ಚೆನ್ನೈನ ಅಮೆರಿಕಾ ದೂತವಾಸ ಕಾನ್ಸಲ್ ಜನರಲ್ ಹುದ್ದೆಗೆ ಜ್ಯುಡಿತ್ ರೇವಿನ್
ಚೆನ್ನೈ, ಸೆಪ್ಟೆಂಬರ್.06: ಚೆನ್ನೈನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಕಾನ್ಸುಲ್ ಜನರಲ್ ಆಗಿ ಜ್ಯುಡಿತ್ ರೇವಿನ್ ಸೆ.06ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಕೊರೊನಾವೈರಸ್ ಸೋಂಕು ಸಾಂಕ್ರಾಮಿಕದ ಈ ಐತಿಹಾಸಿಕ ಕಷ್ಟದ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರತಿನಿಧಿಸುವುದು ನನ್ನ ದೊಡ್ಡ ಭಾಗ್ಯವಾಗಿದೆ ಎಂದು ಕಾನ್ಸುಲ್ ಜನರಲ್ ರೇವಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೆನ್ನೈಗೆ ಬರುವ ಮೊದಲು, ಕಾನ್ಸುಲ್ ಜನರಲ್ ರೇವಿನ್ ಪೆರುವಿನ ಲಿಮಾದಲ್ಲಿರುವ ಯು.ಎಸ್. ರಾಯಭಾರ ಕಚೇರಿಯಲ್ಲಿ ಸಾರ್ವಜನಿಕ ವ್ಯವಹಾರಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅದಕ್ಕೂ ಮೊದಲು ವಾಷಿಂಗ್ಟನ್ ಡಿ.ಸಿ.ಯ ಹೈಟಿ ವಿಶೇಷ ಸಂಯೋಜಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಪಾಕಿಸ್ತಾನದ ಇಸ್ಲಮಾಬಾದ್ ನಲ್ಲಿ ಡೆಪ್ಯುಟಿ ಕಲ್ಚರಲ್ ಆಫೀಸರ್ ಆಗಿ ಬಳಿಕ ಕಲ್ಚರಲ್ ಆಫೀಸರ್ ಆಗಿ ಕೆಲಸ ಮಾಡಿರುವ ಅನುಭವವು ರೇವಿನ್ ಅವರಿಗಿದೆ. ಈ ಅವಧಿಯಲ್ಲಿ ಅಮೆರಿಕಾ ಸರ್ಕಾರದ ಅತ್ಯಂತ ದೊಡ್ಡ ವಿನಿಮಯ ಕಾರ್ಯಕ್ರಮ ನಿರ್ವಹಿಸಿದ ಹಿರಿಮೆ ಅವರಿಗೆ ಸೇರಿದ್ದಾಗಿದೆ.
ನಮಸ್ಕಾರ ಕರ್ನಾಟಕ! ನಮ್ಮ ಹೊಸ ಕಾನ್ಸಲ್ ಜನರಲ್ ಜ್ಯುಡಿತ್ ರೇವನ್ ಆಗಮಿಸಿದ್ದಾರೆ. ದಕ್ಷಿಣ ಭಾರತಕ್ಕೆ ವಿಶೇಷ ಸಂದೇಶ ಹೊತ್ತು ತಂದಿದ್ದಾರೆ. ಸಿಜಿ ಜ್ಯುಡಿತ್ ಅವರ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ, ಕಾಮೆಂಟ್ ವಿಭಾಗದಲ್ಲಿ ಒಂದೆರಡು ಸಾಲು ಬರೆದು ಅವರಿಗೆ ಹಲೊ ಹೇಳಿ. #SouthIndia #CGChennai #KnowJudith pic.twitter.com/4ufWG2rUOW
— US Consulate Chennai (@USAndChennai) September 6, 2020
2003ರಲ್ಲಿ ಸೇವೆ ಆರಂಭಿಸಿದ ರೇವಿನ್:
ಡೊಮಿನಿಕಲ್ ರಿಪಬ್ಲಿಕ್ ಸ್ಯಾಂಟೋ ಡೊಮಿಂಗೊ, ಸುಡಾನ್ ಖರ್ತೋಂ, ಕ್ಯಾಮರೂನ್ ಯುವಾಂಡೆ ಹಾಗೂ ಮೆಕ್ಸಿಕೋನ ಸಿಯುಡಾಡ್ ಜುವಾರೆನ್ ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. 2003ರಲ್ಲಿ ಸ್ಟೇಟ್ ಡಿಪಾರ್ಟ್ ಮೆಂಟ್ ನಲ್ಲಿ ಸೇವೆ ಆರಂಭಿಸಿದ ರೇವಿನ್ ಅವರು 2003-2005ರಲ್ಲಿ ಮೆಕ್ಸಿಕೋ ಸಿಯುಡಾಡ್ ಜುವಾರೆನ್ ದೂತಾವಾಸದಲ್ಲಿ ವೈಸ್ ಕಾನ್ಸಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳಲ್ಲಿ ಸಂಪಾದಕಿ, ಅನುವಾದಕಿ ಮತ್ತು ಪತ್ರಕರ್ತೆಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿ ಅನುಭವವೂ ಇವರಿಗಿದೆ.
-
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain












Click it and Unblock the Notifications