ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರಪ್ಪನ್ ಗುಂಡೇಟು ತಿಂದಿದ್ದ ಸಬ್‌ ಇನ್ಸ್‌ಪೆಕ್ಟರ್ ವಿಧಿವಶ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನರ, ಮೇ 25; ಕಾಡುಗಳ್ಳ ವೀರಪ್ಪನ್‌ ಹಾರಿಸಿದ್ದ ಗುಂಡುಗಳನ್ನು ತಲೆಯಲ್ಲಿ ಇಟ್ಟುಕೊಂಡೇ ಕರ್ತವ್ಯ ನಿರ್ವಹಿಸಿದ್ದ ಸಬ್ ಇನ್ಸ್‌ಪೆಕ್ಟರ್‌ ಇಂದು ಮೃತಪಟ್ಟಿದ್ದಾರೆ. 1992 ಆಗಸ್ಟ್ 14ರಂದು ಗುಂಡೇಟು ತಿಂದಿದ್ದರು.

ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜ ನಾಯಕ್ ಮಂಗಳವಾರ ಮೃತಪಟ್ಟಿದ್ದಾರೆ. ವೀರಪ್ಪನ್ ಹಿಡಿಯುವ ಕಾರ್ಯಾಚರಣೆ ವೇಳೆ ಮೀಣ್ಯಂನಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಸಿದ್ದರಾಜ ನಾಯಕ್‌ಗೆ ಗುಂಡು ತಗುಲಿತ್ತು.

 ವೀರಪ್ಪನ್ ದಾಳಿಯ ಹುತಾತ್ಮರಿಗೆ ಸ್ಮಾರಕವಾಗಲಿದೆ ರಾಮಾಪುರ ಪೊಲೀಸ್ ಠಾಣೆ ವೀರಪ್ಪನ್ ದಾಳಿಯ ಹುತಾತ್ಮರಿಗೆ ಸ್ಮಾರಕವಾಗಲಿದೆ ರಾಮಾಪುರ ಪೊಲೀಸ್ ಠಾಣೆ

1992ರಲ್ಲಿ ಎಸ್ಪಿ‌ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹಮದ್ ಜೊತೆ ಕಾರ್ಯಾಚರಣೆಯಲ್ಲಿ ಸಿದ್ದರಾಜ ನಾಯಕ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಡೆದ ಚಕಮಕಿಯಲ್ಲಿ 7 ಗುಂಡುಗಳು ದೇಹ ಹೊಕ್ಕಿದ್ದವು. ಸಾವು ಬದುಕಿನ ನಡುವೆ ಹೋರಾಟ ಮಾಡಿ ಬದುಕುಳಿದಿದ್ದರು.

ವೀರಪ್ಪನ್ ಸಹಚರ ಬಿಲವೇಂದ್ರನ್ ಮೈಸೂರಿನಲ್ಲಿ ನಿಧನ ವೀರಪ್ಪನ್ ಸಹಚರ ಬಿಲವೇಂದ್ರನ್ ಮೈಸೂರಿನಲ್ಲಿ ನಿಧನ

 Police Sub Inspector Siddaraja Nayak No More

ಶಸ್ತ್ರ ಚಿಕಿತ್ಸೆ ನಡೆಸಿ 4 ಗುಂಡುಗಳನ್ನು ತೆಗೆಯಾಗಿತ್ತು. ಇನ್ನೂ ಮೂರು ಗುಂಡುಗಳು ತಲೆಯಲ್ಲಿಯೇ ಉಳಿದುಕೊಂಡಿದ್ದವು. ಕಳೆದ ವರ್ಷ ಕರೊನಾ ಸಮಯದಲ್ಲಿ 75 ದಿನಗಳ ಕಾಲ ರಜಾ ತೆಗೆದುಕೊಳ್ಳದೇ ಕೋವಿಡ್ ವಾರಿಯರ್ ಆಗಿ ಸಿದ್ದರಾಜು ನಾಯಕ್ ಕಾರ್ಯ ನಿರ್ವಹಣೆ ಮಾಡಿದ್ದರು.

ವೀರಪ್ಪನ್ ಪುತ್ರಿ,ಎಂಜಿಆರ್ ದತ್ತುಪುತ್ರಿಗೆ ಮಣೆ ಹಾಕಿದ ಬಿಜೆಪಿ ವೀರಪ್ಪನ್ ಪುತ್ರಿ,ಎಂಜಿಆರ್ ದತ್ತುಪುತ್ರಿಗೆ ಮಣೆ ಹಾಕಿದ ಬಿಜೆಪಿ

Recommended Video

ಹವಾಮಾನ ಇಲಾಖೆಯಿಂದ ಭಾರಿ ಮಳೆ ಸೂಚನೆ! ಮೀನುಗಾರರಿಗೆ ಎಚ್ಚರಿಕೆ | Oneindia Kannda

ಸಿದ್ದರಾಜು ನಾಯಕ್ ಸೇವೆಯಿಂದ ನಿವೃತ್ತರಾಗಲು ಕೇವಲ 5 ದಿ‌ನ ಬಾಕಿ ಇತ್ತು. ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲಾ ಪೊಲೀಸ್ ಸಿಬ್ಭಂದಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.

English summary
Police sub inspector Siddaraja Nayak who injured in the attack by Veerappan died due to heart attack on May 25, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X