ಸುಪ್ರೀಂಕೋರ್ಟಲ್ಲಿ ತೀರ್ಪು ಉಲ್ಟಾ ಆದ್ರೆ ಅಮ್ಮನ ಭವಿಷ್ಯವೂ ಪುಲ್ಟಾ!
ಚೆನ್ನೈ, ಮೇ 19 : ತಮಿಳುನಾಡಿನ ಜನರು ಎಲ್ಲಾ ನಂಬಿಕೆಗಳನ್ನು ಬುಡಮೇಲು ಮಾಡಿದ್ದಾರೆ. ಜೆ.ಜಯಲಲಿತಾ ಅವರಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಕೊಟ್ಟಿದ್ದಾರೆ. ಆದರೆ, 'ಅಮ್ಮ'ನ ಭವಿಷ್ಯ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ.[ವಿಜಯೋತ್ಸಾಹದ ಚಿತ್ರಗಳು]
ಅಕ್ರಮ
ಆಸ್ತಿಗಳಿಕೆ
ವಿವಾದ
ಜಯಲಲಿತಾ
ಅವರನ್ನು
ಕಾಡುತ್ತಿದೆ.
ಈ
ಪ್ರಕರಣದಲ್ಲಿ
ಜಯಲಲಿತಾ,
ಜಯಲಲಿತಾ
ಆಪ್ತೆ
ಶಶಿಕಲಾ
ನಟರಾಜನ್,
ಇಳವರಸಿ
ಮತ್ತು
ಸುಧಾಕರನ್
ಅವರನ್ನು
ದೋಷಮುಕ್ತ
ಗೊಳಿಸಿರುವ
ಕರ್ನಾಟಕ
ಹೈಕೋರ್ಟ್
ತೀರ್ಪನ್ನು
ಪ್ರಶ್ನಿಸಿ
ಕರ್ನಾಟಕ
ಸರ್ಕಾರ
ಸುಪ್ರೀಂಕೋರ್ಟ್
ಮೆಟ್ಟಿಲೇರಿದೆ.
[ಅಮ್ಮ
ರಿಟರ್ನ್ಸ್,
ತಮಿಳುನಾಡಿನಲ್ಲಿ
ಎಐಎಡಿಎಂಕೆ
ದಾಖಲೆ]
ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವ ತೀರ್ಮಾನ ಈಗ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಜೈಲು ಸೇರಿದ್ದರು. ಕರ್ನಾಟಕ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿದ ಮೇಲೆ ಪುನಃ ಮುಖ್ಯಮಂತ್ರಿಯಾಗಿದ್ದರು. [ಜಯಮ್ಮನ 1 ರು. ಇಡ್ಲಿ ಸಾಂಬಾರಿಗೆ ಮರುಳಾದ ಮತದಾರರು]
ಸದ್ಯ, ಜಯಲಲಿತಾ ಅವರ ಸಂಪೂರ್ಣ ರಾಜಕೀಯ ನಡೆ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಜೂನ್ 1ರಂದು ಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸುವ ಸಾಧ್ಯತೆ ಇದೆ. [ಜಯಲಲಿತಾರಿಂದ ಆಸ್ತಿ ಘೋಷಣೆ, 2 ಕೋಟಿ ರು ಖೋತಾ!]
ಒಂದು ವೇಳೆ ಜಯಲಲಿತಾ ಅವರನ್ನು ಖುಲಾಸೆಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದರೆ ಅಮ್ಮನಿಗೆ ನೆಮ್ಮದಿ ಸಿಗಲಿದೆ. ತೀರ್ಪು ರದ್ದಾದರೆ ಅವರು ಮತ್ತೆ ಜೈಲು 4 ವರ್ಷಗಳ ಕಾಲ ಜೈಲು ಸೇರಬೇಕಾಗುತ್ತದೆ ಮತ್ತು 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. [ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]
ಜಯಲಲಿತಾ ಅವರ ಪ್ರಕರಣದ ವಿಚಾರಣೆಯ ವಾದ ಮಂಡನೆಯನ್ನು ಜೂನ್ 1ರಂದು ಪೂರ್ಣಗೊಳಿಸಿ ಎಂದು ಸುಪ್ರೀಂಕೋರ್ಟ್ ವಕೀಲರಿಗೆ ಸೂಚನೆ ನೀಡಿದೆ. ಜುಲೈ ಮೊದಲ ವಾರದೊಳಗೆ ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆ ಇದೆ. [ತಮಿಳುನಾಡಿನಲ್ಲಿ ಅಮ್ಮ ಆಡಳಿತ, ಡೋಲು ಬಡಿತ!]