ಪೊಲೀಸ್ ಹುದ್ದೆಯ ಮೇಲೆ ಲಿಂಗ ಪರಿವರ್ತಿತೆಯ ಕಣ್ಣು
ಚೆನ್ನೈ, ಆಗಸ್ಟ್, 05 : ಮೊದಲಿಂದಲೂ ಪೊಲೀಸ್ ಹುದ್ದೆ ಏನಿದ್ದರೂ ಪುರುಷರು ಮಾತ್ರ ನಿಭಾಯಿಸುವ ಕಾಯಕ ಎಂಬ ಕಾಲ ಇತ್ತು. ಆದರೆ ದಿನಗಳೆದಂತೆ ಮಹಿಳೆಯರು ಈ ಕ್ಷೇತ್ರದತ್ತ ಮುಖ ಮಾಡಿ ನಿಂತರು. ಇತ್ತೀಚೆಗೆ ಲಿಂಗ ಪರಿವರ್ತನಾದಾರರು ಸಹ ಪೊಲೀಸ್ ಹುದ್ದೆ ಅಲಂಕರಿಸಲು ಉತ್ಸಾಹ ತೋರಿದ್ದಾರೆ.
ನಗರದ ರಾಜರಥಿನಮ್ ಕ್ರೀಡಾಂಗಣ ಇದಕ್ಕೆ ಸಾಕ್ಷಿಯಾಗಿದ್ದು, ಇಲ್ಲಿ ಮಂಗಳವಾರ ನಡೆದ ಸಬ್ ಇನ್ಸ್ ಪೆಕ್ಟರ್ ಹುದ್ದೆಯ ದೈಹಿಕ ಪರೀಕ್ಷೆಗೆ ಹಾಜರಾದ ಲಿಂಗಪರಿವರ್ತನಾಧಾರಿಣಿ ಪ್ರೀತಿಕಾ ಯಶಿನಿ ಒಂದು ನಿಮಿಷ ಐವತ್ತು ಸೆಕೆಂಡುಗಳಲ್ಲಿ 400ಮೀ ಕ್ರಮಿಸಿ ಎಲ್ಲರ ಗಮನ ಸೆಳೆದಿದ್ದಾಳೆ.[246 ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಅಧಿಸೂಚನೆ]

ಪ್ರಾರಂಭದಲ್ಲಿ ಈಕೆಯ ಶೈಕ್ಷಣಿಕ ಅಂಕಪಟ್ಟಿಗಳಲ್ಲಿ ಹುಡುಗನ ಹೆಸರು ಇರುವುದನ್ನು ಗಮನಿಸಿದ ಆಯ್ಕೆ ಪ್ರಕ್ರಿಯೆ ಸಿಬ್ಬಂದಿ ಪ್ರೀತಿಕಾಳ ಅರ್ಜಿಯನ್ನು ತಿರಸ್ಕರಿಸಿದ್ದರು. ಇದರಿಂದ ಧೃತಿಗೆಡದ ಈಕೆ ಅಂಕಪಟ್ಟಿಯಲ್ಲಿ ಹೆಸರು ಬದಲಿಸಬೇಕೆಂದು ಮದ್ರಾಸ್ ಹೈಕೋರ್ಟ್ ಮೋರೆ ಹೋಗಿದ್ದಳು.
ಈಕೆಯ ಮನವಿಯನ್ನು ಸ್ವೀಕರಿಸಿ, ಕೂಲಂಕುಶವಾಗಿ ಪರಿಶೀಲನೆ ನಡೆಸಿದ ಹೈಕೋರ್ಟ್ ಅಂಕಪಟ್ಟಿಗಳಲ್ಲಿ ಹೆಸರನ್ನು ಬದಲಿಸಿ, ಮೇ ತಿಂಗಳಲ್ಲಿ ನಡೆದ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿತ್ತು. ಇದೀಗ ಈಕೆ ಪೊಲೀಸ್ ಹುದ್ದೆಗೆ ಆಯ್ಕೆಯಾಗಿ ತನ್ನ ಕನಸನ್ನು ನನಸಾಗಿಸುವತ್ತಾ ಮುನ್ನಡೆದಿದ್ದಾಳೆ.
ಪೊಲೀಸ್ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಪ್ರೀತಿಕಾ 'ನಾನು ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಗೆ ಶ್ರೀಪೆರಂಬದೂರಿನ ಕ್ರೀಡಾಂಗಣದಲ್ಲಿ ಓಟ ಸೇರಿದಂತೆ ಅಥ್ಲೆಟಿಕ್ ಗೆ ಸಂಬಂಧಿಸಿದ ಆಟಗಳ ತಾಲೀಮು ನಡೆಸುತ್ತೇನೆ. ಆದರೆ ಗುರುವಿನ ಮಾರ್ಗದರ್ಶನ ಇಲ್ಲದೆ ಸ್ವತಃ ಅಭ್ಯಾಸದಲ್ಲಿ ತೊಡಗಿರುವ ನನಗೆ ಇದು ಬಹು ದೊಡ್ಡ ಕೊರತೆಯಾಗಿದೆ' ಎಂದು ಹೇಳುತ್ತಾಳೆ.
-
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ -
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
ಸ್ವಾವಲಂಬಿ ಬದುಕಿಗೆ ರಾಮಲಿಂಗಾ ರೆಡ್ಡಿ ಸಾಥ್: ಮಂಗಳಮುಖಿಯರು ಮತ್ತು ಮಹಿಳೆಯರಿಗೆ 20 EV ಆಟೋ ಭಾಗ್ಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications