ತರಕಾರಿ ಖರೀದಿಸಿದ್ರೆ ವೈರಸ್ ಫ್ರೀ: ಈ ಮಾರುಕಟ್ಟೆಗೆ ಹೋದ್ರೆ ಕೊರೊನಾ ಪಕ್ಕಾ!
ಚೆನ್ನೈ, ಮೇ.05: ನೊವೆಲ್ ಕೊರೊನಾ ವೈರಸ್ ಸೋಂಕಿನಿಂದ ನಲುಗಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯ ರಾಜಧಾನಿ ಚೆನ್ನೈನಲ್ಲಿರುವ ಒಂದೇ ಒಂದು ಸೂಪರ್ ಮಾರ್ಕೆಟ್ ನಿಂದಾಗಿ ಶರವೇಗದಲ್ಲಿ ಕೊವಿಡ್-19 ಹರಡುತ್ತಿದೆ.
ತಮಿಳುನಾಡಿನ ಕುದ್ದಾಲೂರು ಪ್ರದೇಶದಲ್ಲೇ ಕನಿಷ್ಠ 122 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಸೋಮವಾರ ಪತ್ತೆಯಾದ ಸೋಂಕಿತ ಪ್ರಕರಣಗಳ ಪೈಕಿ ಬಹುಪಾಲು ಮಂದಿಗೆ ಕೊಯಂಬೀಡು ಪ್ರದೇಶದ ಮಾರುಕಟ್ಟೆಯಲ್ಲಿಯೇ ಸೋಂಕು ತಗಲಿರುವುದು ಗೊತ್ತಾಗಿದೆ.
65 ಎಕರೆ ಪ್ರದೇಶದಲ್ಲಿರುವ ಕೊಯಂಬೀಡು ಮಾರುಕಟ್ಟೆಯು ತಮಿಳುನಾಡಿನಲ್ಲಿ ಅತ್ಯಂತ ಪ್ರಸಿದ್ಧ ಮಾರುಕಟ್ಟೆಯಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ಜನರು ಇದೇ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಸರಕುಗಳ ಮಾರಾಟ ಮತ್ತು ಖರೀದಿಗೆ ತೆರಳುತ್ತಾರೆ. ಇದೊಂದು ಮಾರುಕಟ್ಟೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳು ಗ್ರೀನ್ ಝೋನ್ ನಿಂದ ರೆಡ್ ಹಾಗೂ ಆರೆಂಜ್ ಝೋನ್ ಗಳಾಗಿ ಬದಲಾಗಿವೆ.

ಕೊರೊನಾ ವೈರಸ್ ಕೇಂದ್ರವಾದ ಚೆನ್ನೈನ ಮಾರುಕಟ್ಟೆ
ಚೆನ್ನೈನಲ್ಲಿರುವ ಕೊಯಂಬೀಡು ಮಾರುಕಟ್ಟೆಯು ಕೊರೊನಾ ವೈರಸ್ ಹರಡುವಿಕೆಯ ಕೇಂದ್ರ ಸ್ಥಾನವಾಗಿದೆ. ಕುದ್ದಾಲೂರ್ ನಿಂದ ದಿಂದಿಗಲ್ ಗೆ ತೆರಳಿದ ಸಾಕಷ್ಟು ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಇನ್ನೂ, 450ಕ್ಕೂ ಅಧಿಕ ಮಂದಿಯ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿ ತಪಾಸಣೆಗೆ ಕಳುಹಿಸಿದ್ದು, ವರದಿಗಳು ಬರಬೇಕಿದೆ.

ಕೊಯಂಬೀಡು ಮಾರುಕಟ್ಟೆಗೆ ತೆರಳಿದ 82 ಮಂದಿಗೆ ಸೋಂಕು
ಸೋಮವಾರ ಕೊಯಂಬೀಡು ಮಾರುಕಟ್ಟೆಗೆ ಭೇಟಿ ನೀಡಿದ ವಿಲ್ಲುಪುರಂ ಮೂಲದ 49 ಮಂದಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಭಾನುವಾರ ಇದೇ ಮಾರುಕಟ್ಟೆಗೆ ತೆರಳಿದ್ದ 33 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು.

ರೆಡ್ ಝೋನ್ ಗಳಾಗಿ ಬದಲಾದ ಆರೆಂಜ್ ಝೋನ್!
ಕೊಯಂಬೀಡು ಮಾರುಕಟ್ಟೆ ಲಿಂಕ್ ನಿಂದಾಗಿ ಕಿತ್ತಳೆ ವಲಯದಲ್ಲಿದ್ದ ತಮಿಳುನಾಡಿದ ಮೂರು ಜಿಲ್ಲೆಗಳು ಕೆಂಪು ವಲಯಗಳಾಗಿ ಬದಲಾಗಿವೆ. ತಮಿಳುನಾಡಿನ ಕುದ್ದಾಲೂರು, ಟೆಂಕಾಸಿ ಹಾಗೂ ದಿಂಡಿಗಲ್ ಜಿಲ್ಲೆಗಳನ್ನು ಕಿತ್ತಳೆ ವಲಯದಿಂದ ಕೆಂಪು ವಲಯಕ್ಕೆ ಸೇರಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಕೆಂಪು ವಲಯಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಚೆನ್ನೈನ ಈ ಮಾರುಕಟ್ಟೆಗೆ ಹೋಗಿದ್ರೆ ತಪಾಸಣೆ ಮಾಡಿಸಿಕೊಳ್ಳಿ
ಚೆೆನ್ನೈನಲ್ಲಿ ಇರುವ ಕೊಯಂಬೀಡು ಮಾರುಕಟ್ಟೆಗೆ ಒಮ್ಮೆ ಭೇಟಿ ನೀಡಿದವರೂ ಕೂಡಾ ಎಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಕೊರೊನಾ ವೈರಸ್ ಸೋಂಕು ತಪಾಸಣೆಗೆ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ಆಯಾ ಜಿಲ್ಲಾಡಳಿತಗಳು ವೈದ್ಯಕೀಯ ತಪಾಸಣೆಗೆ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿವೆ ಎಂದು ತಿಳಿದು ಬಂದಿದೆ.
-
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ












Click it and Unblock the Notifications