ವಿಪ್ರೋಗೆ ನಿರೀಕ್ಷೆಗೆ ತಕ್ಕ ಲಾಭ, ರಿಷಬ್ ಗೆ ಉನ್ನತ ಸ್ಥಾನ
ಬೆಂಗಳೂರು, ಏ.22: ವಿಪ್ರೋ ನಾಲ್ಕನೇ ತ್ತೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ನಿರೀಕ್ಷೆಗೆ ತಕ್ಕ ಲಾಭ ಪಡೆದುಕೊಂಡಿದೆ. ಮಾ.31ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸಂಸ್ಥೆಗೆ ಸುಮಾರು 2,272 ಕೋಟಿ ರು ನಿವ್ವಳ ಲಾಭ ಸಿಕ್ಕಿದೆ. ಸಂಸ್ಥೆಯ ಆದಾಯ ಶೇ 0.7ರಷ್ಟು ಏರಿಕೆ ಕಂಡಿದೆ.
ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಆದಾಯ ತುಸು ಹೆಚ್ಚಿದ್ದು, ಒಟ್ಟಾರೆ ಆದಾಯ 12,142 ಕೋಟಿ ರು ಬಂದಿದೆ. ನಿರೀಕ್ಷಿತ ಮಟ್ಟದಲ್ಲೇ ಡಾಲರ್ ಅದಾಯ ಬಂದಿದೆ. 1774.5 ಮಿಲಿಯನ್ ಡಾಲರ್ ನಷ್ಟಿದೆ. [ಟಿಸಿಎಸ್ ಹಿರಿಯ ಉದ್ಯೋಗಿ ಈಗ ವಿಪ್ರೋ ಸಿಒಒ]
ಇನ್ಫೋಸಿಸ್ (0.8%) ಹಾಗೂ ಟಿಸಿಎಸ್ ಡಾಲರ್ ಆದಾಯ ಪ್ರಗತಿಗೆ ಹೋಲಿಸಿದರೆ ವಿಪ್ರೋ ಪ್ರಗತಿ ಶೇ 1.3ರಷ್ಟಿದ್ದು ಮುನ್ನಡೆ ಸಾಧಿಸಿದೆ.ಐಟಿ ಸೇವೆಯಲ್ಲಿ ಶೇ. 6ರಷ್ಟು ಪ್ರಗತಿಯಾಗಿದ್ದು, ನಿರ್ವಹಣಾ ಆದಾಯವು 2,477.7 ಕೋಟಿ ರೂ. ತಲುಪಿದೆ.

ಅಜೀಂ ಪ್ರೇಮ್ ಜಿ ಪುತ್ರ ಬೋರ್ಡಿಗೆ: ವಿಪ್ರೋ ದಿಗ್ಗಜ ಅಜೀಂ ಪ್ರೇಂಜಿ ಅವರ ಪುತ್ರ ರಿಷಬ್ ಅಜೀಮ್ ಪ್ರೇಂಜಿ ಅವರನ್ನು ಫುಲ್ ಟೈಂ ಸಂಸ್ಥೆಯ ನಿರ್ದೇಶಕರಾಗಿ ನೇಮಿಸಲಾಗಿದೆ. ಮೇ.1.2015ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಸಿಇಒ ಟಿ.ಕೆ ಕುರಿಯನ್ ಹೇಳಿದರು.['ಅನಂದ' ಕಳೆದುಕೊಂಡ ವಿಪ್ರೋ ಸಂಸ್ಥೆ ]
ವೆಸ್ಲಿಯಾನ್ ವಿವಿಯಲ್ಲಿ ಎಕಾನಾಮಿಕ್ಸ್ ಪದವಿ, ಹಾರ್ವರ್ಡ್ ವಿವಿಯಿಂದ ಎಂಬಿಎ ಪಡೆದಿರುವ ರಿಷಬ್ 2007ರಲ್ಲಿ ವಿಪ್ರೋ ಸೇರಿದರು. ಬಿಸಿನೆಸ್ ಮ್ಯಾನೇಜರ್, ಬ್ಯಾಂಕಿಂಗ್ ವಿಭಾಗದ ಹೊಣೆ ಹೊತ್ತಿದ್ದ ರಿಷಬ್ ನಂತರ ಮುಖ್ಯ ತಾಂತ್ರಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ವಿಪ್ರೋ ಸೇರುವ ಮೊದಲು ಜಿಇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ವಿಪ್ರೋ ಸಂಸ್ಥೆಯಲ್ಲಿ ಅಜೀಂ ಪ್ರೇಂಜಿ ಅವರು ಶೇ 73.39ರಷ್ಟು ಪಾಲು ಹೊಂದಿದ್ದು, ಪ್ರೇಂಜಿ ಅವರ ಸ್ಥಾನವನ್ನು ಮಗ ರಿಷಬ್ ತುಂಬಲಿದ್ದಾರೆ.
ಆಟ್ರೀಷನ್ ದರ: ಶೇ 16.5ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಆಟ್ರೀಷನ್ ದರ ಇಳಿಕೆಯಾಗಿದ್ದು, ಸಂಸ್ಥೆಗೆ ಶುಭ ಸೂಚನೆಯಾಗಿದೆ. (ಒನ್ ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications