ರಜನಿಕಾಂತ್ ಒಬ್ಬ ಅನಕ್ಷರಸ್ಥ : ಮತ್ತೆ ಬಾಯಿಬಿಟ್ಟ ಸ್ವಾಮಿ
ಚೆನ್ನೈ, ಜೂನ್ 24 : "ಸಾಕ್ಷರತೆಯೇ ರಾಜಕೀಯ ಸೇರಲು ಮಾನದಂಡವಾದರೆ, ನಿಮ್ಮ ಪಕ್ಷದಲ್ಲಿರುವ ಅರ್ಧಕ್ಕರ್ಧದಷ್ಟು ರಾಜಕಾರಣಿಗಳು ರಾಜಕೀಯದಲ್ಲಿಯೇ ಇರಬಾರದು" ಎಂದು ಟ್ವಿಟ್ಟಿಗರೊಬ್ಬರು ಸುಬ್ರಮಣಿಯನ್ ಸ್ವಾಮಿಗೆ ಸರಿಯಾಗಿ ಬಾರಿಸಿದ್ದಾರೆ.
ಈ ರೀತಿ ಪ್ರತಿಕ್ರಿಯಿಸಲು ಕಾರಣ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದು ಬಂದಿರುವ, ವಿವಾದಗಳನ್ನು ಮೈಹೊದಿಕೆಯಷ್ಟೇ ಸಲೀಸಾಗಿ ಹೊದ್ದುಕೊಳ್ಳುವ ಬಿಜೆಪಿ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿಯವರು ರಜನಿಕಾಂತ್ ಕುರಿತಂತೆ ನೀಡಿರುವ ಮತ್ತೊಂದು ಹೇಳಿಕೆ.
77 ವರ್ಷದ ಆರ್ಥಿಕ ನಿಪುಣ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿರುವುದೇನೆಂದರೆ, "ರಜನಿಕಾಂತ್ ಒಬ್ಬ ಅನಕ್ಷರಸ್ಥ, ಅವರು ರಾಜಕೀಯ ಸೇರಲು ಅನರ್ಹರು" ಎಂದು ಮಾಧ್ಯಮಗಳ ಮುಂದೆ ಬಡಬಡಿಸಿರುವುದು.
ರಜನಿಕಾಂತ್ ಅವರು ಸೆಪ್ಟೆಂಬರ್ ನಲ್ಲಿ ರಾಜಕೀಯಕ್ಕೆ ಧುಮುಕುವ ವಿಷಯವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂಬ ವರ್ತಮಾನ ಬರುತ್ತಿದ್ದಂತೆ, ಸುಬ್ರಮಣಿಯನ್ ಸ್ವಾಮಿಯವರು ತಮ್ಮ ಬಾಯಿಗೆ ಹಾಕಿಕೊಂಡಿದ್ದ ಬೀಗವನ್ನು ಮತ್ತೆ ತೆರೆದಿದ್ದಾರೆ.
ಈ ಹೇಳಿಕೆಗೆ ವಿರುದ್ಧವಾಗಿ ರಜನಿಕಾಂತ್ ಅಭಿಮಾನಿಗಳನ್ನು ಸುಬ್ರಮಣಿಯನ್ ಸ್ವಾಮಿಯವರನ್ನು ಹಾಕಿಕೊಂಡು ರುಬ್ಬುತ್ತಿದ್ದಾರೆ.
|
ಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ.
ರಾಜಕೀಯ ಸೇರಲು ಸಾಕ್ಷರತೆಯೇ ಮಾನದಂಡವೆ? ಹಾಗಿದ್ರೆ ನಿಮ್ಮ ಪಕ್ಷದ ಅರ್ಧಕ್ಕರ್ಧ ರಾಜಕಾರಣಿಗಳು ಅನರ್ಹರಾಗುತ್ತಾರೆ. ರಾಜೀವ್ ಗಾಂಧಿಯವರ ಹತ್ಯೆಯ ನಂತರ ಇವರನ್ನು ಕಾಂಗ್ರೆಸ್ ಪಕ್ಷ ಯಾವ ಪರಿ ಒದ್ದಿದೆಯೆಂದರೆ, ಅವರು ತಮ್ಮ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾರೆ.
| Array |
ಸಂವಿಧಾನವನ್ನು ಇನ್ನೊಮ್ಮೆ ಓದಿ ಸ್ವಾಮಿಗಳೆ
ರಾಜಕೀಯವೆಂದರೆ ಬರೀ ಎಂಎಲ್ಎ ಅಥವಾ ಎಂಪಿ ಆಗುವುದಲ್ಲ. ರಾಜಕೀಯವೆಂದರೆ ಜನರ ಪ್ರಾತಿನಿಧಿತ್ವ ವಹಿಸುವುದು. ಸಂವಿಧಾನವನ್ನು ಮತ್ತೊಮ್ಮೆ ಕೂಲಂಕಷವಾಗಿ ಓದಿರಿ, ಇನ್ನೊಂದಿಷ್ಟು ಜ್ಞಾನವನ್ನು ಸಂಪಾದಿಸಿರಿ.
|
ಇದಪ್ಪ ನಿಜವಾದ ಡೆಮಾಕ್ರಸಿಯೆಂದರೆ
ಇದಪ್ಪ ನಿಜವಾದ ಡೆಮಾಕ್ರಸಿಯೆಂದರೆ. ಒಂದೆಡೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರಜನಿಕಾಂತ್ ಅವರು ರಾಜಕೀಯಕ್ಕೆ ಬರಬೇಕೆಂದು ಹಂಬಲಿಸುತ್ತಿದ್ದರೆ, ಮತ್ತೊಂದೆಡೆ ಸುಬ್ರಮಣಿಯನ್ ಸ್ವಾಮಿಯಂಥವರು ಶರಂಪರ ವಿರೋಧಿಸುತ್ತಿದ್ದಾರೆ.
|
ರಜನಿ ಬಗ್ಗೆ ಹೀಗೆ ಹೇಳುತ್ತಿರುವುದು ನಾಚಿಕೆಗೇಡಿನದು
ಸುಬ್ರಮಣಿಯನ್ ಸ್ವಾಮಿಯಂಥ ರಾಜಕಾರಣಿಗಳು ತಮಿಳುನಾಡಿಗಾಗಿ ನೈಯಾಪೈಸೆಯಷ್ಟು ಸೇವೆಯನ್ನೂ ಮಾಡಿಲ್ಲದಿರುವುದು ದುರಾದೃಷ್ಟಕರ. ಈಗ ತಮ್ಮನ್ನು ತಾವು ತಮಿಳಿಗ ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನದು. ಅಲ್ಲದೆ, ರಜನಿಕಾಂತ್ ಬಗ್ಗೆ ಅನಗತ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
|
ಓದಿ ಕಡೆದು ಕಟ್ಟೆ ಹಾಕಿದ್ದಾದರೂ ಏನು?
ನೀವು ಇಷ್ಟೊಂದು ಓದಿ ಕಡೆದು ಕಟ್ಟೆ ಹಾಕಿದ್ದಾದರೂ ಏನು? ಈ ನಿಮ್ಮ ಅಸಂಬದ್ಧ ಹೇಳಿಕೆಯಿಂದ ಎಲ್ಲಕ್ಕಿಂತ ಹೆಚ್ಚು ದುಃಖಿಗಳಾಗುವುದು ಉಮಾ ಭಾರತಿ, ಸಾಕ್ಷಿ ಮಹಾರಾಜ್ ಮತ್ತು ಸಾಧ್ವಿ ನಿರಂಜನ್ ಜ್ಯೋತಿಯಂಥವರಿಗೆ
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications