Get Updates
Get notified of breaking news, exclusive insights, and must-see stories!

ಜಯಲಲಿತಾ ಪಾರ್ಥಿವ ಶರೀರ ಸುಡದೆ, ಹೂಳಿದ್ದು ಏಕೆ?

ಜಯಲಲಿತಾ ಅಂತ್ಯಕ್ರಿಯೆ ವಿಧಾನವನ್ನು ನಿರ್ಧರಿಸಿದ್ದು ಎಐಎಡಿಎಂಕೆ. ಇದರಲ್ಲಿ ಅಮ್ಮನ ಕುಟುಂಬದವರ ತೀರ್ಮಾನದಂತೆ ಏನೂ ಆಗಿಲ್ಲ. ಹಾಗಿದ್ದರೆ ಪಕ್ಷದ ಉದ್ದೇಶವೇನು, ಜಯಲಲಿತಾ ತಮ್ಮ ಅಂತ್ಯಸಂಸ್ಕಾರ ಹೇಗೆ ಆಗಬೇಕು ಎಂದು ಮುಂಚೆಯೇ ತಿಳಿಸಿದ್ದರಾ?

ಚೆನ್ನೈ, ಡಿಸೆಂಬರ್ 7: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಸುಡದೆ, ಹೂಳಿದ್ದು ಏಕೆ ಎಂಬ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದೆ. ಜಯಲಲಿತಾ ತಮಿಳು ಅಯ್ಯಂಗಾರ್ ಕುಟುಂಬಕ್ಕೆ ಸೇರಿದವರು. ಆ ಸಂಪ್ರದಾಯದಂತೆ ದಹನ ಮಾಡುತ್ತಾರೆ. ಆದರೆ ಈಗ ಹೂಳಲಾಗಿದೆ.[ಜಯಲಲಿತಾ ಅಪರೂಪದ ಚಿತ್ರಗಳು]

ಜಯಲಲಿತಾ ಅವರು ಕಳೆದ ಸೋಮವಾರ ರಾತ್ರಿ ನಿಧನರಾದರು. ಮರೀನಾ ಬೀಚ್ ನಲ್ಲಿರುವ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ, ಜಯಾ ರಾಜಕೀಯ ಗುರು ಎಂ.ಜಿ.ರಾಮಚಂದ್ರನ್ ಸ್ಮಾರಕದ ಪಕ್ಕದಲ್ಲೇ ಆಕೆಯ ಅಂತ್ಯಕ್ರಿಯೆಯು ಆಯಿತು. ಈ ರೀತಿಯ ಅಂತ್ಯಕ್ರಿಯೆ ಮಾಡುವುದಕ್ಕೆ ಎರಡು ಕಾರಣಗಳಿವೆ.[ಮಂಡ್ಯದಲ್ಲಿ ಜಯಲಲಿತಾ ಸಮಾಧಿ, ಜೆಡಿಎಸ್ ಸಂಸದರ ಆಲೋಚನೆ!]

Jayalalithaa

ಎಂಜಿಆರ್ ಹಾಗೂ ಅಣ್ಣಾ ದೊರೈ ಅವರಿಗೆ ಮಾಡಿದಂತೆ ಜಯಲಲಿತಾ ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದು ಎಐಎಡಿಎಂಕೆ ಪಕ್ಷದ ಇಂಗಿತ. ಆದ್ದರಿಂದ ಜಯಾ ಅಂತ್ಯಕ್ರಿಯೆ ಹೇಗೆ ಮಾಡಬೇಕು ಎಂಬುದು ಪಕ್ಷದ ನಿರ್ಧಾರವಾಗಿತ್ತೇ ಹೊರತು ಕುಟುಂಬದವರ ತೀರ್ಮಾನ ಇದರಲ್ಲಿ ಇರಲಿಲ್ಲ.[ಪನ್ನೀರ್ ಸೆಲ್ವಂ ಅಂತಿಮವಾಗಿದ್ದು ಹೇಗೆ: ಎಐಎಡಿಎಂಕೆ ಒಳಸುಳಿಗಳು]

ಸ್ಮಾರಕ ನಿರ್ಮಾಣ ಮಾಡಾಬೇಕು ಎಂಬ ಕಾರಣಕ್ಕಾಗಿ ದೇಹವನ್ನು ಹೂಳಲಾಯಿತು. ಇನ್ನೊಂದು ಕಾರಣ ದ್ರಾವಿಡ ಸಂಸ್ಕೃತಿ. ಆ ಪ್ರಕಾರ ಯಾವುದೇ ಸಂಪ್ರದಾಯ ಆಚರಣೆಗೆ ಅವಕಾಶ ಇಲ್ಲ. ಕೆಲವು ಅಧಿಕಾರಿಗಳು ಹೇಳುವ ಪ್ರಕಾರ, ತನ್ನ ರಾಜಕೀಯ ಗುರು ಎಂಜಿಆರ್ ಪಕ್ಕದಲ್ಲೇ ಹೂಳಬೇಕು ಎಂಬುದು ಜಯಲಲಿತಾ ಅವರ ಇಚ್ಛೆಯಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+