ಚಿಕ್ಕಮಗಳೂರು: ಮಾಜಿ ಸಚಿವ ಜಾರ್ಜ್ ಪುತ್ರನ ಆಪ್ತನಿಂದ ಕಳ್ಳಬೇಟೆ
ಚಿಕ್ಕಮಗಳೂರು, ಆಗಸ್ಟ್ 26: ಮಾಜಿ ಸಚಿವ ಕೆ.ಜೆ ಜಾರ್ಜ್ ಪುತ್ರನ ಆಪ್ತ ಹಾಗೂ ಕಾಂಗ್ರೆಸ್ ಮುಖಂಡ ಸತೀಶ್ ಗೌಡ ಪ್ರಾಣಿಗಳ ಕಳ್ಳ ಬೇಟೆ ಕೃತ್ಯದಲ್ಲಿ ಭಾಗಿಯಾಗಿದ್ದು, ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
Recommended Video
Coronaದಿಂದ ಗುಣಮುಖರಾದ SP Balasubrahmanyam . ಈಗ ಪ್ರಜ್ಞಾಸ್ತಿಥಿಗೆ ಮರಳಿದ್ದಾರೆ | Oneindia Kannada
ಮಾಜಿ ವನ್ಯಜೀವಿ ವಾರ್ಡನ್, ಕಾಂಗ್ರೆಸ್ ಪಕ್ಷದ ಮುಖಂಡನೇ ಪ್ರಾಣಿ ಬೇಟೆ ಮಾಡಿದ್ದು, ಕಾಡು ಪ್ರಾಣಿಗಳಾದ ಕಡವೆ ಹಾಗೂ ಬರ್ಕಾವನ್ನು ಬೇಟೆಯಾಡಿದ್ದಾರೆ. ಕಳ್ಳ ಬೇಟೆಯಲ್ಲಿ ನಾಲ್ವರನ್ನು ಬಂಧಿಸಿದ್ದು, ಓರ್ವ ಆರೋಪಿ ನಾಪತ್ತೆಯಾಗಿದ್ದಾನೆ.

ಮಾಜಿ ವನ್ಯಜೀವಿ ಮಂಡಳಿ ವಾರ್ಡನ್ ಸತೀಶ್ ಗೌಡ ಪರಾರಿಯಾಗಿದ್ದು, ರಕ್ಷಕರೆನ್ನಿಸಿಕೊಂಡಿದ್ದವರಿಂದಲೇ ಪ್ರಾಣಿ ಬೇಟೆ ಮಾಡಲಾಗಿದೆ. ಮುತ್ತೋಡಿ ಸಮೀಪದ ಹೊನ್ನಾಳದಲ್ಲಿ ವೈಲ್ಡ್ ಲೈಫ್ ಅರಣ್ಯಾಧಿಕಾರಿಗಳು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಹೊನ್ನಾಳದಲ್ಲಿ ಪ್ರಾಣಿ ಬೇಟೆಯ ನಂತರ ವಾಹನದಲ್ಲಿ ಸಾಗಿಸುತ್ತಿದ್ದಾಗ ನಾಲ್ವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.












Click it and Unblock the Notifications