ಹೆಂಡತಿಯ ಅಕ್ರಮ ಸಂಬಂಧ ಕಂಡು ರುಂಡ ಕಡಿದು ಪೊಲೀಸ್ ಠಾಣೆಗೆ ತಂದ ಗಂಡ
ಚಿಕ್ಕಮಗಳೂರು, ಸೆಪ್ಟೆಂಬರ್ 10 : ಹೆಂಡತಿಗೆ ಅಕ್ರಮ ಸಂಬಂಧ ಇದೆ ಎಂಬ ಕಾರಣಕ್ಕೆ ಆಕೆಯನ್ನು ಕೊಂದು, ರುಂಡವನ್ನು ಪೊಲೀಸ್ ಠಾಣೆಗೆ ಹೊತ್ತೊಯ್ದ ಆರೋಪಿ ಬಗ್ಗೆ ಇದೀಗ ಬಹಳ ಚರ್ಚೆ ನಡೆಯುತ್ತಿದೆ. ಹೆಂಡತಿಯ ತಲೆ ಕಡಿದು, ತಂದು ಪೊಲೀಸ್ ಠಾಣೆಯಲ್ಲಿ ನಿಂತ ಆರೋಪಿ ಸತೀಶ್. ಆತನ ಪತ್ನಿ ಹೆಸರು ರೂಪಾ.
ಅವರಿಬ್ಬರು ಮೂರು ವರ್ಷ ಕಾಲ ಪ್ರೀತಿಸಿ ಮದುವೆಯಾದವರು. ಚಿನ್ನದಂಥ ಎರಡು ಮಕ್ಕಳಿವೆ. ಆತ ದುಡಿಮೆಗಾಗಿ ಅಂತಲೇ ಹಗಲು-ಇರುಳು ಲೆಕ್ಕಿಸದೆ ಶ್ರಮಿಸುತ್ತಿದ್ದ. ಈಕೆ ಪರಪುರುಷನ ತೆಕ್ಕೆಯಲ್ಲಿ ಬಂಧಿಯಾದಳು. 3 ಲಕ್ಷ ಸಾಲ ಮಾಡಿ ಪ್ರಿಯಕರನಿಗೆ ಕೊಟ್ಟು, ಗಂಡನ ವಿರುದ್ಧವೇ ಪೊಲೀಸರಿಗೆ ದೂರು ಕೊಟ್ಟಿದ್ದಳು.
ಹೇಗೋ ದೊಡ್ಡವರೆಲ್ಲ ಸೇರಿ ರಾಜಿ-ಸಂಧಾನ ಮಾಡಿಸಿದರು. ಆದರೆ ತನ್ನ ಚಾಳಿ ಮಾತ್ರ ಆಕೆ ಬಿಡಲಿಲ್ಲ. ಪ್ರೀತಿಸಿ ಮದುವೆಯಾದವಳನ್ನು ಯಾವಾಗ ಮತ್ತೊಬ್ಬನ ತೋಳ ತೆಕ್ಕೆಯಲ್ಲಿ ಆಕೆಯಿರುವುದನ್ನು ಕಂಡನೋ ಕೊಂದೇಬಿಟ್ಟ. ಈ ಘಟನೆ ನಡೆದಿರುವುದು ಚಿಕ್ಕಮಗಳೂರಲ್ಲಿ. ಸತೀಶ್ ತರೀಕೆರೆ ತಾಲೂಕಿನ ಶಿವನಿಯವನು. ಅದೇ ಗ್ರಾಮದ ರೂಪಾಳನ್ನು 9 ವರ್ಷದಿಂದೆ ಪ್ರೀತಿಸಿ ಮದುವೆಯಾಗಿದ್ದ. 2 ಮಕ್ಕಳು ಇದ್ದವು.

ಬೆಂಗಳೂರಲ್ಲಿ ಚಾಲಕನಾಗಿದ್ದ ಸತೀಶ್, ಹೆಂಡತಿ- ಮಕ್ಕಳಾ ಸಲುವಾಗಿ ಶಿವನಿ ರೈಲು ನಿಲ್ದಾಣದ ಬಳಿ ಕೋಳಿ ಅಂಗಡಿ ಇಟ್ಟಿದ್ದ. ಇಷ್ಟೆಲ್ಲ ಪ್ರೀತಿ-ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದ ಹೆಂಡತಿ ಮತ್ತೊಬ್ಬ ಗಂಡಿನ ಜತೆ ಆತ್ಮೀಯವಾಗಿ ಇರುವುದನ್ನು ಕಂಡು ಮಚ್ಚು ಬೀಸಿದ್ದಾನೆ. ಆಕೆಯ ಜೊತೆಗಿದ್ದವನು ತಪ್ಪಿಸಿಕೊಂಡಿದ್ದಾನೆ.
ಆ ಬಳಿಕ ಹೆಂಡತಿಯ ತಲೆ ಕಡಿದು, 20 ಕಿ.ಮೀ. ದೂರದ ಅಜ್ಜಂಪುರ ಠಾಣೆಗೆ ಬೈಕ್ ನಲ್ಲಿ ಬಂದು, ಕತ್ತಿ ಹಾಗೂ ರುಂಡದ ಸಮೇತ ಶರಣಾಗಿದ್ದಾನೆ. ಸತೀಶ್ ನನ್ನು ನೋಡಿದ ಅಜ್ಜಂಪುರ ಪೊಲೀಸರೇ ಅರೆ ಕ್ಷಣ ಗಾಬರಿಯಾಗಿದ್ದಾರೆ.
ಸತೀಶ್ ತನ್ನ ಹೆಂಡತಿಯ ಮುಂಡವನ್ನು ರೈಲು ನಿಲ್ದಾಣ ಬಳಿಯ ಪ್ಲಾಂಟೇಷನ್ ನಲ್ಲಿ ಹಾಕಿದ್ದಾನೆ. ಹೆಂಡತಿ ಸಾವನ್ನಪ್ಪಿದರೆ, ಗಂಡ ಜೈಲು ಪಾಲಾಗುತ್ತಿದ್ದಾನೆ. ಇವರಿಬ್ಬರ ಆ ಎರಡು ಪುಟ್ಟ ಮಕ್ಕಳ ಭವಿಷ್ಯ ಹೇಗೆ ಎಂಬುದು ಆತಂಕಕ್ಕೆ ಹಾಗೂ ಅನುಕಂಪಕ್ಕೆ ಕಾರಣವಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications