ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾ ನಟರಾಜನ್ ವ್ಯಕ್ತಿಚಿತ್ರ
ವಿವೇಕಾನಂದನ್ ಕೃಷ್ಣವೇಣಿ ಶಶಿಕಲಾ ಅಲಿಯಾಸ್ ಶಶಿಕಲಾ ನಟರಾಜನ್ ಅವರು ತಮಿಳನಾಡಿನ ನಿಯೋಜಿತ ಮುಖ್ಯಮಂತ್ರಿಯಾಗಿದ್ದಾರೆ. ಶಾಸಕಾಂಗ ಪಕ್ಷದ ನಾಯಕಿ, ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ಅವರ ವೃತ್ತಿ ಬದುಕಿನ ಹಿನ್ನೋಟ ಇಲ್ಲಿದೆ
ಚೆನ್ನೈ, ಫೆಬ್ರವರಿ 06: ವಿವೇಕಾನಂದನ್ ಕೃಷ್ಣವೇಣಿ ಶಶಿಕಲಾ ಅಲಿಯಾಸ್ ಶಶಿಕಲಾ ನಟರಾಜನ್ ಅವರು ತಮಿಳನಾಡಿನ ನಿಯೋಜಿತ ಮುಖ್ಯಮಂತ್ರಿಯಾಗಿದ್ದಾರೆ. ಶಾಸಕಾಂಗ ಪಕ್ಷದ ನಾಯಕಿ, ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ಅವರ ವೃತ್ತಿ ಬದುಕಿನ ಹಿನ್ನೋಟ ಇಲ್ಲಿದೆ...
ದಿವಂಗತ ಜೆ ಜಯಲಲಿತಾ ಅವರ ಹೆಸರು ಹೇಳಿದ ತಕ್ಷಣಕ್ಕೆ ನೆನಪಾಗುವ ಹೆಸರು ಶಶಿಕಲಾ ನಟರಾಜನ್. ರಾಜಕೀಯದಲ್ಲಿ ಯಾರನ್ನು ನಂಬದ ಪರಿಸ್ಥಿತಿ ಇವರಿಬ್ಬರು ಗಳಸ್ಯ-ಕಂಠಸ್ಯ ಎಂಬಂತೆ ಸುಖ ದುಃಖದಲ್ಲಿ ಭಾಗಿಯಾದವರು. ಈಗ ಜೆ ಜಯಲಲಿತಾ ಅವರು ಕಾಲವಾದ ಮೇಲೆ ಅವರ ಕನಸನ್ನು ನನಸು ಮಾಡಲು ಶಶಿಕಲಾ ಅವರು ಬೃಹತ್ ಹೆಜ್ಜೆ ಇಡುತ್ತಿದ್ದಾರೆ.
61 ವರ್ಷ ವಯಸ್ಸಿನ ಶಶಿಕಲಾ ಅವರಿಗೆ ಯಾವುದೇ ರಾಜಕೀಯ ಹಿನ್ನಲೆಯಿಲ್ಲ. ಅಧಿಕೃತವಾಗಿ ಪಕ್ಷದ ಅಧಿಪತ್ಯ ಪಡೆದು ಒಂದು ತಿಂಗಳು ಕಳೆದಿರಬಹುದು ಅಷ್ಟೇ. ಆದರೆ, ಈಗ ಮುಖ್ಯಮಂತ್ರಿಯಾಗಿ ರಾಜ್ಯಭಾರ ನಡೆಸಲು ಸಿದ್ಧರಾಗಿದ್ದಾರೆ ತಮಿಳರ ಪಾಲಿನ 'ಚಿನ್ನಮ್ಮ'. ಶಶಿಕಲಾ ಬದುಕಿನ ಪ್ರಮುಖ ಅಂಶಗಳು ಮುಂದಿವೆ..

ಕೌಟುಂಬಿಕ ಹಿನ್ನಲೆ
1957ರಲ್ಲಿ ತಿರುತಿರೈಪೂಂಡಿಯಲ್ಲಿ ಜನನ, ತಂದೆ ವಿವೇಕಾನಂದನ್ ಮುದಲಿಯಾರ್ ಹಾಗೂ ತಾಯಿ ಕೃಷ್ಣವೇಣಿ. ತಿರುವರುರ್ ಜಿಲ್ಲೆಯ ತಿರುತಿರೈಪೂಂಡಿಯಿಂದ ಕುಟುಂಬ ಮನ್ನಾರ್ ಗುಡಿಗೆ ಬಂದು ನೆಲೆಸಿತು. ತಮಿಳುನಾಡು ಸರ್ಕಾರದಲ್ಲಿ PRO ಅಧಿಕಾರಿಯಾಗಿದ್ದ ಎಂ ನಟರಾಜನ್ ರನ್ನು ವರಿಸೈದರು. ಇಬ್ಬರ ಮದುವೆಗೆ ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಸಾಕ್ಷಿಯಾಗಿದ್ರು.

ರಾಜಕೀಯಕ್ಕೆ ಸೇರಲು ಪತಿಯೇ ಪ್ರೇರಣೆ
ಎಂಜಿ ರಾಮಚಂದ್ರನ್ ಅವರು ಸಿಎಂ ಆಗಿದ್ದ ಕಾಲದಲ್ಲಿ ಕಡಲೂರಿನ ಜಿಲ್ಲಾಧಿಕಾರಿಯಾಗಿ ವಿಎಸ್ ಚಂದ್ರಲೇಖ ಕಾರ್ಯನಿರ್ವಹಿಸುತ್ತಿದ್ದರು. ಡಿಸಿ ಚಂದ್ರಲೇಖ ನೆರವಿನಿಂದ 1980ರಲ್ಲಿ ಪಕ್ಷದ ನಂಟು ಬೆಳೆಸಲು ನೆರವು ಕೋರಿದರು. ಆಗ ಪಕ್ಷದ ಕಾರ್ಯದರ್ಶಿಯಾಗಿದ್ದ ಜಯಲಲಿತಾ ಜತೆ ಶಶಿಕಲಾ ಅವರ ಸ್ನೇಹ ಬೆಳೆಯಿತು.

ಜಯಾ ಗೆಳತಿಯಾಗಿ ಗುರುತಿಸಿಕೊಂಡ್ರು
ಪಕ್ಷದ ಕಾರ್ಯ ಚಟುವಟಿಕೆಗಳನ್ನು ಚಿತ್ರೀಕರಿಸಲು ಬಂದ ಶಶಿಕಲಾ ಅವರು ನಂತರ ಜಯಾ ಅವರ ಆಪ್ತ ಸಖಿಯಾಗಿಬಿಟ್ಟರು. ಈಕೆ ನನ್ನ ಸೋದರಿ ಎಂದು ಜಯಾ ಬಹಿರಂಗವಾಗಿ ಘೋಷಿಸಿದರು. ಇಬ್ಬರು ಸುಖ ದುಃಖ, ಹಗರಣಗಳಲ್ಲೂ ಪಾಲುದಾರರು, ಸಂಬಂಧ ಬೆಳೆಸಿದರು. ಶಶಿಕಲಾ ಅವರ ಸಂಬಂಧಿ ಸುಧಾಕರನ್ ರನ್ನು ಮಗನಾಗಿ ಜಯಲಲಿತಾ ದತ್ತು ಪಡೆದರು.

ಮತ್ತೆ ಪಕ್ಷಕ್ಕೆ ಎಂಟ್ರಿ
2011ರ ಡಿಸೆಂಬರ್ 9ರಂದು ಪಕ್ಷದ ನಿಯಮ ಪಾಲಿಸದ ಹಿನ್ನಲೆಯಲ್ಲಿ ಪಕ್ಷದಿಂದ ಹೊರಹಾಕಲಾಯಿತು. ಶಶಿಕಲಾ ನಟರಾಜನ್, ಟಿಟಿ ವಿ ದಿನಕರನ್, ಎಲ್ಲರನ್ನು ಹೊರಹಾಕಲಾಯಿತು. ನಂತರ ಕ್ಷಮಾಪಣೆ ಪತ್ರ ಪಡೆದು ಪಕ್ಷದೊಳಗೆ ಸೇರಿಸಿಕೊಳ್ಳಲಾಯಿತು.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications