ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಸಿಎಂ ಟೀಕಿಸಿ ಕಾರ್ಟೂನ್ ಬರೆದಿದ್ದ ಬಾಲಾಗೆ ಜಾಮೀನು

By Mahesh
|
Google Oneindia Kannada News

ಚೆನ್ನೈ, ನವೆಂಬರ್ 06: ವ್ಯಂಗ್ಯಚಿತ್ರಕಾರ ಜಿ.ಬಾಲಾ ಅವರಿಗೆ ತಿರುನಲ್ವೇಲಿಯ ಜೆಎಂಸಿ -1 ನ್ಯಾಯಾಲಯವು ಸೋಮವಾರ (ನವೆಂಬರ್ 06) ದಂದು ಜಾಮೀನು ಮಂಜೂರು ಮಾಡಿದೆ.

ಶಂಕರ್ ಕಾರ್ಟೂನಿಸ್ಟ್ ಮತ್ತು ಸೊಗಸಾದ ಕಾಫಿ ಪರಿಮಳಶಂಕರ್ ಕಾರ್ಟೂನಿಸ್ಟ್ ಮತ್ತು ಸೊಗಸಾದ ಕಾಫಿ ಪರಿಮಳ

ಸರ್ಕಾರದ ಕಾರ್ಯವೈಖರಿ ಟೀಕಿಸಿ ವ್ಯಂಗ್ಯಚಿತ್ರ ಬರೆದು. ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದ ವ್ಯಂಗ್ಯಚಿತ್ರಕಾರ ಜಿ.ಬಾಲಾರನ್ನು ಭಾನುವಾರ ಬಂಧಿಸಲಾಗಿತ್ತು.

Tirunelveli court grants bail to cartoonist Bala

ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬವೊಂದು ಅಕ್ಟೋಬರ್ 23ರಂದು ಆತ್ಮಹತ್ಯೆ ಮಾಡಿಕೊಂಡಿತ್ತು. ಈ ಕುಟುಂಬವನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಸರ್ಕಾರ ಕಾರ್ಯವೈಖರಿ ಟೀಕಿಸಿದ್ದ ಜಿ.ಬಾಲಾ, ವ್ಯಂಗ್ಯಚಿತ್ರವನ್ನು ಬಿಡಿಸಿ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದರು.

ಪದ್ಮಶ್ರೀ ವಿಜೇತ ಕಾರ್ಟೂನಿಸ್ಟ್ ಸುಧೀರ್ ವಿಧಿವಶಪದ್ಮಶ್ರೀ ವಿಜೇತ ಕಾರ್ಟೂನಿಸ್ಟ್ ಸುಧೀರ್ ವಿಧಿವಶ

ಬಾಲಾ ಅವರು ವ್ಯಂಗ್ಯಚಿತ್ರದಲ್ಲಿ, ಸಿಎಂ ಪಳನಿಸ್ವಾಮಿ, ಜಿಲ್ಲಾಧಿಕಾರಿ ಸಂದೀಪ್ ನಂದೂರಿ ಮತ್ತು ಜಿಲ್ಲಾ ಪೊಲೀಸ್ ಆಯುಕ್ತ ಕಪಿಲ್ ಕುಮಾರ್ ರನ್ನು ಬೆತ್ತಲೆಗೊಳಿಸಿ, ನೋಟುಗಳಲ್ಲಿ ಅವರ ಮಾನ ಮುಚುವಂತೆ ಚಿತ್ರಿಸಲಾಗಿತ್ತು. ಈ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಸಾವಿರಾರು ಬಾರಿ ಶೇರ್ ಆಗಿತ್ತು. ರಾಜಕೀಯ ವಿಡಂಬನೆಯ ಕಾರ್ಟೂನ್​ಗಳನ್ನು ಬಾಲಾ ಅವರು ತಮ್ಮ ಫೇಸ್ ಬುಕ್ ವಾಲ್​ನಲ್ಲಿ ಪ್ರಕಟಿಸುವುದು ಸಾಮಾನ್ಯ ಸಂಗತಿ.

ಆದರೆ, ಸಿಎಂ ಬಗ್ಗೆ ಬರೆದ ಈ ಕಾರ್ಟೂನ್ ಜಿಲ್ಲಾಧಿಕಾರಿ ಹಾಗೂ ಮುಖ್ಯಕಾರ್ಯದರ್ಶಿ ಗಮನಕ್ಕೆ ಬಂದಿದ್ದಲ್ಲದೆ, ಡಿಜಿಪಿ ಆದೇಶದ ಮೇರೆಗೆ ಬಾಲಾ ಅವರನ್ನು ಪೊಲೀಸರು ಬಂಧಿಸಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರಕ್ಕೆ ಅಡ್ಡಿ ಪಡಿಸಿದ ಸರ್ಕಾರದ ಈ ನಡೆಯನ್ನು ಖಂಡಿಸಲಾಗಿದೆ.

English summary
The judicial magistrate court - I in Tirunelveli on Monday granted bail to Chennai-based cartoonist Bala, who was arrested by the district crime branch (DCB) of the Tirunelveli police on Sunday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X