Get Updates
Get notified of breaking news, exclusive insights, and must-see stories!

ತಮಿಳುನಾಡು ಸಿಎಂ ಟೀಕಿಸಿ ಕಾರ್ಟೂನ್ ಬರೆದಿದ್ದ ಬಾಲಾಗೆ ಜಾಮೀನು

ಚೆನ್ನೈ, ನವೆಂಬರ್ 06: ವ್ಯಂಗ್ಯಚಿತ್ರಕಾರ ಜಿ.ಬಾಲಾ ಅವರಿಗೆ ತಿರುನಲ್ವೇಲಿಯ ಜೆಎಂಸಿ -1 ನ್ಯಾಯಾಲಯವು ಸೋಮವಾರ (ನವೆಂಬರ್ 06) ದಂದು ಜಾಮೀನು ಮಂಜೂರು ಮಾಡಿದೆ.

ಸರ್ಕಾರದ ಕಾರ್ಯವೈಖರಿ ಟೀಕಿಸಿ ವ್ಯಂಗ್ಯಚಿತ್ರ ಬರೆದು. ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದ ವ್ಯಂಗ್ಯಚಿತ್ರಕಾರ ಜಿ.ಬಾಲಾರನ್ನು ಭಾನುವಾರ ಬಂಧಿಸಲಾಗಿತ್ತು.

Tirunelveli court grants bail to cartoonist Bala

ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬವೊಂದು ಅಕ್ಟೋಬರ್ 23ರಂದು ಆತ್ಮಹತ್ಯೆ ಮಾಡಿಕೊಂಡಿತ್ತು. ಈ ಕುಟುಂಬವನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಸರ್ಕಾರ ಕಾರ್ಯವೈಖರಿ ಟೀಕಿಸಿದ್ದ ಜಿ.ಬಾಲಾ, ವ್ಯಂಗ್ಯಚಿತ್ರವನ್ನು ಬಿಡಿಸಿ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದರು.

ಬಾಲಾ ಅವರು ವ್ಯಂಗ್ಯಚಿತ್ರದಲ್ಲಿ, ಸಿಎಂ ಪಳನಿಸ್ವಾಮಿ, ಜಿಲ್ಲಾಧಿಕಾರಿ ಸಂದೀಪ್ ನಂದೂರಿ ಮತ್ತು ಜಿಲ್ಲಾ ಪೊಲೀಸ್ ಆಯುಕ್ತ ಕಪಿಲ್ ಕುಮಾರ್ ರನ್ನು ಬೆತ್ತಲೆಗೊಳಿಸಿ, ನೋಟುಗಳಲ್ಲಿ ಅವರ ಮಾನ ಮುಚುವಂತೆ ಚಿತ್ರಿಸಲಾಗಿತ್ತು. ಈ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಸಾವಿರಾರು ಬಾರಿ ಶೇರ್ ಆಗಿತ್ತು. ರಾಜಕೀಯ ವಿಡಂಬನೆಯ ಕಾರ್ಟೂನ್​ಗಳನ್ನು ಬಾಲಾ ಅವರು ತಮ್ಮ ಫೇಸ್ ಬುಕ್ ವಾಲ್​ನಲ್ಲಿ ಪ್ರಕಟಿಸುವುದು ಸಾಮಾನ್ಯ ಸಂಗತಿ.

ಆದರೆ, ಸಿಎಂ ಬಗ್ಗೆ ಬರೆದ ಈ ಕಾರ್ಟೂನ್ ಜಿಲ್ಲಾಧಿಕಾರಿ ಹಾಗೂ ಮುಖ್ಯಕಾರ್ಯದರ್ಶಿ ಗಮನಕ್ಕೆ ಬಂದಿದ್ದಲ್ಲದೆ, ಡಿಜಿಪಿ ಆದೇಶದ ಮೇರೆಗೆ ಬಾಲಾ ಅವರನ್ನು ಪೊಲೀಸರು ಬಂಧಿಸಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರಕ್ಕೆ ಅಡ್ಡಿ ಪಡಿಸಿದ ಸರ್ಕಾರದ ಈ ನಡೆಯನ್ನು ಖಂಡಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+