋಗ ಸೃಷ್ಟಿಯಾಗಲಿಲ್ಲ ಎಂದು ಬಿಜೆಪಿ ಸರಕಾರವನ್ನು ಖರ್ಗೆ ತರಾಟೆಗೆ ತೆಗೆದುಕೊಂಡರು.
{promotion-urls}