11 ವರ್ಷಗಳ ಬಳಿಕ ಹಕ್ಕಿ ಗಣತಿ: ಬಿಳಿಗಿರಿ ಬನದಲ್ಲಿ 274 ಪ್ರಬೇಧದ ಪಕ್ಷಿ ಪತ್ತೆ
ಕರ್ನಾಟಕ ಹಲವು ಜೀವ ಸಂಕುಲದ ಆಗರ. ಪೂರ್ವ, ಪಶ್ಚಿಮ ಘಟ್ಟಗಳ ಸಂಗಮ ಸೇತುವಾಗಿರುವ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ 274 ಪ್ರಬೇಧದ ಪಕ್ಷಿ ಸಂಕುಲ ಇರುವುದು ಪತ್ತೆಯಾಗಿದೆ.
ಚಾಮರಾಜನಗರ, ಜನವರಿ 30: ರಾಜ್ಯದ ಪ್ರಮುಖ ಹಾಗೂ ಪೂರ್ವ, ಪಶ್ಚಿಮ ಘಟ್ಟಗಳ ಸಂಗಮ ಸೇತುವಾಗಿರುವ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ 274 ಪ್ರಬೇಧದ ಪಕ್ಷಿ ಸಂಕುಲ ಇರುವುದನ್ನು ಪತ್ತೆ ಮಾಡಲಾಗಿದೆ.
ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 11 ವರ್ಷಗಳ ಬಳಿಕ ನಡೆದ ಪಕ್ಷಿ ಗಣತಿಯಲ್ಲಿ ಒಟ್ಟು 274 ಪ್ರಬೇಧ ಪಕ್ಷಿಗಳನ್ನು ಗುರುತು ಮಾಡಿದ್ದು, ಇವುಗಳಲ್ಲಿ ಹೊಸದಾಗಿ ಎರಡು ಜಾತಿ ಹಕ್ಕಿಗಳು ಕಾಣಸಿಕ್ಕಿವೆ. ಬಹಳ ವರ್ಷಗಳ ಬಳಿಕ ಗ್ರೇಟ್ ಹಾರ್ನ್ ಬಿಲ್ ಕೂಡ ಅರಣ್ಯದಲ್ಲಿ ಕಾಣಿಸಿಕೊಂಡಿದೆ.
1939 ರಲ್ಲಿ ಪಕ್ಷಿ ಪ್ರೇಮಿ ಸಲೀಂ ಅಲಿ ಬಿಆರ್ಟಿ ಅರಣ್ಯಕ್ಕೆ ಆಗಮಿಸಿ ಸಮೀಕ್ಷೆ ನಡೆಸಿ 139 ಪಕ್ಷಿಗಳನ್ನು ಗುರುತು ಮಾಡಿದ್ದರು.

2012 ರಲ್ಲಿ ನಡೆದ ಪಕ್ಷಿ ಸಮೀಕ್ಷೆಯಲ್ಲಿ 272 ಪಕ್ಷಿಗಳು ಕಂಡುಬಂದಿದ್ದವು, ಅದಾದ ನಂತರ ಈಗ ನಾಲ್ಕು ದಿನಗಳ ಕಾಲ ನಡೆದ ಹಕ್ಕಿ ಗಣತಿಯಲ್ಲಿ 274 ಪಕ್ಷಿಗಳನ್ನು ಗುರುತು ಮಾಡಲಾಗಿದೆ.
ಹಕ್ಕಿ ಗಣತಿ ಕಾರ್ಯ ನಡೆಯುವುದು ಹೇಗೆ..?
ಬಿಆರ್ಟಿ ಅಧಿಕಾರಿಗಳು ಇಕೋ ವಾಲೆಂಟಿಯಯರ್ಸ್ ಗ್ರೂಪ್ ಆಫ್ ಇಂಡಿಯಾದ ಸಹಕಾರದೊಂದಿಗೆ ಈ ಬಾರಿ ಪಕ್ಷಿ ಗಣತಿ ನಡೆಸಿದ್ದು 50 ಸ್ವಯಂ ಸೇವಕರನ್ನು 25 ತಂಡಗಳಾಗಿ ಪರಿವರ್ತಿಸಿ 4 ದಿನಗಳ ಕಾಲ ಬೈನಾಕುಲರ್ ಮತ್ತು ಕ್ಯಾಮರಾದ ಸಹಾಯದಿಂದ ಪಕ್ಷಿಗಳನ್ನು ಕಂಡು ಚಿತ್ರ ಸೆರೆಹಿಡಿದು ವೈಜ್ಞಾನಿಕವಾಗಿ ಗಣತಿ ಕಾರ್ಯ ನಡೆಸಿದ್ದಾರೆ.
ಪಕ್ಷಿ ಕಾಣಿಸಿಕೊಂಡ ಸ್ಥಳ, ಪರಿಸರವನ್ನು ದಾಖಲು ಮಾಡಲಾಗಿದೆ. ಮೊದಲಿಗೆ ಅರಣ್ಯ ಇಲಾಖೆಯ ಗೇಮ್ ರಸ್ತೆ ಹಾಗೂ ಮುಖ್ಯರಸ್ತೆಗಳಲ್ಲಿ ಸಮೀಕ್ಷೆ ಮಾಡಲಾಗಿತ್ತು. ನಂತರ, ನೀರು ಇರುವ ಕಡೆಗಳಲ್ಲಿ, ಕಾಡಿನೊಳಗೆ ಸಮೀಕ್ಷಾ ಕಾರ್ಯ ನಡೆಸಲಾಗಿದೆ.

ದಾಂಡೇಲಿ ಅರಣ್ಯ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುವ ದಿ ಗ್ರೇಟ್ ಹಾರ್ನ್ ಬಿಲ್ ಬಹಳ ವರ್ಷಗಳ ಬಳಿಕ ಬಿಳಿಗಿರಿ ಬನದಲ್ಲಿ ಕಂಡಿದೆ. ವಲಸೆ ಪಕ್ಷಿಗಳಾದ ನಾದರ್ನ್ ಶೆವೆಲರ್ (Northern Shoveler) ಹಾಗೂ ನಾದರ್ನ್ ಪಿನ್ಟೇಲ್ (Nothren Pintail) ಪಕ್ಷಿಗಳು ಇದೇ ಮೊದಲ ಬಾರಿ ಗಣತಿಯಲ್ಲಿ ಕಂಡಿದೆ.
ಭಾನುವಾರ ನಡೆದ ಹಕ್ಕಿ ಗಣತಿ ಸಮಾರೋಪ ಸಮಾರಂಭದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್, ವನ್ಯಜೀವಿ ಮಂಡಲಿ ಸದಸ್ಯ ಮಲ್ಲೇಶಪ್ಪ ಪಾಲ್ಗೊಂಡು ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ವಿತರಿಸಿ, ಬಿಳಿಗಿರಿ ಬನದ ವೈವಿಧ್ಯತೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications