ಅಮಿತಾಭ್ ಬಚ್ಚನ್ ಸಲಹೆ ಧಿಕ್ಕರಿಸಿದ ರಜನೀಕಾಂತ್
ಚೆನ್ನೈ, ಡಿಸೆಂಬರ್ 17: ಬಾಲಿವುಡ್ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಸಲಹೆಯನ್ನು ಧಿಕ್ಕರಿಸಿ ರಾಜಕೀಯ ಪ್ರವೇಶಿಸಿರುವುದನ್ನು ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಹೊರಹಾಕಿದ್ದಾರೆ.
ರಾಜಕೀಯ ಸೇರ್ಪಡೆ ಬೇಡ ಎನ್ನುವ ಬಿಗ್ಬಿಯ ಸ್ಪಷ್ಟ ನಿಲುವಿನ ಹೊರತಾಗಿಯೂ ಅನಿವಾರ್ಯ ಕಾರಣಗಳಿಂದ ರಾಜಕೀಯಕ್ಕೆ ಪ್ರವೇಶಿಸಿದೆ ಎಂದು ರಜನೀಕಾಂತ್ ತಿಳಿಸಿದ್ದಾರೆ.
2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ರಜನೀಕಾಂತ್ ಪಕ್ಷವು ಚುನಾವಣೆಗೆ ದುಮುಕಲಿದೆ. ಈ ಹಂತದಲ್ಲಿ ತಮ್ಮ ಭವಿಷ್ಯದ ರಾಜಕೀಯ ನಡೆ ಬಗ್ಗೆ ಮಾತನಾಡಿದ ರಜನೀಕಾಂತ್ ನಾನು ಅಮಿತಾಭ್ ಬಚ್ಚನ್ನಿಂದ ಪ್ರೇರಣೆಯಾಗಿದ್ದೇನೆ ಇದು ಸ್ಕ್ರೀನ್ ಮೇಲೆ ಹಾಗೂ ಸ್ಕ್ರೀನ್ ಹೊರತಾಗಿಯೂ ಹೌದು.

ಯಶಸ್ವಿ ಜೀವನಕ್ಕಾಗಿ ಮೂರು ಸೂತ್ರಗಳನ್ನು ಪಾಲಿಸುವಂತೆ ಅಮಿತಾಭ್ ಹೇಳಿದ್ದರು.ಮೊದಲನೆಯದಾಗಿ ವ್ಯಾಯಾಮ, ಎರಡನೆಯದಾಗಿ ಸದಾ ಕೆಲಸದಲ್ಲಿ ತೊಡಗಿರುವುದು, ಮೂರನೆಯದಾಗಿ ಯಾವುದೇ ಕಾರಣಕ್ಕೂ ರಾಜಕೀಯವನ್ನು ಪ್ರವೇಶಿಸಕೂಡದು ಎಂದು ಹೇಳಿದ್ದರು.
ಆದರೆ ಕೆಲ ರಾಜಕೀಯ ಸನ್ನಿವೇಶಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಸದ್ಯ ದರ್ಬಾರ್ ಚಿತ್ರ ಮಾಡುತ್ತಿರುವ ರಜನೀಕಾಂತ್ ರ ವಿಧಾನಸಭಾ ಚುನಾವಣೆಯೊಳಗೆ ಅವರ ಪಕ್ಷ ಚುನಾವಣೆಗೆ ನಿಂತು ಜನರ ವಿಶ್ವಾಸ ಗಳಿಸುವ ಭರವಸೆ ಹೊಂದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಗೂ ಉಪ ಚುನಾವಣೆಯಲ್ಲಿ ರಜನೀಕಾಂತ್ ಪಕ್ಷ ಸ್ಪರ್ಧಿಸಿರಲಿಲ್ಲ. ಈ ಚುನಾವಣೆಗೂ ಮುನ್ನವೇ ಪಕ್ಷವನ್ನು ಘೋಷಿಸಿದ್ದರು.
ಹೀಗಾಗಿ ರಜನೀಕಾಂತ್ ರಾಜಕೀಯ ಪ್ರವೇಶವೇ ದೊಡ್ಡ ನಗೆಪಾಟಲಾಗಿತ್ತು. ಅನಾವಶ್ಯಕವಾಗಿ ರಾಜಕೀಯ ಪ್ರವೇಶಿಸಿದ್ದಾರೆ. ಚುನಾವಣಾ ರಾಜಕೀಯಕ್ಕೆ ದೊಡ್ಡ ಹಾಸ್ಯ ಎಂದು ಜನರ ನಗೆಯಾಡಿದ್ದರು.
ಹೀಗಾಗಿ ರಜನೀಕಾಂತ್ ರಾಜಕೀಯ ಪಕ್ಷದ ಬಗ್ಗೆ ಕುತೂಹಲವಿದ್ದರೂ ಇದು ಕಾರ್ಯಗತವಾಗದ ರಾಜಕೀಯ ಯೋಜನೆ ಎಂದು ತಮಿಳುನಾಡಿನ ಜನತೆ ಮಾತನಾಡಿಕೊಂಡಿದ್ದರು. ಅತ್ತ ಕಮಲ್ಹಾಸನ್ ಪಕ್ಷ ಘೋಷಿಸಿ ನೀರಸ ಪ್ರದರ್ಶನ ತೋರುತ್ತಿರುವ ಬೆನ್ನಲ್ಲೇ ರಜನೀಕಾಂತ್ ಈಗ ತಮ್ಮ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ












Click it and Unblock the Notifications