ನೀತಿ ಸಂಹಿತೆ ಉಲ್ಲಂಘನೆ: ಗುಂಡ್ಲುಪೇಟೆ ಬಳಿ 1.50ಲಕ್ಷ ರೂ. ವಶ
ಚಾಮರಾಜನಗರ, ಏಪ್ರಿಲ್ 12: ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ಹಣ ಸಾಗಿಸುವವರ ಮೇಲೆ ನಿಗಾವಹಿಸಿದ್ದು, ದಾಖಲೆಗಳಿಲ್ಲದೆ ಸಾಗಿಸುವ ಹಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ಸು ಕಾಣುತ್ತಿದ್ದಾರೆ.
ಇದೀಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವೀರನಪುರ ಕ್ರಾಸ್ ಬಳಿ ಅಕ್ರಮವಾಗಿ ಹಣ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಆತನಿಂದ 1 ಲಕ್ಷ 50 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.
ಮಂಡ್ಯ: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಎಲ್ಲಲ್ಲೂ ಸರ್ಕಾರಿ ಜಾಹೀರಾತು!
ವೀರನಪುರ ಕ್ರಾಸ್ ಬಳಿ ಖಚಿತ ಮಾಹಿತಿ ಮೇರೆಗೆ ಪ್ಲೇಯಿಂಗ್ ಸ್ಕ್ವಾಡ್ ಮುಖ್ಯಾಧಿಕಾರಿ ಕೃಷ್ಣಪ್ಪರವರು ತಪಾಸಣೆ ನಡೆಸಿದ್ದು, ಗುಂಡ್ಲುಪೇಟೆಯಿಂದ ಬನ್ನೀತಾಳಪುರ ಗ್ರಾಮಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ಆಟೋ (ಕೆ.ಎ.10- 4361) ವನ್ನು ತಪಾಸಣೆ ಮಾಡಿದ್ದರು. ಈ ವೇಳೆ ಬನ್ನೀತಾಳಪುರ ಗ್ರಾಮದ ಮಹೇಶ್ಶೆಟ್ಟಿ ಬಳಿ ಹಣ ದೊರೆತಿದ್ದು, ದಾಖಲೆಗಳಿಲ್ಲದ ನೀಡದ ಕಾರಣ ಹಣವನ್ನು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.
ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?