ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎನ್ನುವುದು ಸುಳ್ಳು: ಸಚಿವ ಆರ್.ಅಶೋಕ್ ಸ್ಪಷ್ಟನೆ
ಚಾಮರಾಜನಗರ, ಡಿಸೆಂಬರ್, 14: ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎನ್ನುವುದು ಸುಳ್ಳು. ನಮ್ಮ ಬೊಕ್ಕಸ ತುಂಬಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಚಾಮರಾಜನಗರದಲ್ಲಿ ಸ್ಪಷ್ಟನೆ ನೀಡಿದರು.
ಹನೂರಿನಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಅಂತಾ ಯಾರ್ಯಾರೋ ಸುಮ್ಮನೆ ಹೇಳುತ್ತಿರುತ್ತಾರೆ. ಆದರೆ, ನಮ್ಮ ಸರ್ಕಾರದ ಬೊಕ್ಕಸ ತುಂಬಿದೆ. ಹಿಂದಿನ ಯಾವ ಸರ್ಕಾರದಲ್ಲಿ ಇರದಷ್ಟು ಹಣ ನಮ್ಮ ಸರ್ಕಾರದಲ್ಲಿದೆ. ಹಣ ಇದ್ದಿದ್ದರಿಂದಲೇ ಸಾವಿರಾರು ಕೋಟಿ ರೂಪಾಯಿ ಯೋಜನೆಗಳು ಘೋಷಣೆ ಆಗುತ್ತಿವೆ. ಹಾಗೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಎಂದರು.
ಕರ್ನಾಟಕ ಗಡಿ ಜಿಲ್ಲೆಯ 1,500 ಗ್ರಾಮ ಪಂ. ಅಭಿವೃದ್ಧಿ: ಸಿಎಂ ಬೊಮ್ಮಾಯಿ
ಜನರ
ಕಷ್ಟಗಳಿಗೆ
ಸಿಎಂ
ಸ್ಪಂದಿಸುತ್ತಿದ್ದಾರೆ
ಸಿಎಂ
ಬಸವರಾಜ
ಬೊಮ್ಮಾಯಿ
ಕಾಮನ್
ಮ್ಯಾನ್,
40
ವರ್ಷಗಳಿಂದ
ಅವರು
ಒಂದೇ
ಮನೆಯಲ್ಲಿದ್ದಾರೆ.
ಅವರು
ಯಾವ
ಮನೆಯನ್ನೂ
ಕಟ್ಟಿಕೊಂಡಿಲ್ಲ.
ಜನರ
ಪರವಾಗಿ,
ಸಾಮಾನ್ಯ
ಜನರ
ಕಷ್ಟಗಳಿಗೆ
ಸ್ಪಂದಿಸುವ
ಕೆಲಸವನ್ನು
ಮಾಡುತ್ತಿದ್ದಾರೆ.
ಸರ್ಕಾರಿ
ಭೂಮಿಯನ್ನು
ಒತ್ತುವರಿ
ಮಾಡಿಕೊಂಡು
ಸಾಗುವಳಿ
ಮಾಡುತ್ತಿರುವ
ರೈತರಿಗೆ
ನಾವು
ಯಾವುದೇ
ತೊಂದರೆ
ಕೊಡುವುದಿಲ್ಲ.
ಶೀಘ್ರದಲ್ಲೇ
ನಿಮಗೆ
ಹಕ್ಕುಪತ್ರಗಳನ್ನು
ನೀಡುತ್ತೇವೆ.
ನಮ್ಮದು
ಡಬಲ್
ಎಂಜಿನ್
ಸರ್ಕಾರವಾಗಿದೆ.
ಎರಡು
ಪಟ್ಟು
ವೇಗದಲ್ಲಿ
ಅಭಿವೃದ್ಧಿಯಾಗಲಿದೆ
ಎಂದು
ಭರವಸೆಯನ್ನು
ವ್ಯಕ್ತಪಡಿಸಿದರು.
ನಂತ ಸಚಿವ ಸೋಮಣ್ಣ ಮಾತನಾಡಿ, ಕಾಡಿನ ಒಳಗಿರುವ ಚಂಗಡಿ ಗ್ರಾಮವನ್ನು ಶೀಘ್ರವೇ ಸ್ಥಳಾಂತರಿಸಲು ರೂಪುರೇಷೆ ಸಿದ್ಧವಾಗುತ್ತಿದೆ. ಆ ಕಾರ್ಯ ತ್ವರಿತವಾಗಿ ಆಗಲಿದ್ದು, ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಅಭಿಪ್ರಾಯಪಟ್ಟರು.
100
ಕೋಟಿ
ರೂ.
ಅನುದಾನದ
ಭರವಸೆ
ಕರ್ನಾಟಕದ
ಗಡಿ
ಜಿಲ್ಲೆಯ
1500
ಕ್ಕೂ
ಹೆಚ್ಚಿನ
ಗ್ರಾಮ
ಪಂಚಾಯತಿಗಳ
ಅಭಿವೃದ್ಧಿಗೊಳಿಸಲು
ರಾಜ್ಯ
ಸರ್ಕಾರ
ನಿರ್ಧರಿಸಿದೆ
ಎಂದು
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ತಿಳಿಸಿದರು.
ರಾಜ್ಯದ
ಗಡಿ
ಭಾಗದ
ಶಾಲೆಗಳು,
ರಸ್ತೆಗಳ
ಅಭಿವೃದ್ಧಿಗೆ
ವಿವಿಧ
ಇಲಾಖೆಗಳಿಗೆ
100
ಕೋಟಿ
ರೂಪಾಯಿಗಳನ್ನು
ಕಾಮಗಾರಿಗಳಿಗೆ
ಬಿಡುಗಡೆ
ಮಾಡಲಾಗುವುದು.
ಗಡಿ
ಭಾಗಗಳ
ಜನರ
ಸಂಪೂರ್ಣ
ಅಭಿವೃದ್ಧಿಯನ್ನು
ಕೈಗೊಳ್ಳಬೇಕಿದೆ.
ಮಧ್ಯಭಾಗದ
ರಾಜ್ಯವನ್ನು
ಗಮನಿಸಿದಷ್ಟೇ
ದೂರದ
ಪ್ರತಿ
ಒಂದು
ಗ್ರಾಮವನ್ನು
ಅಭಿವೃದ್ಧಿ
ಮಾಡುವ
ಸಂಕಲ್ಪ
ನಮ್ಮ
ಸರ್ಕಾರಕ್ಕಿದೆ
ಎಂದು
ಎಂದು
ಸಿಎಂ
ಬಸವರಾಜ
ಬೊಮ್ಮಾಯಿ
ವಿವರಿಸಿದರು.
ಕರ್ನಾಟಕದಲ್ಲಿರುವ ಗಡಿ ಭಾಗದ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿರುವುದರಿಂದ ಗಡಿಯಾಚೆ ಇರುವ ಕನ್ನಡಿಗರೂ ಕೂಡ ಅದೇ ರೀತಿಯ ಅಭಿವೃದ್ಧಿಯನ್ನು ಆಶಾಭಾವದಿಂದ ನೋಡುತ್ತಿದ್ದಾರೆ. ಹೀಗಾಗಿ ಗಡಿಯಾಚೆ ಇರುವ ಕನ್ನಡಿಗರು ವಾಸಿಸುವ ಪ್ರದೇಶಗಳಲ್ಲಿ ಶಾಲೆಗಳ ಅಭಿವೃದ್ದಿಗೆ ವಿಶೇಷ ಅನುದಾನ ಮೀಸಲಿಡುವ ತೀರ್ಮಾನ ಮಾಡಿದ್ದೇವೆ ಎಂದರು.