ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರ ಭೇಟಿ ನಂತರ ಧರ್ಮಕ್ಕೆ ಗೆಲುವೆಂದ ಪನ್ನೀರ್ ಸೆಲ್ವಂ

ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಭೇಟಿ ನಂತರ ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಧರ್ಮಕ್ಕೆ ಗೆಲುವಾಗುತ್ತದೆ ಎಂದು ಹೇಳಿದ್ದಾರೆ. ತಮ್ಮ ರಾಜೀನಾಮೆ ಯನ್ನು ಹಿಂಪಡೆಯುವುದಾಗಿಯೂ ತಿಳಿಸಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಚೆನ್ನೈ, ಫೆಬ್ರವರಿ 9: ತಮಿಳುನಾಡಿನ ರಾಜಕೀಯ ಮೇಲಾಟಕ್ಕೆ ಕ್ಲೈಮ್ಯಾಕ್ಸ್ ಮುಂಚಿನ ದೃಶ್ಯಾವಳಿಗಳು ನಡೆಯುತ್ತಿವೆ. ಬುಧವಾರ ಸಂಜೆ 5ಕ್ಕೆ ಪನ್ನೀರ್ ಸೆಲ್ವಂ ಜತೆಗೆ ರಾಜ್ಯಪಾಲರ ಭೇಟಿ ನಿಗದಿಯಾಗಿತ್ತು. ಶಶಿಕಲಾ ಭೇಟಿಗೆ ರಾತ್ರಿ 7.30ಕ್ಕೆ ಸಮಯ. ಹಂಗಾಮಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಬುಧವಾರ ಸಂಜೆ 4.40ಕ್ಕೆ ರಾಜಭವನಕ್ಕೆ ತೆರಳಿದರು.

ಅವರ ಜತೆಗೆ ಎಐಎಡಿಎಂಕೆ ಅಧ್ಯಕ್ಷ ಇ ಮಧುಸೂದನ್, ಪಿಎಚ್ ಪಾಂಡಿಯನ್, ಕೆಪಿ ಮುನುಸಾಮಿ ಮತ್ತು ನಾಥಂ ವಿಶ್ವನಾಥನ್ ಇದ್ದರು. ಮುಂಬೈನಿಂದ ವಿಮಾನದಲ್ಲಿ ಹೊರಟ ರಾಜ್ಯಪಾಲ ವಿದ್ಯಾಸಾಗರ್ ರಾವ್ ಸಂಜೆ 4ರ ಹೊತ್ತಿಗೆ ಚೆನ್ನೈ ತಲುಪಿದರು. ಈ ಮಧ್ಯೆ ನವದೆಹಲಿಯ ಸಂಸತ್ ನಲ್ಲಿ ಡೆಪ್ಯೂಟಿ ಸ್ಪೀಕರ್ ತಂಬಿದುರೈ ಅವರು ಪ್ರಧಾನಿ ಮೋದಿ ಅವರ ಜತೆ ಮಾತುಕತೆ ನಡೆಸಿದರು.[ಒಪಿಎಸ್-ಶಶಿಕಲಾ ರಾಜ್ಯಪಾಲರ ಮುಂದೆ ಏನು ಹೇಳ್ತಾರೆ?]

Dharma will win: Panneerselvam

ತನ್ನಿಂದ ಶಶಿಕಲಾ ನಟರಾಜನ್ ಆವರು ಬಲವಂತವಾಗಿ ರಾಜೀನಾಮೆ ಪಡೆದರು. ಆದ್ದರಿಂದ ರಾಜೀನಾಮೆ ಹಿಂಪಡೆಯುತ್ತೇನೆ. ಶಾಸಕರ ಇಚ್ಛೆಗೆ ವಿರುದ್ಧವಾಗಿ ಅವರನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಶಶಿಕಲಾ ಅವರ ಪದೋನ್ನತಿ ನ್ಯಾಯಸಮ್ಮತವಾದುದಲ್ಲ ಎಂದು ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ರಾಜ್ಯಪಾಲರಿಗೆ ತಿಳಿಸಿದ್ದಾರೆ.[ಒಪಿಎಸ್ ಗೆ ಬೆಂಬಲ ಸೂಚಿಸಿದ ಎಐಎಡಿಎಂಕೆ ಅಧ್ಯಕ್ಷ ಮಧುಸೂದನ್]

ಒಟ್ಟು ಹದಿನೈದು ನಿಮಿಷ ರಾಜ್ಯಪಾಲರ ಜೊತೆಗೆ ಮಾತನಾಡಿದ ಒಪಿಎಸ್, ಆ ನಂತರ ಮಾಧ್ಯಮದವರ ಜತೆಗೆ ಕೆಲವೇ ನಿಮಿಷ ಮಾತನಾಡಿದ ಅವರು, ಜನರು ನನ್ನ ಪರ ನಿಂತಿದ್ದಕ್ಕೆ ಧನ್ಯವಾದಗಳು. ಧರ್ಮಕ್ಕೆ ಗೆಲುವಾಗುತ್ತದೆ ಎಂದು ಅವರು ಹೇಳಿದರು.

English summary
Governor of Tamil Nadu, Vidyasagar Rao met with CM O Panneerselvam. OPS said, Forcibly resignation took by me and Sasikala Natarajan as Generala secretary of AIADMK is fraudulent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X