ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಯಾ ಟಿವಿಯಿಂದಲೇ ಮೊದಲಿಗೆ ಗಾಳಿ ಸುದ್ದಿ ಹಬ್ಬಿದ್ದು!
ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ನಿಧನರಾದ ಸುದ್ದಿ ಜಯಾ ಟಿವಿಯ ಅಧೀನದ ಜಯಾ ಪ್ಲಸ್ ವಾಹಿನಿಯಿಂದ ಸೋಮವಾರ ಸಂಜೆ ಪ್ರಸಾರವಾಗಿ ಭಾರಿ ಗೊಂದಲಕ್ಕೆ ಕಾರಣವಾಯಿತು. ಸಾಮಾಜಿಕ ಜಾಲ ತಾಣಗಳಲ್ಲಿ ನಿಧನದ ಗಾಳಿ ಸುದ್ದಿ ಹರಿದಾಡತೊಡಗಿತು.
ಚೆನ್ನೈ, ಡಿಸೆಂಬರ್ 05: ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ನಿಧನರಾದ ಸುದ್ದಿ ಜಯಾ ಟಿವಿಯ ಅಧೀನದ ಜಯಾ ಪ್ಲಸ್ ವಾಹಿನಿಯಿಂದ ಸೋಮವಾರ ಸಂಜೆ ಪ್ರಸಾರವಾಗಿ ಭಾರಿ ಗೊಂದಲಕ್ಕೆ ಕಾರಣವಾಯಿತು.
ಇದರಿಂದ
ಸಾಮಾಜಿಕ
ಜಾಲ
ತಾಣಗಳಲ್ಲಿ
ನಿಧನದ
ಗಾಳಿ
ಸುದ್ದಿ
ಹರಿದಾಡತೊಡಗಿತು.ಎಐಎಡಿಎಂಕೆ
ಕಾರ್ಯಕರ್ತರು
ಕೂಡಾ
ಶೋಕಾಚಾರಣೆಯಲ್ಲಿ
ಮುಳುಗುವಂತೆ
ಮಾಡಿದ
ಘಟನೆ
ನಡೆದೇ
ಹೋಯಿತು.
ಸತ್ಯಾಸತ್ಯತೆ ಪರೀಕ್ಷಿಸದೆ ಪಕ್ಷದ ಕಚೇರಿಯಲ್ಲಿ ಚರಮಗೀತೆ ಹಾಡಿ, ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸಂತಾಪ ಸೂಚಿಸಲಾಯಿತು. ಅಪೋಲೋ ಆಸ್ಪತ್ರೆಯಿಂದ ಮತ್ತೊಮ್ಮೆ ಸ್ಪಷ್ಟನೆ ಸಿಗುವ ತನಕ ಗೊಂದಲ ಹೀಗೆ ಮುಂದುವರೆದಿತ್ತು.
ಎಐಎಡಿಎಂಕೆ ಪಕ್ಷದ ಮುಖವಾಣಿಯಾಗಿರುವ ಜಯಾ ಟಿವಿ ಅಧಿಕೃತ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಸುದ್ದಿಯನ್ನು ಟಿವಿ ಕೂಡಾ ಅಲ್ಲಗೆಳೆದರೂ ಕ್ಷಣಾರ್ಧದಲ್ಲಿ ಟಿವಿ ಗ್ರಾಬ್ ಸ್ಕ್ರೀನ್ ಶಾಟ್ ತೆಗೆದುಕೊಂಡು ಟ್ವೀಟ್ ಮಾಡಿ ಹಲವಾರು ಮಂದಿ ಈ ಪ್ರಮಾದವನ್ನು ಎತ್ತಿ ತೋರಿಸಿದ್ದಾರೆ.
Comments
jayalalithaa aiadmk tamil nadu chief minister death chennai tv ಜಯಲಲಿತಾ ಎಐಎಡಿಎಂಕೆ ತಮಿಳುನಾಡು ಮುಖ್ಯಮಂತ್ರಿ ಸಾವು ಚೆನ್ನೈ ಟಿವಿ
English summary
Screengrabs of Jaya television's subsidiary channel Jaya Plus allegedly broadcasting a slide announcing Tamil Nadu Chief Minister J Jayalalithaa's death kept social media buzzing through late Monday evening.
Story first published: Monday, December 5, 2016, 19:46 [IST]