ಪತಿಯ ಅವ್ಯವಹಾರ ಪತ್ತೆ, ವಿಮಾನದಲ್ಲಿ ಪತ್ನಿ ಹಲ್ಲಾಗುಲ್ಲಾ
ಚೆನ್ನೈ, ನವೆಂಬರ್ 07: ವಿಮಾನದಲ್ಲಿ ನಿದ್ದೆ ಹೋಗಿದ್ದ ಪತಿಯ ಫೋನ್ ಅನ್ನು ಅನ್ ಲಾಕ್ ಮಾಡಿದ ಪತ್ನಿ, ಪತಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದು ವಿಮಾನದಲ್ಲಿಯೇ ಗಲಾಟೆ ಆರಂಭಿಸಿದ ವಿಚಿತ್ರ ಘಟನೆ ಕತಾರ್ ಏರ್ ವೇಸ್ ನಲ್ಲಿ ನಡೆದಿದೆ.
ದೊಹಾದಿಂದ ಬಾಲಿಗೆ ಹೊರಟಿದ್ದ ಕತಾರ್ ಏರ್ ವೇಸ್ ನ QR-962 ವಿಮಾನ ಭಾರತದಲ್ಲಿ ನಿಲ್ಲದೆ, ಸೀದಾ ಬಾಲಿಗೆ ಹೋಗಬೇಕಿತ್ತು. ಆದರೆ ದಂಪತಿಯ ವಿಚಿತ್ರ ವರ್ತನೆಯಿಂದಾಗಿ ಸಹಪ್ರಯಾಣಿಕರಿಗೆ ತೊಂದರೆ ಉಂಟಾಗಬಾರದೆಂದು ವಿಮಾನವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಸಿ, ದಂಪತಿ ಮತ್ತು ಅವರ ಮಗುವನ್ನು ವಿಮಾನದಿಂದ ಆಚೆಕಳಿಸಲಾಯಿತು!

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ದೊಹಾದಿಂದ ಇರಾನಿ ದಂಪತಿ ಮತ್ತು ಅವರ ಮಗು ಬಾಲಿಗೆಂದು ಹೊರಟಿದ್ದಾರೆ. ವಿಮಾನದಲ್ಲಿ ಪತಿ ನಿದ್ದೆ ಹೋಗಿದ್ದಾನೆ. ಈ ಸಮಯದಲ್ಲಿ ಪತಿಯ ಫಿಂಗರ್ ಪ್ರಿಂಟ್ ಅನ್ನು ಸ್ಕ್ಯಾನ್ ಮಾಡಿ ಆತನ ಸ್ಮಾರ್ಟ್ ಫೋನ್ ಅನ್ನು ಅನ್ ಲಾಕ್ ಮಾಡಿದ ಆತನ ಪತ್ನಿ, ಪತಿಯ 'ರಹಸ್ಯ ವ್ಯವಹಾರ'ಗಳನ್ನೆಲ್ಲ ಪತ್ತೆ ಮಾಡಿದ್ದಾಳೆ.
ಪತಿ ತನಗೆ ಮೋಸ ಮಾಡುತ್ತಿದ್ದಾನೆ ಎಂಬುದು ತಿಳಿಯುತ್ತಿದ್ದಂತೆಯೇ ವಿಮಾನದಲ್ಲಿಯೇ ಜಗಳ ಆರಂಭಿಸಿದ್ದಾಳೆ. ಪತ್ನಿಯ ಅನಿರೀಕ್ಷಿತ ವರ್ತನೆಯಿಂದ ದಿಗ್ಭ್ರಮೆಗೊಂಡ ಪತಿ ಆಕೆಯನ್ನು ಸಂತೈಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನಂತರ ದಂಪತಿಗಳ ಕಲಹ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ವಿಮಾನದಲ್ಲಿದ್ದ ಗಗನಸಖಿಯರು, ಇತರೆ ಸಿಬ್ಬಂದಿಗಳು ಅವರ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಕಲಹ ನಿಯಂತ್ರಣಕ್ಕೆ ಬರುವ ಬದಲು, ಮಹಿಳೆ ವಿಮಾನಯಾನ ಸಿಬ್ಬಂದಿಗಳನ್ನೂ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ.
ಪರಿಸ್ಥಿತಿ ಮಿತಿಮೀರಿದಾಗ ಬೇರೆ ದಾರಿ ಕಾಣದೆ ವಿಮಾನವನ್ನು ಭಾರತದ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಸಿ, ದಂಪತಿ ಮತ್ತು ಮಗುವನ್ನು ವಿಮಾನದಿಂದ ಆಚೆ ಕಳಿಸಿ, ನಂತರ ವಿಮಾನ ಬಾಲಿಯತ್ತ ಪ್ರಯಾಣ ಬೆಳೆಸಿದೆ. ಸದ್ಯಕ್ಕೆ ಭಾರತದ ವೀಸಾ ಸಹ ಇವರ ಬಳಿ ಇಲ್ಲ. "ಸಹಪ್ರಯಾಣಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಾಯ್ತು. ಅವರ ವೈಯಕ್ತಿಕ ವಿಷಯಗಳ ಬಗ್ಗೆ ನಾವೆಂದಿಗೂ ಮಾತನಾಡುವುದಿಲ್ಲ. ಅದು ಸೌಜನ್ಯವಲ್ಲ" ಎಂದು ಕತಾರ್ ಏರ್ ವೇಸ್ ಆಡಳಿತ ಮಂಡಳಿ ತಿಳಿಸಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications