ಚಿಕ್ಕಮಗಳೂರಿನಲ್ಲಿ ನ್ಯಾಶನಲ್ ಬೈಕ್ ರ್ಯಾಲಿ: ರೇಸಿಂಗ್ನಲ್ಲಿ ಬಿಗ್ಬಾಸ್ ಖ್ಯಾತಿಯ ಐಶ್ವರ್ಯಾ ಪಿಸೆ
ಚಿಕ್ಕಮಗಳೂರು, ಮೇ 26: ದಿ ಮೋಟಾರ್ ಸ್ಪೋಟ್ಸ್ ಕ್ಲಬ್ ಚಿಕ್ಕಮಗಳೂರು ವತಿಯಿಂದ ಮೇ.27 ಮತ್ತು 28 ರಂದು ದ್ವಿಚಕ್ರ ವಾಹನ ಎರಡನೇ ಸುತ್ತಿನ ರಾಷ್ಟ್ರೀಯ ರ್ಯಾಲಿ ಆಫ್ ಚಿಕ್ಕಮಗಳೂರು ಆಯೋಜಿಸಲಾಗಿದೆ ಎಂದು ಅಭಿಜಿತ್ ಪೈ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡ ಅವರು, ಮೊದಲ ಸುತ್ತಿನ ರ್ಯಾಲಿ ಕೊಡಗಿನಲ್ಲಿ ಮುಕ್ತಾಯಗೊಂಡಿದ್ದು, ಎರಡನೇ ಸುತ್ತು ಚಿಕ್ಕಮಗಳೂರು ಜಿಲ್ಲೆಯ ವಸಂತ್ಕೂಲ್ ಮತ್ತು ತಿಪ್ಪನಹಳ್ಳಿ ಎಸ್ಟೇಟ್ನಲ್ಲಿ ಹಮ್ಮಿಕೊಳ್ಳಲಾಗಿದೆ. ನಂತರದ ಸುತ್ತುಗಳು ಕೊಯಮತ್ತೂರು, ಬೆಂಗಳೂರು ಹಾಗೂ ನಾಸಿಕ್ನಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಈ ರ್ಯಾಲಿಯನ್ನು ಎಂಆರ್ಎಫ್ ಪ್ರಾಯೋಜಿಸಿದರೆ, ಸಹ ಪ್ರಾಯೋಜಕತ್ವನ್ನು ದಿ ಮೋಟಾರ್ ಸ್ಪೋಟ್ಸ್ ಕ್ಲಬ್ ಮತ್ತು ಅಲ್ಲಂಪುರದ 7 ಹೆವೆನ್ ವಿಲ್ಲ ಮತ್ತು ರೆಸಾರ್ಟ್ ವಹಿಸಿಕೊಂಡಿವೆ. ರಾಷ್ಟ್ರೀಯ ದ್ವಿಚಕ್ರವಾಹನ ರ್ಯಾಲಿ ಮೇ. 27 ರಂದು ಸಂಜೆ 5ಗಂಟೆಗೆ ಸಾಂಕೇತಿಕವಾಗಿ ಉದ್ಘಾಟನೆಗೊಳ್ಳುತ್ತಿದ್ದು, ಶಾಸಕ ಎಚ್.ಡಿ.ತಮ್ಮಯ್ಯ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಭಾಗವಹಿಸಲಿದ್ದಾರೆ ಎಂದರು.
ರ್ಯಾಲಿ 8 ಸ್ಟೇಜ್ಗಳನ್ನು ಹೊಂದಿದ್ದು, ವಸಂತ್ಕೂಲ್ ಎಸ್ಟೇಟ್ನಲ್ಲಿ ಮೇ.28 ರಂದು ಬೆಳಿಗ್ಗೆ 6 ಗಂಟೆಗೆ ಸ್ಪರ್ಧೆ ಆರಂಭಗೊಳ್ಳುತ್ತಿದ್ದು, ಒಟ್ಟು 8 ಕಿ.ಮೀ., ತಿಪ್ಪನಹಳ್ಳಿಯಲ್ಲಿ 6 ಕಿ.ಮೀ. ಸೇರಿದಂತೆ ಒಟ್ಟು 14 ಕಿ.ಮೀ. ರ್ಯಾಲಿ ನಡೆಯಲಿದೆ. ಫೈನಲ್ಸ್ಟೇಜ್ 4 ಬಾರಿ ನಡೆಯಲಿದೆ. ಸ್ಪೆಷನ್ ಸ್ಟೇಜ್ 56 ಕಿ.ಮೀ., ಟ್ರಾನ್ಸ್ಪೋರ್ಟ್ 82 ಕಿ.ಮೀಟರ್ ಆಗಿದ್ದು, ಒಟ್ಟು 138 ಕಿ.ಮೀ. ರ್ಯಾಲಿ ಕ್ರಮಿಸಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಟಿವಿಎಸ್ ರೇಸಿಂಗ್ನ ಆರ್.ಇ.ರಾಜೇಂದ್ರ, ಬೆಂಗಳೂರು ಟಿ.ವಿ.ಎಸ್ ರೇಸಿಂಗ್ನ ಆರ್. ನಟರಾಜ್, ಹೀರೋ ರೇಸಿಂಗ್ನ ಯುವರಾಜ್ ಮತ್ತು ಸತ್ಯರಾಜ್ ಮೈಸೂರು, ಟಿವಿಎಸ್ ರೇಸಿಂಗ್ನ ಅಬ್ದುಲ್ ತನ್ವಿರ್, ಬೆಂಗಳೂರಿನ ನರೇಶ್, ಸಚಿನ್, ಕೊಯಮತ್ತೂರಿನ ವೇಣು ರಮೇಶ್ ಕುಮಾರ್, ತಮಿಳುನಾಡಿನ ಶರತ್ ಮೋಹನ್, ಜಾವಾ ರೇಸಿಂಗ್ನ ಹೇಮಂತ್ಗೌಡ, ಎಸ್.ಭರತ್, ಕುಲುವಿನ ಹ್ಯಾಪಿವರ್ಮ, ನಿತೀಶ್ ಭರದ್ವಾಜ್, ಡೆಹರಡೂನ್ ನಿಂದ ದೃತಿಮಾನಸಿಂಗ್, ಲೂದಿಯಾನದ ಸೌರಭ್ ಹಾಂಡಾ, ಊಟಿಯ ರಷೀದ್ ಖಾದರ್, ಉತ್ತರಖಂಡದ ಅಖಂಡ ಪ್ರತಾಪ್ಸಿಂಗ್ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು ಟಿವಿಎಸ್ ರೇಸಿಂಗ್ನ ಐಶ್ವರ್ಯ ಪಿಸೆ, ಸತಾರ್ನ ತನಿಕಶಾನುಭೋಗ್, ಮಂಗಳೂರಿನ ಬಿ.ಅಪೂರ್ವ, ತಮಿಳುನಾಡಿನ ರಿಹನಾ, ತ್ರಿಶೂರ್ನಿಂದ ಸಿ.ಸಿ.ಸ್ನೇಹಾ, ಪುಣೆಯಿಂದ ಅನಮ್ಹಶೀಮ್ ಪ್ರಮುಖ ಮಹಿಳಾ ಸವಾರರಾಗಿದ್ದಾರೆ. ಸ್ಥಳೀಯರಿಗೆ ಪ್ರತ್ಯೇಕ ವಿಭಾಗವಿದ್ದು, ಚಿಕ್ಕಮಗಳೂರಿನಿಂದ ಅಸದ್ ಖಾನ್, ದಿಲೀಪ್ ರಾಜ್, ಫ್ರಾನ್ಸಿಸ್, ಜೆ.ಪಿ.ಪೂರಬ್ ಮತ್ತು ಮಹ್ಮದ್, ಅಜರುದ್ದೀನ್ ರ್ಯಾಲಿಯಲ್ಲಿ ಭಾಗಿಯಾಲಿದ್ದಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications