ಗಜ ಅವಾಂತರ: ತಮಿಳುನಾಡಿಗೆ ಸಾವಿರ ಕೋಟಿ ಪರಿಹಾರ ಘೋಷಣೆ
ಚೆನ್ನೈ, ನವೆಂಬರ್ 20: ಗಜ ಚಂಡಮಾರುತ ತಮಿಳುನಾಡಿನಲ್ಲಿ ಭಾರಿ ಅವಾಂತರವನ್ನು ಸೃಷ್ಟಿಸಿದ್ದು, ಪ್ರದೇಶಗಳ ಪುನರ್ ನಿರ್ಮಾಣ ಮಾಡಲು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಒಂದು ಸಾವಿರ ಕೋಟಿ ಪರಿಹಾರ ಘೋಷಿಸಿದ್ದಾರೆ.
ಇದುವರೆಗೂ ಚಂಡಮಾರುತದಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಸಾವಿರ ಮತ್ತು ಬಟ್ಟೆ ಮತ್ತು ಪಾತ್ರೆಗಳ ಖರೀದಿಗಾಗಿ 3800 ರೂ ಹಣವನ್ನು ಬಿಡುಗಡೆ ಮಾಡಲಾಗಿದೆ. ಹಾನಿಗೊಳಗಾದ ದೋಣಿ ಮಾಲಿಕರಿಗೆ 5 ಸಾವಿರ ರೂ ಗಳನ್ನು ಮಂಜೂರು ಮಾಡಲಾಗಿದೆ.
Tamil Nadu CM Edappadi K.Palaniswami and Deputy CM O. Panneerselvam today distributed relief material to people affected by #CycloneGaja in Pudukkottai. CM says,"We have sought time from the PM Modi, we will explain everything and seek financial assistance from the Union Govt." pic.twitter.com/lOhQ4DqRUf
— ANI (@ANI) November 20, 2018
ಸರ್ಕಾರಿ ಪರಿಹಾರ ಕೇಂದ್ರಗಳಲ್ಲಿ 2.51 ಲಕ್ಷ ಜನರಿಗೆ ತಮಿಳುನಾಡು ಮೂದ ಆವಿನ್ ಹಾಲು ಪೂರೈಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೇಂದ್ರದ ವಿಕೋಪ ಪರಿಹಾರ ನಿಧಿಯಿಂದ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಮತ್ತ ಪುನರ್ ಸ್ಥಾಪನೆ ಕಾರ್ಯಕ್ಕಾಗಿ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಜಾನುವಾರು, ಕೋಳಿ ಮತ್ತ ಹಾನಿಗೊಳಗಾದ ಬೆಳೆಗಾಗಿಯೇ ಪರಿಹಾರವನ್ನು ಘೋಷಿಸಲಾಗಿದ್ದು, ಇದಕ್ಕೂ ಮುನ್ನ ಸಿಎಂ ಪಳನಿಸ್ವಾಮಿ ಮೃತರ ಕುಟುಂಬಕ್ಕೆ 10 ಲಕ್ಷಪರಿಹಾರ ಘೋಷಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ತಮಿಳುನಾಡಿನ ಕರಾವಳಿ ಪ್ರದೇಶಗಳಾದ ನಾಗಪಟ್ಟಣಂ, ವೇದಾರಣ್ಯಂ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಇದುವರೆಗೂ 46 ಮಂದಿ ಮೃತಪಟ್ಟಿದ್ದಾರೆ. 82,102 ಕೃಷಿ ಭೂಮಿ ನಾಶವಾಗಿದೆ.












Click it and Unblock the Notifications