ತ್ವರಿತ ಅಲರ್ಟ್ ಗಳಿಗಾಗಿ
For Daily Alerts
Breaking; ಆರೋಗ್ಯ ಸಚಿವರನ್ನು ವಜಾಗೊಳಿಸಿದ ಪಂಜಾಬ್ ಸಿಎಂ!
ಪಂಜಾಬ್, ಮೇ 24: ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಹೇಳಿದ್ದ ಪಂಜಾಬ್ನ ಎಎಪಿ ಸರ್ಕಾರದ ವಿರುದ್ಧ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಆರೋಗ್ಯ ಸಚಿವರನ್ನು ಸಂಪುಟದಿಂದ ಕೈ ಬಿಟ್ಟಿದ್ದಾರೆ.
ಬುಧವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭ್ರಷ್ಟಾಚಾರದ ದೂರುಗಳ ಹಿನ್ನಲೆಯಲ್ಲಿ ಆರೋಗ್ಯ ಸಚಿವ ವಿಜಯ್ ಸಿಂಗ್ಲಾರನ್ನು ವಜಾಗೊಳಿಸಿದ್ದಾರೆ. ಗುತ್ತಿಗೆ ಅಧಿಕಾರಿಗಳಿಂದ ಶೇ.1ರಷ್ಟು ಕಮೀಷನ್ ಕೇಳುತ್ತಿದ್ದರು ಎಂಬುದು ಆರೋಪ.
ಸಿಂಗ್ಲಾ ವಿರುದ್ಧದ ಆರೋಪಕ್ಕೆ ಖಚಿತವಾದ ಸಾಕ್ಷಿ ಪತ್ತೆಯಾದ ಹಿನ್ನಲೆ ಪಂಜಾಬ್ ಸಿಎಂ ಭಗವಂತ್ ಮಾನ್ ಈ ಕ್ರಮ ಕೈಗೊಂಡಿದ್ದಾರೆ.
Comments
English summary
Panjab health minister Vijay Singla removed from Chief Minister Bhagwant Mann cabinet after corruption complaints against him.