ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ ಜಯಂತಿ ನಟರಾಜನ್
ಚೆನ್ನೈ, ಜ.30: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ವಿರುದ್ಧ ಕಿಡಿಕಾರಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಪಕ್ಷದ ಹಿರಿಯ ನಾಯಕಿ ಜಯಂತಿ ನಟರಾಜನ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಮ್ಮ ಪತ್ರದ ಮರ್ಮ ಹಾಗೂ ಕಾಂಗ್ರೆಸ್ ತೊರೆಯುತ್ತಿರುವುದೇಕೆ ಎಂಬುದನ್ನು ವಿವರಿಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನನಗೆ ನೀಡಿದ ಹುದ್ದೆ ಹಾಗೂ ಗೌರವಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಕುಟುಂಬದ ರಕ್ತದಲ್ಲೇ ಕಾಂಗ್ರೆಸ್ ಪಕ್ಷ ಬರೆದಿದೆ. ನಾನು ಚಿಕ್ಕಂದಿನಿಂದಲೂ ಕಾಂಗ್ರೆಸ್ಸಿಗೆ ನಿಷ್ಠಳಾಗಿ ಬೆಳೆದೆ. ಆದರೆ, ನಾನು ಪಕ್ಷ ಸೇರಿದಾಗ ಇದ್ದ ಸಿದ್ಧಾಂತ, ವಾತಾವರಣ ಈಗ ಇಲ್ಲ. ಹೀಗಾಗಿ ನಾನು ಇಲ್ಲಿ ಉಳಿಯಲು ಆಗುತ್ತಿಲ್ಲ ಎಂದು ಜಯಂತಿ ನಟರಾಜನ್ ಬೇಸರ ವ್ಯಕ್ತಪಡಿಸಿದರು. [ಸೋನಿಯಾಗೆ ಜಯಂತಿ ಬರೆದ ಪತ್ರ ಇಲ್ಲಿದೆ]

ಜಯಂತಿ ನಟರಾಜನ್ ಅವರು ಪತ್ರದಲ್ಲಿ ಬರೆದಿದ್ದನ್ನೇ ಬಹುತೇಕ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ವಿಶೇಷವಾಗಿತ್ತು. ಸುದ್ದಿಗೋಷ್ಠಿ ವಿವರ ಇಲ್ಲಿದೆ:
* ಲೋಕಸಭೆ ಚುನಾವಣೆಗೆ ನೂರು ದಿನ ಇದೇ ಎನ್ನುವಾಗ ನನ್ನನ್ನು ಮೂಲೆಗುಂಪು ಮಾಡಲಾಯಿತು.
* ನಾನು ಏನಾದರೂ ತಪ್ಪು ಮಾಡಿದ್ದರೆ ಶಿಕ್ಷಿಸಲಿ, ಭ್ರಷ್ಟಾಚಾರ ಎಸಗಿದ್ದರೆ ತನಿಖೆ ನಡೆಸಲಿ, ನೇಣಿಗೇರಲು ನಾನು ಸಿದ್ಧ
* ಗಾಂಧಿ ಪರಿವಾರದ ನಿಷ್ಠಾವಂತೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇದರಲ್ಲಿ ಮುಜುಗರವಿಲ್ಲ.
Today I announce my resignation from primary membership of Congress: Jayanthi Natarajan pic.twitter.com/vC1UVYuano
— ANI (@ANI_news) January 30, 2015 * ನನ್ನನ್ನು ಯಾರು ಬೆದರಿಸಿಲ್ಲ. ಒತ್ತಡ ಹೇರಿಲ್ಲ. ನನ್ನ ಸ್ವ ಇಚ್ಛೆಯಿಂದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. [ಜಯಂತಿ ನಟರಾಜನ್ ಯಾರು?]
* ಬಿಜೆಪಿಯಾಗಲಿ ಅಥವಾ ತಮಿಳುನಾಡಿನ ಪ್ರಾದೇಶಿಕ ಪಕ್ಷವಾಗಲಿ ಸೇರುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.
* ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಆಗಲಿಲ್ಲ, ಫಿಕ್ಕಿ ಸಮ್ಮೇಳನದ ಬಗ್ಗೆ ರಾಹುಲ್ ಗೆ ಪತ್ರ ಬರೆದರೆ I am a little busy ಎಂದು ಉತ್ತರಿಸಿದ್ದರು. ವಿನಾಕಾರಣ ವಕ್ತಾರೆ ಸ್ಥಾನದಿಂದ ಕೆಳಗಿಳಿಸಲಾಯಿತು.
I have no issues with State party at all, I was sidelined by the National High Command: Jayanthi Natarajan
— ANI (@ANI_news) January 30, 2015 * ರಾಜ್ಯ ಕಾಂಗ್ರೆಸ್ ಜೊತೆ ಯಾವುದೇ ವೈಮನಸ್ಯವಿಲ್ಲ. ಹೈಕಮಾಂಡ್ ನಾಯಕರಿಂದ ತುಂಬಾ ನೊಂದಿದ್ದೇನೆ.
* ಒಡಿಶಾದಲ್ಲಿ ವೇದಾಂತ ಸಂಸ್ಥೆ ಗಣಿಗಾರಿಕೆ ವಿಷಯದಲ್ಲಿ ರಾಹುಲ್ ಗಾಂಧಿ ಅವರು ಮೂಗು ತೂರಿಸಿದರು. ಸುಮಾರು 30,000 ಕೋಟಿ ರು ಪ್ರಾಜೆಕ್ಟ್ ಕೈತಪ್ಪುತ್ತಿದೆ ಎಂದು ನನ್ನ ಸಹದ್ಯೋಗಿಗಳು ಒತ್ತಡ ಹೇರಿದರು.
It is my duty to make sure,every single step I took should be strictly according to law, and to preserve the environment: Jayanthi Natarajan
— ANI (@ANI_news) January 30, 2015 * ಅದರೆ, ನಾನು ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಿರಲಿಲ್ಲ. ನಾನು ಮಾಡಿದ್ದು ಸರಿ ಎಂದು ಸುಪ್ರೀಂಕೋರ್ಟ್ ಕೂಡಾ ತೀರ್ಪು ನೀಡಿತು.
But I had to keep on telling that I have to make sure that environment and future is not destroyed:Jayanthi Natarajan pic.twitter.com/ITqPI8wE5O
— ANI (@ANI_news) January 30, 2015 * ವಿನಾಕಾರಣ ನನ್ನನ್ನು ರಾಹುಲ್ ವಿರುದ್ಧ ಎತ್ತಿ ಕಟ್ಟಲಾಯಿತು. ಫಿಕ್ಕಿ ಸಮ್ಮೇಳನದಲ್ಲಿ ರಾಹುಲ್ ನೀಡಿದ ಹೇಳಿಕೆ ಪಕ್ಷಕ್ಕೆ ಮುಳುವಾಯಿತು.
* ನಾನು ನಾಲ್ಕು ತಲೆಮಾರಿನ ನಾಯಕಿಯಾಗಿ ನಮ್ಮ ಕುಟುಂಬದಿಂದ ಕಾಂಗ್ರೆಸ್ ಗೆ ಸೇರಿದೆ. ನನಗೆ ಈಗ ನನ್ನ ನೆಚ್ಚಿನ ಪಕ್ಷದಲ್ಲೇ ಉಸಿರುಗಟ್ಟಿಸುವಂಥ ವಾತಾವರಣ ಸೃಷ್ಟಿಯಾಗಿರುವುದು ಬೇಸರ ತರಿಸಿದೆ.
* ನಾನು ಬುಡಕಟ್ಟು ಜನಾಂಗ, ಪರಿಸರ ಉಳಿಸಲು ಶ್ರಮಿಸಿದ್ದೇ ತಪ್ಪಾಯಿತೇ? ಇಂದಿರಾ ಗಾಂಧಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾನು ಚಲಿಸಿದೆ.
* ಬಿಜೆಪಿ ಸರ್ಕಾರ ನಾನು ಕ್ಲಿಯೆರನ್ಸ್ ಕೊಟ್ಟ ಯೋಜನೆಗಳನ್ನು ಮಾತ್ರ ಮುಂದುವರೆಸಿ ಪರಿಸರ ಕಾಳಜಿ ಮೆರೆದಿದೆ. ಇದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications