Get Updates
Get notified of breaking news, exclusive insights, and must-see stories!

ಅಭಿನಂದನ್ ಗೆ ಪರಮ ವೀರ ಚಕ್ರ ನೀಡುವಂತೆ ತಮಿಳುನಾಡಿನಿಂದ ಶಿಫಾರಸು

ಚೆನ್ನೈ, ಮಾರ್ಚ್ 08: ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್, ಪೈಲಟ್ ಅಭಿನಂದನ್ ವರ್ತಮಾನ್ ಅವರಿಗೆ ದೇಶದ ಅತ್ಯುನ್ನುತ ಸೇನಾ ಪದಕ ಪರಮ ವೀರ ಚಕ್ರ ನೀಡಿ ಗೌರವಿಸುವಂತೆ ತಮಿಳುನಾಡು ಸರ್ಕಾರದ ಪರವಾಗಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಬಾಲಕೋಟ್ ವೈಮಾನಿಕ ದಾಳಿ ಬಳಿಕ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಅಟ್ಟಿಸಿಕೊಂಡು ದಾಳಿ ನಡೆಸಿದ್ದ ಮಿಗ್ 21 ಬೈಸನ್ ವಿಮಾನದ ಪೈಲಟ್ ಅಭಿನಂದನ್ ಅವರ ಸಾಹಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಎಫ್ 16 ಹೊಡೆದುರುಳಿಸುವ ಭರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೆರೆ ಸಿಕ್ಕಿದ್ದ ಅಭಿನಂದನ್ ಅವರು ಸುಮಾರು 60 ಗಂಟೆಗಳ ಕಾಲ ಶತ್ರು ರಾಷ್ಟ್ರದ ಹಿಡಿತದಲ್ಲಿದ್ದರು.

Tamil Nadu Chief Minister Seeks Param Vir Chakra For Abhinandan Varthaman

ಆದರೂ, ದೇಶಕ್ಕೆ ಮಾರಕವಾಗಬಲ್ಲ ಯಾವುದೇ ಮಾಹಿತಿಯನ್ನು ಹೊರ ಹಾಕದೆ, ಧೈರ್ಯ ಸಂಯಮ ಮೆರೆದಿದ್ದಾರೆ. ಹೀಗಾಗಿ, ಅವರಿಗೆ ಅತ್ಯುನ್ನತ ಮಿಲಿಟರಿ ಗೌರವ ಸಿಗಬೇಕಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪರಮ್ ವೀರ್ ಚಕ್ರ ಇಲ್ಲಿ ತನಕ 21 ಬಾರಿ ನೀಡಲಾಗಿದೆ.ಯುನೈಟೆಡ್ ಸ್ಟೇಟ್ಸ್ ನ ಮೆಡಲ್ ಆಫ್ ಹಾನರ್ ಹಾಗೂ ಯುನೈಟೆಡ್ ಕಿಂಗ್ಡಮ್ ನ ವಿಕ್ಟೋರಿಯಾ ಕ್ರಾಸ್ ಗೆ ಸಮಾನದ ಮಿಲಿಟರಿ ಗೌರವ ಇದ್ದಾಗಿದೆ. ಈ ಪೈಕಿ 14 ಮಂದಿ ಹುತಾತ್ಮರಿಗೆ ಹಾಗೂ 16 ಮಂದಿ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಕಾದಾಡಿದ ಯೋಧರಿಗೆ ಲಭಿಸಿದೆ. 21 ಪ್ರಶಸ್ತಿ ವಿಜೇತರ ಪೈಕಿ 20 ಮಂದಿ ಭಾರತೀಯ ಭೂ ಸೇನೆಗೆ ಸೇರಿದ್ದರೆ, ಒಬ್ಬರು(ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಶೆಖೋನ್) ಮಾತ್ರ ಭಾರತೀಯ ವಾಯುಸೇನೆಗೆ ಸೇರಿದವರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+