ಹೆಣ್ಣು ಅಂದ್ರೆ ಪತ್ನಿ, ತಾಯಿ ಅಷ್ಟೇ ಅಲ್ಲ, 'ಹಣಕಾಸು ಸಚಿವೆ'ಯೂ ಹೌದು!
ಚೆನ್ನೈ, ಜೂನ್ 29: ಹೆಣ್ಣು ಅಂದ್ರೆ ಕೇವಲ ಪತ್ನಿ, ತಾಯಿಯಷ್ಟೇ ಅಲ್ಲ, ಆಕೆ ಹಣಕಾಸು ಸಚಿವೆಯೂ ಹೌದು. ಮಾಸಿಕ ವೇತನ ಪಡೆಯುವುದಿಲ್ಲ ಎಂಬ ಕಾರಣಕ್ಕೆ ಹೆಣ್ಣನ್ನು ನಿರುದ್ಯೋಗಿ ಎಂದು ಕರೆಯುವುದು ತಪ್ಪು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
2009 ರಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಾಕಿ ಮೃತರಾದ ಮಾಲತಿ ಎಂಬುವವರಿಗೆ ಸಂಬಂಧಿಸಿದಂತೆ ಪುದುಚೇರಿ ಎಲೆಕ್ಟ್ರಿಸಿಟಿ ಬೋರ್ಡ್ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ಸಮಯದಲ್ಲಿ ಕೋರ್ಟು ಈ ರೀತಿ ಹೇಳಿದೆ.

ಹುಲ್ಲು ಸಂಗ್ರಹಿಸಲೆಂದು ಹೋಗಿದ್ದಾಗ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಾಕಿ ಮಾಲತಿ ಸಾವನ್ನಪ್ಪಿದ್ದರು. ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದ ಅವರ ಸಾವಿನ ನಂತರ, ಆಕೆಯ ಸಾವಿಗೆ ಕಾರಣವಾದ ವಿದ್ಯುತ್ ಮಂಡಳಿ 5 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ಆಕೆಯ ಪತಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಸಂದರ್ಭದಲ್ಲಿ ತಮ್ಮ ಪತ್ನಿ ತಿಂಗಳಿಗೆ 3000 ರೂ.ಗಳನ್ನು ದುಡಿಯುತ್ತಿದ್ದರು ಎಂದು ಮಾಲತಿಯ ಪತಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಅವರ ಅಹವಾಲನ್ನು ಸ್ವೀಕರಿಸಿದ ನ್ಯಾಯಾಲಯ ಮಾಲತಿಯ ಕುಟುಂಬಕ್ಕೆ 4 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ತೀರ್ಪು ನೀಡಿತ್ತು.
ಇದಾದ ನಂತರ ಪುದುಚೇರಿ ವಿದ್ಯುತ್ ಮಂಡಳಿ, ಮಾಲತಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ, ಆಕೆ ನಿರುದ್ಯೋಗಿ ಮತ್ತು ಗೃಹಿಣಿಯಾಗಿದ್ದರು. ಆದ್ದರಿಂದ ಆಕೆ ತಿಂಗಳು 3000 ರೂ.ದುಡಿಯುತ್ತಿದ್ದರು ಎಂಬ ಮಾತು ಸುಳ್ಳು. ಈ ಪರಿಹಾರ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಮಂಡಳಿ ಹೇಳಿತ್ತು. ಈ ಕುರಿತು ಮತ್ತೊಮ್ಮೆ ವಿಚಾರಣೆ ನಡೆಸಿದ ನ್ಯಾಯಾಲಯ, ಗೃಹಿಣಿಯನ್ನು ನಿರುದ್ಯೋಗಿ ಎನ್ನುವುದು ತಪ್ಪು, ಆಕೆಗೆ ತಿಂಗಳ ವೇತನ ಲಭಿಸುವುದಿಲ್ಲ ಎಂದ ಮಾತ್ರಕ್ಕೆ ಆಕೆ ನಿರುದ್ಯೋಗಿಯಲ್ಲ ಎಂದು ಕೋರ್ಟು ಹೇಳಿದೆ.
ಅಲ್ಲದೆ, ವಿದ್ಯುತ್ ಮಂಡಳಿ ಮಾಲತಿ ಕುಟುಂಬಕ್ಕೆ ನೀಡಬೇಕಾದ 4 ಲಕ್ಷ ರೂ. ಪರಿಹಾರ ಮೊತ್ತದಲ್ಲಿ ಯಾವುದೆ ಬದಲಾವಣೆ ಇಲ್ಲ ಎಂದು ಕೋರ್ಟ್ ಹೇಳಿದೆ.
ಹೆಣ್ಣು ಒಬ್ಬ ಕರ್ತವ್ಯ ನಿರತ ಪತ್ನಿ, ಅಕ್ಕರೆ ನೀಡುವ ತಾಯಿ, ಹಣಕಾಸು ಸಚಿವೆ, ಮನೆಯ ಖರ್ಚು ವೆಚ್ಚಳನ್ನು ನೋಡಿಕೊಳ್ಳುವ ಚಾರ್ಟರ್ಡ್ ಅಕೌಂಟಂಟ್. ಇದೀಗ ಪತ್ನಿಯ ಅಗಲಿಕೆಯಿಂದ ಪತಿಗೆ ಪ್ರೀತಿ ನೀಡುವ ಸಂಗಾತಿ ಇಲ್ಲದಂತಾಗಿದೆ, ಹಾಗೆಯೇ ಮಕ್ಕಳಿಗೂ ಅಕ್ಕರೆ ನೀಡುವ ತಾಯಿ ಇಲ್ಲದಂತಾಗಿದೆ.
ಹಣದ ಮೂಲಕ ಈ ಎಲ್ಲವನ್ನೂ ಅಳೆಯುವುದಕ್ಕಾಗದಿದ್ದರೂ, ಅವರ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ವಿದ್ಯುತ್ ಮಂಡಳಿ ಪರಿಹಾರ ನೀಡಲೇಬೇಕು ಎಂಬ ಮಹತ್ವದ ತೀರ್ಪನ್ನು ಮದ್ರಾಸ್ ನ್ಯಾಯಾಲಯ ನೀಡಿದ್ದು, ಐತಿಹಾಸಿಕವೆನ್ನಿಸಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications