ವಿಘ್ನೇಶ್ ಸಾವು: ಆರು ಮಂದಿ ಪೊಲೀಸರ ಬಂಧನ, ನ್ಯಾಯಾಂಗ ಕಸ್ಟಡಿಗೆ
ಚೆನ್ನೈ, ಮೇ 8: ವಿಘ್ನೇಶ್ ಲಾಕಪ್ ಡೆತ್ ಪ್ರಕರಣದ ತನಿಖೆ ನಡೆಸುತ್ತಿರುವ ಚೆನ್ನೈನ ಸಿಬಿ-ಸಿಐಡಿ ಪೊಲೀಸರು (CB-CID Police) ಆರು ಮಂದಿ ಆರೋಪಿತ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಸೈದಾಪೇಟ್ ಜಿಲ್ಲಾ ಮ್ಯಾಜಿಸ್ಟ್ರೇಟರು ಈ ಆರೋಪಿಗಳನ್ನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. 25 ವರ್ಷದ ವಿಘ್ನೇಶ್ನ ಶವಪರೀಕ್ಷೆಯ ವರದಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಜಿ5 ಸೆಕ್ರೆಟರಿಯಟ್ ಕಾಲೊನಿ ಪೊಲೀಸ್ ಠಾಣೆಯ ಹಿರಿಯ ಠಾಣಾಧಿಕಾರಿ (ಎಸ್ಎಸ್ಐ- Senior Station Inspector) ಕುಮಾರ್, ಹೆಡ್ ಕಾನ್ಸ್ಟೆಬಲ್ ಮುನಾಬ್, ಪೊಲೀಸ್ ಕಾನ್ಸ್ಟೆಬಲ್ ಪೊನ್ನುರಾಜ್ ಹಾಗೂ ಸಿಆರ್ಪಿಎಫ್ ಕಾನ್ಸ್ಟೆಬಲ್ಗಳಾದ ಜಗಜೀವನ್ರಾಮ್, ಚಂದ್ರಕುಮಾರ್ ಮತ್ತು ಹೋಮ್ ಗಾರ್ಡ್ ದೀಪ್ ಬಂಧಿತರಾದ ಆರು ಪೊಲೀಸರಾಗಿದ್ದಾರೆ. ಐಪಿಸಿ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಮತ್ತು ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಈ ಆರು ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಏನಿದು ಪ್ರಕರಣ?:
ಏಪ್ರಿಲ್ 18ರಂದು ಚೆನ್ನೈನಲ್ಲಿ ವಿಘ್ನೇಶ್ ಮತ್ತು ಸುರೇಶ್ ಇದ್ದ ಆಟೊರಿಕ್ಷಾದ ಪರಿಶೀಲನೆಗೆಂದು ಪೊಲೀಸರು ತಡೆದಿದ್ದಾರೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲು ಇಬ್ಬರೂ ತಡವರಿಸಿದ್ದಾರೆನ್ನಲಾಗಿದೆ. ಪೊಲೀಸರು ಮಾಡಿದ ಆರೋಪದ ಪ್ರಕಾರ ಇವರಿಬ್ಬರು ಪ್ರಯಾಣಿಸುತ್ತಿದ್ದ ಆಟೊರಿಕ್ಷಾದಲ್ಲಿ ಗಾಂಜಾ ಡ್ರಗ್ ಮತ್ತು ಮದ್ಯದ ಬಾಟಲುಗಳು ಸಿಕ್ಕಿವೆ. ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ಸೆಕ್ರೆಟರಿಯಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮರುದಿನ ಅಂದರೆ, ಏಪ್ರಿಲ್ 19ರಂದು ಪೊಲೀಸ್ ಲಾಕಪ್ನಲ್ಲಿದ್ದಾಗಲೇ ವಿಘ್ನೇಶ್ ಸಾವನ್ನಪ್ಪಿದ್ದಾನೆ.

ಈ ವಿಚಾರ ಬೆಳಕಿಗೆ ಬರುತ್ತಲೇ ಠಾಣೆಯ ಪಿಎಸ್ಐ, ಕಾನ್ಸ್ಟೆಬಲ್ ಮತ್ತು ಒಬ್ಬ ಹೋಮ್ ಗಾರ್ಡ್ ಅನ್ನು ತತ್ಕ್ಷಣವೇ ಅಮಾನತು ಮಾಡಲಾಗಿದೆ. ಸಾವನ್ನಪ್ಪಿದ ವಿಘ್ನೇಶ್ ಮೈಮೇಲೆ ಬಹಳ ಕಡೆ ಗಾಯಗಳಾಗಿದ್ದವು. ಇದು ಸಾರ್ವಜನಿಕರಲ್ಲಿ ಆಕ್ರೋಶ ಸೃಷ್ಟಿಸಿದೆ. ಜನರ ಪ್ರತಿಭಟನೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದ್ದಂತೆಯೇ ಸಿಬಿ-ಸಿಐಡಿಗೆ ತನಿಖೆಯ ಹೊಣೆ ವರ್ಗಾಯಿಸಲಾಯಿತು.
ಸಾಯುವ ಮುನ್ನ ವಿಘ್ನೇಶ್ಗೆ ದೈಹಿಕ ಹಿಂಸೆ:
25 ವರ್ಷದ ವಿಘ್ನೇಶ್ನ ಮರಣೋತ್ತರ ಪರೀಕ್ಷೆಯಿಂದ ಹಲವು ಪ್ರಮುಖ ವಿಚಾರಗಳು ಬೆಳಕಿಗೆ ಬಂದಿವೆ. ವಿಘ್ನೇಶ್ ಸಾವಿಗೆ ಇಂಥದ್ದೇ ಕಾರಣ ಎಂಬುದು ಸ್ಪಷ್ಟವಾಗದಿದ್ರೂ ಆತನ ದೇಹದ ಹಲವು ಕಡೆ ಗಾಯಗಳಾಗಿವೆ. ಒಂದು ಸೆಂಟಿ ಮೀಟರ್ನಷ್ಟು ದೊಡ್ಡ ಗಾಯಗಳೂ ಆಗಿವೆ. ತಲೆ ಮೇಲೂ ಹಲವು ಗಾಯಗಳಾಗಿವೆ. ಕಾಲು ಮೊದಲಾದ ಜಾಗದಲ್ಲಿ ಮೂಳೆಮುರಿತವೂ ಆಗಿದೆ. ಎಡಗಡೆಯ ಕಣ್ಣಿನಿಂದ ಸ್ವಲ್ಪ ಮೇಲೆ ಆಳದ ಗಾಯವಾಗಿದೆ. ಎಡಗಡೆಯ ಕೆನ್ನೆ, ಬೆನ್ನು, ಬಲ ತೋಳು ಹೀಗೆ ಹಲವು ಕಡೆ ಗಾಯವಾಗಿರುವುದು ಶವ ಪರೀಕ್ಷೆಯಿಂದ ತಿಳಿದುಬಂದಿದೆ.

ಮೊದಲಿಗೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಮಾತ್ರ ಪ್ರಕರಣ ದಾಖಲಿಸಲಾಗಿತ್ತು. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್ಸಿಎಸ್ಸಿ) ಈ ಘಟನೆಯನ್ನ ಪರಿಶೀಲಿಸಿ ಎಸ್ಸಿ ಎಸ್ಟಿ ಕಾಯ್ದೆ ಅಡಿ ಸೂಕ್ತ ಸೆಕ್ಷನ್ಗಳನ್ನ ಪ್ರಕರಣಕ್ಕೆ ಸೇರಿಸುವಂತೆ ತಮಿಳುನಾಡಿನ ಡಿಜಿಪಿಗೆ ಸೂಚಿಸಿದ್ದರು. ಅದಾದ ಬಳಿಕ ಎಸ್ಸಿ ಎಸ್ಟಿ ಕಾಯ್ದೆಯ ಸೆಕ್ಷನ್ಗಳನ್ನ ಸೇರಿಸಲಾಯಿತು.
ಮೊನ್ನೆ ಶುಕ್ರವಾರ ಸಿಬಿ-ಸಿಐಡಿಯವರು ಪ್ರಕರಣದ ತನಿಖೆಯ ಭಾಗವಾಗಿ ಐವರು ಪೊಲೀಸ್ ಅಧಿಕಾರಿಗಳನ್ನು ಕರೆದು ವಿಚಾರಣೆ ನಡೆಸಿದ್ದರು. ಅದಾದ ಬಳಿಕ ಈಗ ಒಟ್ಟು ಆರು ಮಂದಿಯನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನೂ ಸದ್ಯದಲ್ಲೇ ಬಂಧಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
(ಒನ್ಇಂಡಿಯಾ ಸುದ್ದಿ)
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications