ಮೋದಿ ಪೋಟೋ ತಿರುಚಿದ ತ.ನಾಡಿನ ಎಂಡಿಎಂಕೆ ಸದಸ್ಯ ಬಂಧನ
ತಮಿಳುನಾಡಿನ ಎಂಡಿಎಂಕೆ ಸದಸ್ಯನನ್ನು ಭಾನುವಾರ ಬಂಧಿಸಿದ್ದು, ಫೇಸ್ ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತಿರುಚಲಾಗಿದೆ ಎಂಬ ಆರೋಪದಲ್ಲಿ ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಿಕ್ಷೆ ಬೇಡುವಂತೆ ಚಿತ್ರಿಸುವ ಫೋಟೋವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೀರ್ ಕಾಳಿ ಪಟ್ಟಣದ ಎಂಡಿಎಂಕೆ ಸದಸ್ಯ ಸತ್ಯರಾಜ್ ಅಲಿಯಾಸ್ ಬಾಲು ಬಂಧಿತ ಆರೋಪಿ. ಬಿಜೆಪಿಯ ಸ್ಥಳೀಯ ನಾಯಕರ ಆರೋಪ ಮೇಲೆ ಆತನನ್ನು ಬಂಧಿಸಲಾಗಿದೆ. ಶಾಂತಿ ಕದಡುವ ಪ್ರಯತ್ನ ಮಾಡಿದ ಉದ್ದೇಶ ಹೊಂದಿದ ಆರೋಪ ಮಾಡಲಾಗಿದೆ. ಸತ್ಯರಾಜ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೋಮವಾರದಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ಜನವರಿ ಇಪ್ಪತ್ತಾರನೇ ತಾರೀಕು ಆ ಫೋಟೋವನ್ನು ಸತ್ಯರಾಜ್ ಅಪ್ ಲೋಡ್ ಮಾಡಿದ್ದಾನೆ. ಎಂಡಿಎಂಕೆ ಸದಸ್ಯರು ಅದೇ ದಿನ ಮದುರೈನಲ್ಲಿ ಮೋದಿ ವಿರುದ್ಧ ಪ್ರತಿಭಟನೆ ಆಯೋಜಿಸಿದ್ದರು. ತಮಿಳುನಾಡಿನ ಹಿತಾಸಕ್ತಿಗೆ ಮೋದಿ ದ್ರೋಹ ಎಸಗುತ್ತಿದ್ದಾರೆ ಎಂಉ ಪಕ್ಷದ ಸದಸ್ಯರು ಆರೋಪಿಸಿದ್ದರು.












Click it and Unblock the Notifications