ಮಳೆ ಅವಾಂತರ: ಜಲಾವೃತವಾದ ಚಾಮಮರಾಜನಗರದ ಕೆಸ್ತೂರು
ಚಾಮರಾಜನಗರ, ಅಕ್ಟೋಬರ್ 9: ರಾತ್ರಿವೇಳೆ ಸುರಿದ ಭಾರಿ ಮಳೆಗೆ ಕೆರೆ ಭರ್ತಿಯಾಗಿ ಹರಿದ ಪರಿಣಾಮ ಗ್ರಾಮಕ್ಕೆ ನೀರು ನುಗ್ಗಿ, ಯಳಂದೂರು ತಾಲೂಕಿನ ಕೆಸ್ತೂರಿನ ಜನ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ.
ಯಳಂದೂರಲ್ಲಿ ಮೈದಾನದ ತುಂಬ ನಿಂತ ನೀರು: ರೋಗದ ಭಯ!
ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಸ್ತೂರು ಗ್ರಾಮ ಜಲಾವೃತಗೊಂಡಿದೆ.
ಮಳೆಯ ನೀರಿನಿಂದಾಗಿ ಹೊಲಗಳಿಗೆಲ್ಲ ನೀರು ನುಗ್ಗಿ ಬೆಳೆಯೂ ಹಾಣಿಯಾಗಿದೆ. ಕೆರೆತುಂಬಿದ ಪರಿಣಾಮ ಮನೆಯೊಳಗೆಲ್ಲ ನೀರು ನುಗ್ಗಿದ್ದು, ಮನೆಯಲ್ಲಿದ್ದ ಹಲವು ವಸ್ತುಗಳು ನೀರು ಪಾಲಾಗಿವೆ. ಪ್ರಾಣ ಉಳಿಸಿಕೊಳ್ಳಲು ಗ್ರಾಮಸ್ಥರು ಹರಸಾಹಸಪಟ್ಟರು.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಇಷ್ಟೆಲ್ಲ ಅವಾಂತರವಾದರೂ ಸ್ಥಳೀಯ ಜನಪ್ರತಿನಿಧಿಗಳು ಮಂಆತ್ರ ಸ್ಥಳಕ್ಕೆ ಆಗಮಿಸದಿರುವುದು ಜನರಲ್ಲಿ ಬೇಸರ ಮೂಡಿಸಿದೆ.
Comments
English summary
Heavy rain in Chamarajanagara district creates havoc. A village called Kestoor in the district have faced many problems by rain.
Story first published: Monday, October 9, 2017, 9:29 [IST]