ಬೊಮ್ಮನಹಳ್ಳಿ-ಅರಕಲವಾಡಿ ರಸ್ತೆ ಕಾಮಗಾರಿ ಮುಗಿಯುವುದು ಯಾವಾಗ?
ಚಾಮರಾಜನಗರ, ಜನವರಿ 20: ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಿ ಎಂಟು ತಿಂಗಳಾದರೂ ಮುಗಿಯದ ಕಾರಣ ರಸ್ತೆಯಲ್ಲಿ ಸಂಚರಿಸುವವರು ಹಿಡಿಶಾಪ ಹಾಕುತ್ತಾ ಸಾಗುವುದು ತಾಲೂಕಿನ ಬೊಮ್ಮನಹಳ್ಳಿ-ಅರಕಲವಾಡಿ ರಸ್ತೆಯಲ್ಲಿ ಕಂಡು ಬಂದಿದೆ. ಆಮೆನಡಿಗೆಯ ಕಾಮಗಾರಿಯಿಂದ ಬೇಸತ್ತ ಜನ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.
ಚಾಮರಾಜನಗರ ತಾಲೂಕಿನ ಬೊಮ್ಮನಹಳ್ಳಿ- ಅರಕಲವಾಡಿ ಗ್ರಾಮದ ಸಂಪರ್ಕ ರಸ್ತೆ ಗುಂಡ್ಲುಪೇಟೆ ಮತ್ತು ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು ಎಂಟು ತಿಂಗಳಹಿಂದೆ ಅಭಿವೃದ್ಧಿ ಕಾಮಗಾರಿ ಕೈಗೊಂಡಾಗ ಸ್ಥಳೀಯರು ಸಂತಸಗೊಂಡಿದ್ದರು. ಈಗ ಈ ಮಾರ್ಗದಲ್ಲಿ ದಿನಕ್ಕೆ 20ಕ್ಕೂ ಹೆಚ್ಚಿನ ಬಸ್ಸುಗಳು ಹಾಗೂ ನೂರಾರು, ನಾಲ್ಕುಚಕ್ರ, ದ್ವಿಚಕ್ರವಾಹನಗಳು ಸಂಚರಿಸುತ್ತವೆ. ಹೀಗಿರುವಾಗ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಗುತ್ತಿಗೆದಾರನ ನಿರ್ಲಕ್ಷ್ಯವೋ, ಅಧಿಕಾರಿಗಳ ಅಸಡ್ಡೆಯೋ ಕಾಮಗಾರಿ ಮಾತ್ರ ಕುಂಟುತ್ತಲೇ ಸಾಗುತ್ತಿದೆ.[ಅಗುಂಬೆ ಘಾಟಿ ರಸ್ತೆ ಕಾಮಗಾರಿ ಪೂರ್ಣ, ಜ.1ರಿಂದ ಸಂಚಾರ ಆರಂಭ]

ರಸ್ತೆ ಕಾಮಗಾರಿ ಆರಂಭಿಸಿ ಮೊದಲಿದ್ದ ಡಾಂಬರನ್ನು ತೆಗೆಯುವ ಕಾರ್ಯ ಶುರು ಮಾಡಲಾಯಿತಾದರೂ ಅದನ್ನು ತಿಂಗಳಾನುಗಟ್ಟಲೆ ಮಾಡಲಾಯಿತು. ಬಳಿಕ ಜಲ್ಲಿ ಕಲ್ಲು ಸುರಿದು ಮೆಟ್ಲಿಂಗ್ ಮಾಡಲಾಗಿದೆ. ಇದರ ಮೇಲೆ ಎಂಸ್ಯಾಂಡ್ ಸುರಿದು ತೆಪ್ಪಗಾಗಿದ್ದಾರೆ. ಪ್ರತಿನಿತ್ಯ ನೀರು ಸುರಿದು ಹದಗೊಳಿಸ ಬೇಕಾಗಿದೆಯಾದರೂ ಅದನ್ನು ಮಾಡದ ಕಾರಣದಿಂದ ವಾಹನಗಳು ಅದರ ಮೇಲೆ ಚಲಿಸುವಾಗ ಧೂಳೆದ್ದು, ಜಲ್ಲಿಕಲ್ಲುಗಳು ಕಿತ್ತು ಬಂದು ರಾಶಿ ಬೀಳುತ್ತಿದೆ.
ಈ ರಸ್ತೆಯಲ್ಲಿಯೇ ವಾಹನಗಳು ಕೂಡ ಚಲಿಸುವುದರಿಂದಾಗಿ ಪರದಾಡುವಂತಾಗಿದೆ. ವಾಹನಗಳು ಸಂಚರಿಸುವಾಗ ರಸ್ತೆ ಬದಿಯಲ್ಲಿ ಚಲಿಸುವ ಪಾದಚಾರಿಯ ಗೋಳು ಹೇಳತೀರದ್ದಾಗಿದೆ. ರಸ್ತೆಯ ಎರಡು ಬದಿಯನ್ನು ಸಮತಟ್ಟುಗೊಳಿಸದ ಕಾರಣದಿಂದ ವಾಹನಗಳು ಒಂದಕ್ಕೊಂದು ರಸ್ತೆ ಬಿಟ್ಟುಕೊಡಲು ಜಾಗವಿಲ್ಲದೆ ಪರದಾಡುವಂತಾಗಿದೆ.
ರಸ್ತೆ ಅಭಿವೃದ್ಧಿಗೆ ಸಂತಸ ವ್ಯಕ್ತ ಪಡಿಸಿದ್ದ ಜನ ಈಗ ಕಾಮಗಾರಿಯ ಅವ್ಯವಸ್ಥೆ ಕಂಡು ಬೇಸರಗೊಂಡಿದ್ದಾರೆ.ಮೊದಲಿದ್ದ ರಸ್ತೆಯೇ ಸಾಕಾಗಿತ್ತು ಎನ್ನುತ್ತಿದ್ದಾರೆ. ಆಮೆನಡಿಗೆಯ ಕಾಮಗಾರಿ ಯಾವಾಗ ಚುರುಕುಗೊಂಡು ಮುಗಿಯುತ್ತದೆ ಎಂಬುದನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications