ಆಸ್ತಿ ತೆರಿಗೆ: ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಸೂಪರ್ ಸ್ಟಾರ್ ರಜನಿಕಾಂತ್
ಚೆನ್ನೈ, ಅಕ್ಟೋಬರ್ 14: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೊಡಂಬಕಂನಲ್ಲಿರುವ ನಟ ರಜನಿಕಾಂತ್ ಅವರ ಮದುವೆ ಹಾಲ್ಗೆ ಚೆನ್ನೈ ಕಾರ್ಪೊರೇಷನ್ 6.50 ಲಕ್ಷ ಆಸ್ತಿ ತೆರಿಗೆಯನ್ನು ವಿಧಿಸಿದೆ.

ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೊರೊನಾ ಸೋಂಕಿನಿಂದಾಗಿ ಮಾರ್ಚ್ 24ರಿಂದ ಮದುವೆ ಹಾಲ್ಗಳನ್ನು ಮುಚ್ಚಲಾಗಿತ್ತು. ಇಲ್ಲಿಯವರೆಗೆ ಯಾವ ಆದಾಯವೂ ಬಂದಿಲ್ಲ. ಹಾಗಿರುವಾಗ 6.50 ಲಕ್ಷದಷ್ಟು ಆಸ್ತಿ ತೆರಿಗೆ ಕಟ್ಟುವುದು ಹೇಗೆ ಎಂದು ಉಲ್ಲೇಖಿಸಿದ್ದಾರೆ.
ನ್ಯಾಯಪೀಠದ ಮುಂದೆ ತರಾತುರಿಯಲ್ಲಿ ಅರ್ಜಿ ಸಲ್ಲಿಸಿದ್ದಕ್ಕಾಗಿ ರಜನಿಕಾಂತ್ ಅವರನ್ನು ಹೈಕೋರ್ಟ್ ಖಂಡಿಸಿದೆ. ಮತ್ತು ದಂಡ ವಿಧಿಸುವುಆಗಿ ಎಚ್ಚರಿಸಿದೆ.
ನ್ಯಾ.ಅನಿತಾ ಸುಮಂತ್ ಅವರು ಮಾತನಾಡಿ, ಕಾರ್ಪೊರೇಷನ್ನಿಂದ ನೋಟಿಸ್ ಬಂದು 10 ದಿನಗಳಲ್ಲಿ ನೀವು ನ್ಯಾಯಾಲಯವನ್ನು ಸಂಪರ್ಕಿಸಿ ನಮ್ಮ ಸಮಯ ವ್ಯರ್ಥ ಮಾಡಿದ್ದೀರಿ ಎಂದು ಹೇಳಿದ್ದರಿಂದ ನಟ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ.












Click it and Unblock the Notifications