ಪನ್ನೀರ್ಗೆ ಕಣ್ಣೀರು ಗ್ಯಾರಂಟಿ! ಚಿನ್ನಮ್ಮ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ!
ಪದಚ್ಯುತಿ ಖಚಿತವಾಗುತ್ತಿದ್ದಂತೆ ಒಂದು ಪ್ರತಿಭಟನೆಯನ್ನೂ ಓ ಪನ್ನೀರ್ ಸೆಲ್ವಂ ಅವರು ಮಾಡದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಮುಖ್ಯಮಂತ್ರಿ ಪಟ್ಟವನ್ನು ಇಷ್ಟು ಸುಲಭವಾಗಿ ಯಾರಾದರೂ ಬಿಟ್ಟುಕೊಡುತ್ತಾರಾ?
ಚೆನ್ನೈ, ಫೆಬ್ರವರಿ 04 : ನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ 'ಚಿನ್ನಮ್ಮ' ಶಶಿಕಲಾ ನಟರಾಜನ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ತಮಿಳುನಾಡಿನಲ್ಲಿ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಓ ಪನ್ನೀರ್ ಸೆಲ್ವಂ ಅವರನ್ನು ಪದಚ್ಯುತಿಗೊಳಿಸಲು ಸರ್ವಸಿದ್ಧತೆಗಳು ನಡೆದಿದ್ದು, ಶಶಿಕಲಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವುದು ಹೆಚ್ಚುಕಡಿಮೆ ಖಚಿತವಾಗಿದೆ. [ಶಶಿಕಲಾ ಮುಖ್ಯಮಂತ್ರಿಯಾಗಬೇಕಂತೆ! ಅಯ್ಯೋ ಪಾಪ ಪನ್ನೀರ್!]
ಇದನ್ನು ಅಂತಿಮಗೊಳಿಸಲು ಭಾನುವಾರ ಚೆನ್ನೈನಲ್ಲಿ ಎಐಎಡಿಎಂಕೆಯ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದ್ದು, ಶಶಿಕಲಾ ಅವರು ಮುಂದಿನ ಮುಖ್ಯಮಂತ್ರಿ ಎಂದು ಅಧಿಕೃತವಾಗಿ ಘೋಷಿಸುವುದು ಬಾಕಿಯಿದೆ. [ಪನ್ನೀರ್ ಸೆಲ್ವಂ ಎಂಬ ಆಸಾಮಿಯ ಸ್ವಾಮಿನಿಷ್ಠೆಯ ಪರಾಕಾಷ್ಠೆ]
ನವಮಿಯ ನಂತರ ಫೆಬ್ರವರಿ 6ನೇ ತಾರೀಖಿನಂದು ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತವನ್ನು ಹುಡುಕಲಾಗಿದೆ. ಸೋಮವಾರ ಪದಗ್ರಹಣ ಮಾಡಲು ಪ್ರಶಸ್ತವಾದ ಸಮಯ ಎಂದು ಜ್ಯೋತಿಷಿಗಳು ಶಶಿಕಲಾಗೆ ಹೇಳಿದ್ದಾರೆ. [ತಮಿಳುನಾಡಿನಲ್ಲಿ 'ಚಿನ್ನಮ್ಮ' ಶಶಿಕಲಾ ನಟರಾಜನ್ ಯುಗಾರಂಭ!]
ಶಶಿಕಲಾ ಪ್ರಮಾಣ ವಚನ ಸ್ವೀಕರಿಸುವ ದಿನದಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ದೇವಸ್ಥಾನ ಸೇರಿದಂತೆ ಎಲ್ಲ ಶಿವನ ದೇವಸ್ಥಾನಗಳಲ್ಲಿ ಕುಂಭಾಭಿಷೇಕ ನಡೆಸಬೇಕೆಂದು ಆದೇಶ ಕೂಡ ಹೊರಡಿಸಲಾಗಿದೆ.
ಪದಚ್ಯುತಿ ಖಚಿತವಾಗುತ್ತಿದ್ದಂತೆ ಒಂದು ಪ್ರತಿಭಟನೆಯನ್ನೂ ಓ ಪನ್ನೀರ್ ಸೆಲ್ವಂ ಅವರು ಮಾಡದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಮುಖ್ಯಮಂತ್ರಿ ಪಟ್ಟವನ್ನು ಇಷ್ಟು ಸುಲಭವಾಗಿ ಯಾರಾದರೂ ಬಿಟ್ಟುಕೊಡುತ್ತಾರಾ?
ದುರಾದೃಷ್ಟವಂತ ಮುಖ್ಯಮಂತ್ರಿಗಳ ಸಾಲಿನಲ್ಲಿ ಮೊದಲ ಸ್ಥಾನ ಗಳಿಸುವ ಓ ಪನ್ನೀರ್ ಸೆಲ್ವಂ ಅವರು ಮೂರನೇ ಬಾರಿ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ. ಹಿಂದೆ ಎರಡು ಬಾರಿ ಜಯಲಲಿತಾ ಅವರಿಗೆ ಮುಖ್ಯಮಂತ್ರಿ ಪದವಿಯನ್ನು ಪನ್ನೀರ್ ಬಿಟ್ಟುಕೊಟ್ಟಿದ್ದರು. [ಚಿನ್ನಮ್ಮ ತಮಿಳ್ನಾಡಿನ ಕಿಂಗ್ ಮೇಕರ್ ಆಗಿದ್ದು ಹೇಗೆ?]